masthmagaa.com:
ಬೆಂಗಳೂರಿನ ಖಾಸಗಿ ಕಾಲೇಜ್ವೊಂದರ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ್ ಪರ ಘೋಷಣೆಗಳನ್ನ ಕೂಗಿದ್ದು ಅವರನ್ನ ವಶಕ್ಕೆ ಪಡೆಯಲಾಗಿದೆ. ಈ ವಿಷಯವಾಗಿ ನಟ ಚೇತನ್ ಟ್ವೀಟ್ ಮಾಡಿ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಚೇತನ್ ಈ ವಿದ್ಯಾರ್ಥಿಗಳ ಪರವಾಗಿ ಟ್ವೀಟ್ ಮಾಡಿದ್ದಾರೆ. ಆರ್ಯನ್, ದಿನಕರ್, ರಿಯಾ ರವಿಚಂದ್ರ ಕಾಮೇಡ್ಕರ್ ಅನ್ನೊ ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿದ್ದು ತಮಾಷೆಗಾಗಿ. ಈ ಕಾರಣಕ್ಕಾಗಿ ಅವ್ರನ್ನ ಥಳಿಸಿ, ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದು ಅಸಂಬಂದ್ಧ ಹಾಗೂ ಅಪಾಯಕಾರಿ ಅಂತ ಹೇಳಿದ್ದಾರೆ. ಜೊತೆಗೆ ಪಾಕಿಸ್ತಾನದ ಜನ ನಮ್ಮ ಸಹೋದರಿ, ಸಹೋದರರು, ನಮ್ಮ ಶತ್ರುಗಳಲ್ಲ. ವಾಕ್ ಸ್ವಾತಂತ್ರ್ಯವನ್ನ ನಾವು ಎತ್ತಿ ಹಿಡಿಯಬೇಕು ಅಂತ ಟ್ವೀಟ್ನಲ್ಲಿ ಬರೆಯುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
-masthmagaa.com
Contact Us for Advertisement