masthmagaa.com:
ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಏಳುತ್ತಿರೋ ಹಿನ್ನೆಲೆ ಥಿಯೇಟರ್ನಲ್ಲಿ 50 ಪರ್ಸೆಂಟ್ ಸೀಟ್ ಭರ್ತಿಗೆ ಮಾತ್ರ ಅವಕಾಶ ಅನ್ನೋ ನಿಯಮ ಮತ್ತೆ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇದರ ಬೆನ್ನಲ್ಲೇ ಮಾತನಾಡಿರೋ ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್, ‘ಥಿಯೇಟರ್ಗಳನ್ನ ಸಂಪೂರ್ಣವಾಗಿ ಭರ್ತಿ ಮಾಡಲು ದಯವಿಟ್ಟು ಅವಕಾಶ ಕೊಡಬೇಕು. 50% ಸೀಟ್ಗಳನ್ನ ಮಾತ್ರ ಭರ್ತಿ ಮಾಡುವ ನಿರ್ಬಂಧ ಜಾರಿಗೆ ತರಬಾರದು’ ಎಂದಿದ್ದಾರೆ. ಅಲ್ಲದೆ, ಈಗಷ್ಟೇ ಸಿನಿಮಾ ಇಂಡಸ್ಟ್ರಿ ಸೇರಿದಂತೆ ಎಲ್ಲಾ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿವೆ. ನನ್ನ ಪ್ರಕಾರ ಹೇಳೋದಾದ್ರೆ, ನಮ್ಮ ಮತ್ತು ನಮ್ಮವರ ಜೀವ ಮುಖ್ಯ ಹೌದು. ಆದ್ರೆ ಈ ನಿರ್ಬಂಧಗಳನ್ನ ಮೊದಲೇ ಸಭೆ, ಸಮಾರಂಭಗಳು, ಚುನಾವಣೆ ಪ್ರಚಾರದ ಮೇಲೆ ಹೇರಬೇಕಿತ್ತು. ಥಿಯೇಟರ್ಗಳಲ್ಲಿ ಎಲ್ಲವೂ ಚೆನ್ನಾಗಿದೆ. ಮಾಸ್ಕ್ ಧರಿಸೋದು, ಕೈಗಳನ್ನ ಸ್ಯಾನಿಟೈಸ್ ಮಾಡೋದು ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ದಯವಿಟ್ಟು ಥಿಯೇಟರ್ಗಳಿಗೆ 100% ಸೀಟು ಭರ್ತಿಗೆ ಅವಕಾಶ ಕೊಡಬೇಕು ಅಂತ ಹೇಳಿದ್ದಾರೆ. ಏಪ್ರಿಲ್ 1ನೇ ತಾರೀಖು ಪುನೀತ್ ನಟನೆಯ, ಬಹುನಿರೀಕ್ಷಿತ ‘ಯುವರತ್ನ’ ಸಿನಿಮಾ ರಿಲೀಸ್ ಆಗ್ತಿದೆ.
ಇನ್ನು ನೆನಪಿರಲಿ ಪ್ರೇಮ್ ಮಾತನಾಡಿ, ‘ಯಾವಾಗಲೂ ಸಿನಿಮಾ ಇಂಡಸ್ಟ್ರಿಯನ್ನ ಮಾತ್ರ ಯಾಕೆ ಟಾರ್ಗೆಟ್ ಮಾಡಲಾಗುತ್ತೆ? ಬಸ್, ರೈಲುಗಳಲ್ಲಿ ಪ್ರಯಾಣಿಕರು ಕೂರೋದಿಲ್ವಾ? ಪಬ್ಗಳಲ್ಲಿ ಮೈಗೆ ಮೈ ಅಂಟಿಸಿಕೊಂಡು ಇರೋದಿಲ್ವಾ? ಮತ್ಯಾಕೆ ಥಿಯೇಟರ್ಗಳಿಗೆ ಮಾತ್ರ ಈ ನಿಯಮ? ಎಲ್ಲರಿಗೂ ಲಸಿಕೆ ಕೊಡಿ. ಅದನ್ನ ಬಿಟ್ಟು ಇಂಥಾ ನಿರ್ಬಂಧಗಳನ್ನ ಜಾರಿಗೆ ತರಬೇಡಿ. ಒಂದು ವರ್ಷ ಸಿನಿಮಾ ಕ್ಷೇತ್ರ ಬಂದಾಗಿ ಸಾಕಷ್ಟು ನಷ್ಟವಾಗಿದೆ’ ಅಂತ ಹೇಳಿದ್ದಾರೆ
-masthmagaa.com
Contact Us for Advertisement