masthmagaa.com:
ಜಮ್ಮು-ಕಾಶ್ಮೀರದ ಶ್ರೀನಗರ ಹೊರವಲಯದಲ್ಲಿ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಕಾರಿನಲ್ಲಿ ಬಂದ ಮೂವರು ಉಗ್ರರು ಗಸ್ತು ತಿರುಗುತ್ತಿದ್ದ ತಂಡದ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ರು. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.
ʻಮೂವರು ಉಗ್ರರಲ್ಲಿ ಬಹುಶಃ ಇಬ್ಬರು ಪಾಕಿಸ್ತಾನಿ ಹಾಗೂ ಓರ್ವ ಸ್ಥಳೀಯನಿರಬಹುದು. ಘಟನೆ ನಡೆದ ಸ್ಥಳದಲ್ಲಿ ಜೈಷ್ ಉಗ್ರ ಸಂಘಟನೆ ಹೆಚ್ಚು ಸಕ್ರಿಯವಾಗಿದೆ. ಸಂಜೆಯೊಳಗೆ ದಾಳಿ ನಡೆಸಿದ ಗುಂಪನ್ನು ಪತ್ತೆ ಹಚ್ಚುತ್ತೇವೆʼ ಅಂತ ಕಾಶ್ಮೀರ ಐಜಿ ತಿಳಿಸಿದ್ದಾರೆ.
-masthmagaa.com
Contact Us for Advertisement