ಯಶ್ ಗೆ ಕ್ಷಮೆ ಕೇಳಿದ ಅಮೀರ್ ಖಾನ್: ಪಟ್ಟುಬಿಡದ ಕೆಜಿಎಫ್ ತಂಡ!

masthmagaa.com:

ಅಮೀರ್‌ ಖಾನ್ ಸಿನಿಮಾಗೆ ಭಾರತ ಸೇರಿ, ವಿಶ್ವದಾದ್ಯಂತ ಪ್ರೇಕ್ಷಕರು ಕಾಯ್ತಾ ಇರ್ತಾರೆ . ಬಾಲಿವುಡ್‌ನ ಪರ್ಫೆಕ್ಷನಿಸ್ಟ್ ಅಂತಲೇ ಹೆಸರಾದ ಅಮೀರ್‌ ಖಾನ್ ಈಗ  ನಮ್ಮ ರಾಕಿಂಗ್‌ ಬಾಯ್‌ಗೆ ಸಲಾಂ ಅಂದಿದ್ದಾರೆ. ನಾನೂ ಕೂಡ ಯಶ್‌ ಅವರ ಅಭಿಮಾನಿ. ಯಶ್ ಅವರ ಕೆಜಿಎಫ್‌ 2 ಸಿನಿಮಾವನ್ನು ಮೊದಲ ದಿನವೇ ನೋಡ್ತೀನಿ, ಅದೇ ಥರ ಸಿನಿಮಾಕ್ಕೆ ಪ್ರಚಾರವನ್ನೂ ಕೊಡ್ತೀನಿ ಅಂತ ಅಮೀರ್‌ ಹೇಳಿದ್ದಾರೆ. ಇಷ್ಟು ಮಾತ್ರ ಅಲ್ಲ, ಅಮೀರ್‌ಖಾನ್‌ ಈ ವಿಚಾರವನ್ನು ಯಶ್‌ ಅವರ ಬಳಿಯೂ ಹೇಳಿದ್ದಾರೆ. ಸುಮಾರು ಹೊತ್ತು ಯಶ್‌ ಜೊತೆಗೆ ಈ ಬಗ್ಗೆ ಮಾತಾಡಿದ್ದಾರಂತೆ.

 ಕೆಜಿಎಫ್‌ 2 ಬಿಡುಗಡೆಯಾಗುವ ದಿನವೇ ಅಮೀರ್‌ ಖಾನ್‌ ನಟನೆಯ ‘ಲಾಲ್‌ಸಿಂಗ್‌ ಛಡ್ಡಾ’ ಚಿತ್ರಕೂಡ ಬಿಡುಗಡೆ ಆಗ್ತಾ ಇದೆ. ಇದೇ ವಿಚಾರಕ್ಕೆ ಅಮೀರ್‌ ಖಾನ್‌ಗೆ ಕೊಂಚ ಗೊಂದಲ ಶುರುವಾದಂತಿದೆ. ಹೀಗಾಗಿಯೇ ಅವರು ಕೆಜಿಎಫ್‌ 2 ಬಿಡುಗಡೆ ದಿನಾಂಕ ಮುಂದೂಡಲು ಸಾಧ್ಯವೇ ಎಂದು ಚಿತ್ರತಂಡದ ಜೊತೆಗೆ ಚರ್ಚೆ ಮಾಡಿದ್ದಾರೆ ಎಂಬ ವದಂತಿ ಹರಿದಾಡುತ್ತಾ ಇದೆ.

ಜೊತೆಗೆ ಅದೇ ದಿನ ತನ್ನ ಸಿನಿಮಾ ಯಾಕೆ ರಿಲೀಸ್‌ ಮಾಡಬೇಕು ಅನ್ನೋದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ‘ಲಾಲ್‌ ಸಿಂಗ್ ಛಡ್ಡಾ’ದಲ್ಲಿ ಮೊದಲ ಬಾರಿ ಸಿಖ್ಖ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಬೈಸಾಕಿಯ ದಿನ ಸಿಖ್ಖರಿಗೆ ಬಹಳ ವಿಶೇಷ. ಹೀಗಾಗಿ ಆ ಒಳ್ಳೆಯ ದಿನವೇ ಚಿತ್ರ ಬಿಡುಗಡೆ ಮಾಡಬೇಕು ಅಂದುಕೊಂಡು ಬಿಡುಗಡೆ ಮಾಡ್ತಾ ಇದ್ದೇವೆ ಅಷ್ಟೇ. ಅದು ಬಿಟ್ಟು ನಮಗಿಂತ ಮೊದಲೇ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿರುವ ಕೆಜಿಎಫ್ ಚಿತ್ರತಂಡಕ್ಕೆ ಎದುರಾಗಿ ಚಿತ್ರ ಬಿಡುಗಡೆ ಮಾಡುವ ಉದ್ದೇಶ ಇಲ್ಲ. ಈ ನಮ್ಮ ನಡೆಯಿಂದ ಯಶ್ ಮತ್ತು ಚಿತ್ರ ತಂಡಕ್ಕೆ ಬೇಸರವಾಗಿದ್ದರೆ ಕ್ಷಮೆಯಿರಲಿ ಎಂದು ಅಮೀರ್ ಖಾನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಮೀರ್ ಖಾನ್ ಇಷ್ಟೆಲ್ಲ ಪ್ರಯತ್ನ ಮಾಡಿದರೂ ಕೆಜಿಎಫ್‌ ಟೀಮ್ ಮಾತ್ರ ತನ್ನ ಬಿಡುಗಡೆ ದಿನಾಂಕವನ್ನ ಮುಂದೂಡಿದಂತಿಲ್ಲ. ಬದಲಿಗೆ ಕೆಜಿಎಫ್ ಆಕ್ಷನ್ ಚಿತ್ರ. ಅದಕ್ಕೆ ಅದರದೇ ಅಭಿಮಾನಿ ಬಳಗವಿದೆ. ಲಾಲ್‌ಸಿಂಗ್ ಛಡ್ಡಾ ಫ್ಯಾಮಿಲಿ ಡ್ರಾಮ. ಇದಕ್ಕಿರುವ ಆಡಿಯನ್ಸ್ ಬೇರೆ. ಹೀಗಾಗಿ ಎಲ್ಲೂ ಕ್ಲಾಶ್ ಆಗಲ್ಲ ಅಂತ ಅಮೀರ್‌ ಅವರಿಗೇ ಕನ್ವಿನ್ಸ್ ಮಾಡಿದಂತಿದೆ. ಬುದ್ಧಿವಂತ ನಟ ಇದರಿಂದ ಕನ್ವಿನ್ಸ್ ಆದಂತಿದೆ. ಜೊತೆಗೆ ಯಶ್ ಅಭಿಮಾನಿಗಳನ್ನು ಎದುರು ಹಾಕಿಕೊಳ್ಳದೇ ಅವರನ್ನೂ ಒಲಿಸಿಕೊಳ್ಳುವ ಪ್ರಯತ್ನ ಚಾಲ್ತಿಯಲ್ಲಿದೆ.

-masthmagaa.com

Contact Us for Advertisement

Leave a Reply