masthmagaa.com:
ನಿನ್ನೆ ಜಮ್ಮು ಕಾಶ್ಮೀರದಲ್ಲಿ ಮತ್ತೆ ಇಬ್ಬರು ನಾಗರಿಕರನ್ನು ಹತ್ಯೆ ಮಾಡಲಾಗಿದೆ. ಈ ಮೂಲಕ ಇತ್ತೀಚೆಗೆ ಉಗ್ರರ ದಾಳಿಗೆ ಬಲಿಯಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ನಿನ್ನೆ ಹತ್ಯೆಯಾದ ಇಬ್ಬರೂ ಹೊರ ರಾಜ್ಯದವರೇ ಆಗಿರೋದು ಗಮನಿಸಬೇಕಾದ ವಿಚಾರ.. ಅರ್ಬಿಂದ್ ಕುಮಾರ್ ಶಾ ಶ್ರೀನಗರದ ಈದ್ಗಾ ಏರಿಯಾದ ಪಾರ್ಕ್ ಹೊರಭಾಗದಲ್ಲಿ ಗೋಲ್ಗಪ್ಪಾ ಮಾರಿಕೊಂಡಿದ್ರು. ಬಿಹಾರದ ಬಂಕಾ ಜಿಲ್ಲೆಯವರಾದ ಇವರದ್ದು ಬಡಕುಟುಂಬವಾಗಿದ್ದು, ಪ್ರತಿ ತಿಂಗಳು ದುಡ್ಡು ಕಳುಹಿಸ್ತಿದ್ರು. ಆದ್ರೀಗ ಅವರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಉತ್ತರ ಪ್ರದೇಶ ಮೂಲದ ಸಾಗಿರ್ ಅಹ್ಮದ್ ಅನ್ನೋರನ್ನ ಹತ್ಯೆ ಮಾಡಲಾಗಿದೆ. ಕಾರ್ಪೆಂಟರ್ ಆಗಿದ್ದ ಇವರು ಬಡತನ ಹಿನ್ನೆಲೆಯಲ್ಲಿ ಒಂದೂವರೆ ವರ್ಷ ಹಿಂದೆ ಪುಲ್ವಾಮಾಗೆ ಬಂದಿದ್ರು. ಆದ್ರೀಗ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಬೇಕು ಅಂತ ಸಾಗಿರ್ ಅಹ್ಮದ್ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಅದ್ರ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳು ಸಾಗಿರ್ ಅಹ್ಮದ್ ಮನೆಗೆ ಭೇಟಿ ನೀಡಿದ್ದು, ಎಲ್ಲಾ ರೀತಿಯ ನೆರವು ನೀಡೋದಾಗಿ ಭರವಸೆ ನೀಡಿದ್ದಾರೆ.
-masthmagaa.com
Contact Us for Advertisement