masthmagaa.com:
ಬಾಲಿವುಡ್ ನಟ ಆಮಿರ್ ಖಾನ್ ಅಭಿನಯದ ಸಿಯೆಟ್ ಟಯರ್ ಕಂಪನಿಯ ಜಾಹೀರಾತೊಂದು ಈಗ ಭಾರಿ ಸಂಚಲನ ಉಂಟು ಮಾಡಿದೆ. ಇದ್ರಲ್ಲಿ ದೀಪಾವಳಿ ಸಂದರ್ಭದಲ್ಲಿ ರಸ್ತೆಯಲ್ಲೆಲ್ಲಾ ಪಟಾಕಿ ಹೊಡೆಯಬೇಡಿ ಅಂತ ಆಮಿರ್ ಖಾನ್ ಹಿಂದೂಗಳಿಗೆ ಹೇಳುವಂತೆ ಬಿಂಬಿಸಲಾಗಿದೆ.
ಇದ್ರ ಬೆನ್ನಲ್ಲೇ ಸಿಯೆಟ್ ಟಯರ್ ಕಂಪನಿಯ ಎಂ.ಡಿ, ಸಿಇಒ ಆಗಿರೋ ಅನಂತ್ ವರ್ಧನ್ ಗೋಯೆಂಕಾಗೆ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಪತ್ರ ಬರೆದಿದ್ದಾರೆ. ಪರಿಸರದ ಬಗ್ಗೆ ನಿಮ್ಮ ಕಳಕಳಿ ಅಭಿನಂದನೀಯ. ಆದ್ರೆ ಇದ್ರಲ್ಲಿ ಕೇವಲ ಹಿಂದೂಗಳ ಹಬ್ಬವನ್ನು ಮಾತ್ರ ಟಾರ್ಗೆಟ್ ಮಾಡಲಾಗಿದೆ. ಇದರಿಂದ ಹಿಂದೂ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಬಹುದು. ಮಸೀದಿಗಳಲ್ಲಿ ಪ್ರಾರ್ಥನೆ ವೇಳೆ ಶಬ್ದಮಾಲಿನ್ಯ ಉಂಟಾಗುತ್ತೆ. ಶುಕ್ರವಾರ ರಸ್ತೆಗಳನ್ನೆಲ್ಲಾ ಬ್ಲಾಕ್ ಮಾಡುತ್ತಾರೆ. ಆದ್ರೆ ಹಿಂದೂ ವಿರೋಧಿ ನಟರು ತಮ್ಮ ಸಮುದಾಯದ ಕೆಡುಕುಗಳ ಬಗ್ಗೆ ಮಾತನಾಡೋದಿಲ್ಲ. ಆದ್ರೆ ಕಂಪನಿಯ ಮಾಲೀಕರಾಗಿರೋ ನೀವು ಒಬ್ಬ ಹಿಂದೂ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಜಾಗೃತಿ ವಹಿಸುತ್ತೀರಿ ಅಂತ ನಂಬಿದ್ದೀನಿ ಅಂತ ಬರೆದಿದ್ದಾರೆ.
ಇನ್ನು ಈ ಸಂಬಂಧ ಮತ್ತೊಮ್ಮೆ ಬಾಯ್ಕಾಟ್ ಅಮೀರ್ ಖಾನ್ ಅನ್ನೋ ಸೋಷಿಯಲ್ ಮೀಡಿಯಾ ಅಭಿಯಾನವನ್ನ ಕೂಡ ನಡೆಸಲಾಗಿದೆ. ಈ ಹಿಂದೆ ಭಾರತದಲ್ಲಿರೋಕೆ ನನಗೆ ಭಯವಾಗುತ್ತೆ ಅಂತ ತನ್ನ ಪತ್ನಿ ಕಿರಣ್ ಹೇಳಿದ್ದಳು ಅಂತ ಅಸಹಿಷ್ಣುತೆ ವಿಚಾರವಾಗಿ ಆಮೀರ್ ಖಾನ್ ಹೇಳಿಕೆ ಕೊಟ್ಟಾಗಲೂ ಇದೇ ರೀತಿಯಾಗಿತ್ತು. ಆಗ ಸ್ನಾಪ್ಡೀಪ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಆಮೀರ್ ಖಾನ್ರನ್ನು ತೆಗೆದು ಹಾಕಲಾಗಿತ್ತು.
-masthmagaa.com
Contact Us for Advertisement