masthmagaa.com:

ಬಾಲಿವುಡ್​ ನಟಿ ಕಂಗನಾ ರನಾವತ್​ಗೆ Y+ ಶ್ರೇಣಿಯ ಭದ್ರತೆ ನೀಡಿದ್ದಕ್ಕೆ ಮಹಾರಾಷ್ಟ್ರ ಸರ್ಕಾರ ಉರಿದುಬಿದ್ದಿದೆ. ಈ ಬಗ್ಗೆ ಮಾತನಾಡಿರೋ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್, ‘ಮುಂಬೈ ಮತ್ತು ಮಹಾರಾಷ್ಟ್ರಕ್ಕೆ ಅವಮಾನಿಸಿದವರಿಗೆ ಕೇಂದ್ರ ಸರ್ಕಾರ Y+ ಕೆಟಗರಿ ಭದ್ರತೆ ನೀಡಿರುವುದು ಆಶ್ಚರ್ಯ ಮತ್ತು ದುಃಖದ ವಿಚಾರ’ ಎಂದಿದ್ದಾರೆ.

‘ಮಹಾರಾಷ್ಟ್ರ ಅನ್ನೋದು ಕೇವಲ ಶಿವಸೇನೆ, ಎನ್​ಸಿಪಿ ಅಥವಾ ಕಾಂಗ್ರೆಸ್​ನದ್ದು ಅಲ್ಲ. ಅದು ಬಿಜೆಪಿ ಮತ್ತು ರಾಜ್ಯದ ಜನರಿಗೆ ಸೇರಿದ್ದು. ಹೀಗಾಗಿ ಮಹಾರಾಷ್ಟ್ರವನ್ನು ಅವಮಾನಿಸಿದರೆ ಅದನ್ನು ಎಲ್ಲರೂ ಖಂಡಿಸಬೇಕು’ ಅಂತ ಹೇಳಿದ್ದಾರೆ.

ಇತ್ತೀಚೆಗೆ ಕಂಗನಾ ರನಾವತ್ ಮುಂಬೈ ಮಹಾನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಅನಿಲ್ ದೇಶ್​ಮುಖ್​, ಮುಂಬೈಗೆ ಕಾಲಿಡಲು ಕಂಗನಾಗೆ ಅರ್ಹತೆ ಇಲ್ಲ ಅಂತ ಹೇಳಿದ್ದರು. ಇದಲ್ಲದೆ ಬಾಲಿವುಡ್​ ಡ್ರಗ್ ಮಾಫಿಯಾ ಬಗ್ಗೆ ಮಾತನಾಡಿದ್ದಕ್ಕೆ ಕಂಗನಾಗೆ ಹಲವು ಬೆದರಿಕೆ ಕರೆಗಳು ಬಂದಿದ್ದವು. ಈ ಹಿನ್ನೆಲೆ ಕೇಂದ್ರ ಸರ್ಕಾರ Y+ ಶ್ರೇಣಿಯ ಭದ್ರತೆ ನೀಡಿದೆ. ಸೆಪ್ಟೆಂಬರ್ 9ರಂದು ಕಂಗನಾ ರನಾವತ್ ಮುಂಬೈಗೆ ಆಗಮಿಸಲಿದ್ದಾರೆ.

-masthmagaa.com

Contact Us for Advertisement

Leave a Reply