masthmagaa.com:
ದೇಶದಲ್ಲಿ ನರಬಲಿ ಪ್ರಕರಣಗಳು ಮತ್ತೆ ವರದಿಯಾಗಿವೆ. ಇದೀಗ ಉತ್ತರ ಪ್ರದೇಶದಲ್ಲಿ 10 ವರ್ಷದ ಹುಡುಗನನ್ನ ಅವರ ಸಂಬಂಧಿಕರೇ ಬಲಿ ಕೊಟ್ಟಿದ್ದಾರೆ. ಲಕ್ನೋ ಬಳಿಯ ಗ್ರಾಮವೊಂದರಲ್ಲಿ ವಿವೇಕ್ ಅನ್ನೋ 10 ವರ್ಷದ ಹುಡುಗನನ್ನ ಅನೂಪ್ ಅನ್ನೋ ಸಂಬಂಧಿ ನರಬಲಿ ಕೊಟ್ಟಿದ್ದಾನೆ. ಅನೂಪ್ ಮಾನಸಿಕ ಅಸ್ವಸ್ತತೆಯಿಂದ ಬಳಲ್ತಾ ಇದ್ನಂತೆ. ಅಸ್ಪತ್ರೆಗೆ ಹೋಗಿ ಬಂದ್ರೂ ಕೂಡ ಆತ ಗುಣಮುಖನಾಗಿರಲಿಲ್ಲವಂತೆ. ಹೀಗಾಗಿ ಆತ ವಾಮಾಚಾರದ ಮೊರೆಹೋಗಿದ್ದಾನೆ. ಅಲ್ಲಿ ಈ ಉಪದೇಶ ಸಿಕ್ಕಿದ್ದು ತನ್ನ ಸಂಬಂಧಿಯ ಮಗನನ್ನೇ ಕೊಂದಿದ್ದಾನೆ.
-masthmagaa.com
Contact Us for Advertisement