masthmagaa.com:
ಕನ್ನಡದ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ಕುಮಾರ್ ಅವರ ಹೆಸರಿನಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಆಂಬ್ಯುಲೆನ್ಸ್ ಸೇವೆ ನೀಡೋಕೆ ನಟ ಪ್ರಕಾಶ್ ರೈ ಮುಂದಾಗಿದ್ದಾರೆ. ಇದಕ್ಕೆ ದೊಡ್ಮನೆ ಕುಟುಂಬ ಕೂಡ ಸಾಥ್ ನೀಡಿದ್ದು, ಶಿವರಾಜ್ಕುಮಾರ್ ಫ್ಯಾಮಿಲಿಯಿಂದ ಒಂದು ಆಂಬ್ಯುಲೆನ್ಸ್ ನೀಡಿದ್ದಾರೆ. ಇದೇ ರೀತಿ ಮೆಗಾ ಸ್ಟಾರ್ ಚಿರಂಜೀವಿ, ಕಾಲಿವುಡ್ ನಟ ಸೂರ್ಯ ಕೂಡ ಆಂಬ್ಯುಲೆನ್ಸ್ ನೀಡುವ ಮೂಲಕ ಸಾಥ್ ನೀಡಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿದ ಪ್ರಕಾಶ ರೈ, ಪುನೀತ್ ಬಗ್ಗೆ ಬರೀ ಮಾತಾಡೋದಲ್ಲ. ಏನಾದ್ರೂ ಮಾಡಬೇಕು ಅನ್ಕೊಂಡೆ. ಆವಾಗ ಅಪ್ಪು ಹೆಸರಿನ ಆಂಬ್ಯುಲೆನ್ಸ್ ಐಡಿಯಾ ಬಂತು ಇದಕ್ಕೆ ಅನೇಕ ಸ್ಟಾರ್ಗಳು ಕೈಜೋಡಿಸಿರೋದು ಶ್ಲಾಘನೀಯ. ಬಡವರಿಗೋಸ್ಕರ ಕರ್ನಾಟಕದಲ್ಲಿ ಅಪ್ಪು ಎಕ್ಸ್ಪ್ರೆಸ್ ಹೆಸರಿನ ಆಂಬ್ಯುಲೆನ್ಸ್ ಓಡಬೇಕು ಅನ್ನೋದು ನನ್ನ ಆಸೆ ಅಂತ ಹೇಳಿದ್ದಾರೆ. ಇನ್ನು ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡ ಸಾಥ್ ನೀಡಿದ್ದಾರೆ. ಈ ಬಗ್ಗೆ ಮಾತಾಡಿದ ಯಶ್, ನಂದು ಕೂಡ ಯಶೋಮಾರ್ಗ ಅನ್ನೋ ಫೌಂಡೇಶನ್ ಇದೆ. ಅದರ ಮೂಲಕ ಇನ್ನುಳಿದ 25 ರಿಂದ 26 ಜಿಲ್ಲೆಗಳಿಗೆ ಅಪ್ಪು ಹೆಸರಲ್ಲೇ ಆಂಬುಲೆನ್ಸ್ ಕೊಡ್ತೀನಿ, ಈಗಿಂದೀಗಲೇ ಅಪ್ಪು ಹೆಸರಿನಲ್ಲಿ ಆಗ್ತಾ ಇರೋ ಕೆಲ್ಸ ಜಾರಿಗೆ ಬರಬೇಕು ಅಂತ ಘೋಷಣೆ ಮಾಡಿದ್ರು. ಇನ್ನೊಂದ್ ಕಡೆ ಪುನೀತ್ ಪರ್ವ ಕಾರ್ಯಕ್ರಮವನ್ನ ನೋಡ್ತಿದ್ದ ಅಪ್ಪು ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರೊ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ. ಈತನನ್ನ ಗಿರಿರಾಜ್ ಅಂತ ಗುರುತಿಸಲಾಗಿದೆ.
-masthmagaa.com
Contact Us for Advertisement