masthmagaa.com:
ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಮಯನ್ಮಾರ್ನಿಂದ ಬಂದ ರೊಹಿಂಗ್ಯಾ ನಿರಾಶ್ರಿತರನ್ನ ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಶಿಫ್ಟ್ ಮಾಡಲು ನಿರ್ಧರಿಸಿದ್ದು, ಅವರಿಗೆ ಪಶ್ಚಿಮ ದೆಹಲಿಯ ಬಕ್ಕರ್ವಾಲಾದಲ್ಲಿ ಫ್ಲಾಟ್ ನೀಡಲಾಗುವುದು ಮತ್ತು ಭದ್ರತೆಯನ್ನ ಕೊಡೋದಾಗಿ ಘೋಷಿಸಿ ಟ್ವೀಟ್ ಮಾಡಿದ್ರು. ಆದ್ರೆ ಅದಾದ ಕೆಲವು ಗಂಟೆಗಳ ನಂತ್ರ ಗೃಹಸಚಿವಾಲಯ ಅಂತಹ ಯಾವುದೇ ಸೌಲಭ್ಯಗಳನ್ನ ಕೊಡೋದಿಲ್ಲ. ಸರ್ಕಾರ ಈ ಹೇಳಿಕೆಯನ್ನ ವಿರೋಧಿಸುತ್ತೆ. ರೋಹಿಂಗ್ಯಾ ಅಕ್ರಮ ವಿದೇಶಿಯರು. ಅಕ್ರಮ ವಿದೇಶಿಯರನ್ನು ಕಾನೂನು ಮೂಲಕ ದೇಶದಿಂದ ಗಡಿಪಾರು ಮಾಡುವ ವರಗೆ ಅವರನ್ನು ಬಂಧನದಲ್ಲೇ ಇರಿಸಲಾಗುವುದು ಎಂದಿದೆ ಅಂತ ಹೇಳಿ ಉಲ್ಟಾ ಹೊಡೆದಿದೆ.
-masthmagaa.com
Contact Us for Advertisement