masthmagaa.com:
ಪಾಕಿಸ್ತಾನದ ಪರಮಾಣು ಬಾಂಬ್ ಜನಕ ಅಬ್ದುಲ್ ಖಾದಿರ್ ಖಾನ್ ಮೊನ್ನೆ ಭಾನುವಾರ ಕೊರೋನಾ ಬಂದು ಸಾವನ್ನಪ್ಪಿದ್ರು. ಆದ್ರೀಗ ಅವರ ಬಗ್ಗೆ ಇಸ್ರೇಲ್ನ ಸಂಶೋಧಕ ಪತ್ರಕರ್ತ ಯೋಸ್ಸಿ ಮೆಲ್ಮನ್ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದಾರೆ. ಒಂದ್ವೇಳೆ ಅಬ್ದುಲ್ ಖಾದಿರ್ ಖಾನ್ ಪರಮಾಣು ಸ್ಫೋಟಕ ರೆಡಿ ಮಾಡ್ತಿದ್ದಾರೆ ಅಂತ ಮೊದಲೇ ಇಸ್ರೇಲ್ನ ಮೊಸಾದ್ಗೆ ಗೊತ್ತಿರಲಿಲ್ಲ. ಒಂದ್ವೇಳೆ ಗೊತ್ತಾಗಿದ್ದಿದ್ರೆ, ಆಗ ಮೊಸಾದ್ ಮುಖ್ಯಸ್ಥರಾಗಿದ್ದ ಶಬ್ಟೈ ಶವಿತ್, ಖಾದಿರ್ ಖಾನ್ ಹತ್ಯೆಗೆ ಮೊಸಾದ್ನ ಒಂದು ಟೀಂ ಕಳುಹಿಸ್ತಿದ್ರು ಅಂತ ಹೇಳಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದರಲ್ಲಿ ಲೇಖನ ಬರೆದಿರೋ ಯೋಸ್ಸಿ ಮೆಲ್ಮನ್, ಪಾಕಿಸ್ತಾನದ ಖಾದಿರ್ ಖಾನ್ ಪಾಕಿಸ್ತಾನವನ್ನು ಪರಮಾಣು ಶಕ್ತಿಯನ್ನಾಗಿ ಮಾಡಿದ್ರು. ಪರಮಾಣು ಸೀಕ್ರೆಟ್ ಕದ್ದು ಮಾರಾಟ ನಡೆಸಿದ್ರು. ಪರಮಾಣು ಕ್ಷೇತ್ರದಲ್ಲಿ ಇರಾನ್ಗೆ ಸಹಕರಿಸಿದ್ರು. ಲಿಬಿಯಾದ ಸರ್ವಾಧಿಕಾರಿಯಾಗಿದ್ದ ಮುವಮ್ಮರ್ ಗಢಾಫಿಗೂ ಪರಮಾಣು ಕಾರ್ಯಕ್ರಮದಲ್ಲಿ ಸಹಕರಿಸಿದ್ರು. ಈ ವೇಳೆ ಖಾದಿರ್ ಖಾನ್ ಮೇಲೆ ಇಸ್ರೇಲ್ನ ಮೊಸಾದ್ ಹದ್ದಿನ ಕಣ್ಣಿಟ್ಟಿತ್ತು. ಎಲ್ಲಿಗೆ ಹೋಗ್ತಾರೆ. ಎಲ್ಲಿಗೆ ಬರ್ತಾರೆ ಅಂತೆಲ್ಲಾ ಮಾನಿಟರ್ ಮಾಡ್ತಿತ್ತು. ಆದ್ರೆ ಖಾದಿರ್ ಖಾನ್ ಏನ್ ಮಾಡ್ತಿದ್ದಾರೆ ಅನ್ನೋದು ಗೊತ್ತಾಗಿರಲಿಲ್ಲ. ಹೀಗಾಗಿ ಅವರು ಮೊಸಾದ್ ಕೈಯಿಂದ ಬಚಾವಾದ್ರು ಅಂತ ಹೇಳಿದ್ದಾರೆ.
-masthmagaa.com
Contact Us for Advertisement