ಪಾಕಿಸ್ತಾನ ಪರಮಾಣು ಜನಕನ ಹತ್ಯೆಗೂ ಸಂಚು ನಡೆಸಿತ್ತಾ ಮೊಸಾದ್..?

masthmagaa.com:

ಪಾಕಿಸ್ತಾನದ ಪರಮಾಣು ಬಾಂಬ್ ಜನಕ ಅಬ್ದುಲ್ ಖಾದಿರ್ ಖಾನ್ ಮೊನ್ನೆ ಭಾನುವಾರ ಕೊರೋನಾ ಬಂದು ಸಾವನ್ನಪ್ಪಿದ್ರು. ಆದ್ರೀಗ ಅವರ ಬಗ್ಗೆ ಇಸ್ರೇಲ್​​ನ ಸಂಶೋಧಕ ಪತ್ರಕರ್ತ ಯೋಸ್ಸಿ ಮೆಲ್​ಮನ್​​​​ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದಾರೆ. ಒಂದ್ವೇಳೆ ಅಬ್ದುಲ್ ಖಾದಿರ್ ಖಾನ್ ಪರಮಾಣು ಸ್ಫೋಟಕ ರೆಡಿ ಮಾಡ್ತಿದ್ದಾರೆ ಅಂತ ಮೊದಲೇ ಇಸ್ರೇಲ್​​ನ ಮೊಸಾದ್​​ಗೆ ಗೊತ್ತಿರಲಿಲ್ಲ. ಒಂದ್ವೇಳೆ ಗೊತ್ತಾಗಿದ್ದಿದ್ರೆ, ಆಗ ಮೊಸಾದ್ ಮುಖ್ಯಸ್ಥರಾಗಿದ್ದ ಶಬ್ಟೈ ಶವಿತ್​​​​​​, ಖಾದಿರ್​ ಖಾನ್​​ ಹತ್ಯೆಗೆ ಮೊಸಾದ್​​ನ ಒಂದು ಟೀಂ ಕಳುಹಿಸ್ತಿದ್ರು ಅಂತ ಹೇಳಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದರಲ್ಲಿ ಲೇಖನ ಬರೆದಿರೋ ಯೋಸ್ಸಿ ಮೆಲ್​​ಮನ್​​, ಪಾಕಿಸ್ತಾನದ ಖಾದಿರ್​ ಖಾನ್​​​ ಪಾಕಿಸ್ತಾನವನ್ನು ಪರಮಾಣು ಶಕ್ತಿಯನ್ನಾಗಿ ಮಾಡಿದ್ರು. ಪರಮಾಣು ಸೀಕ್ರೆಟ್ ಕದ್ದು ಮಾರಾಟ ನಡೆಸಿದ್ರು. ಪರಮಾಣು ಕ್ಷೇತ್ರದಲ್ಲಿ ಇರಾನ್​ಗೆ ಸಹಕರಿಸಿದ್ರು. ಲಿಬಿಯಾದ ಸರ್ವಾಧಿಕಾರಿಯಾಗಿದ್ದ ಮುವಮ್ಮರ್ ಗಢಾಫಿಗೂ ಪರಮಾಣು ಕಾರ್ಯಕ್ರಮದಲ್ಲಿ ಸಹಕರಿಸಿದ್ರು. ಈ ವೇಳೆ ಖಾದಿರ್ ಖಾನ್ ಮೇಲೆ ಇಸ್ರೇಲ್​​ನ ಮೊಸಾದ್ ಹದ್ದಿನ ಕಣ್ಣಿಟ್ಟಿತ್ತು. ಎಲ್ಲಿಗೆ ಹೋಗ್ತಾರೆ. ಎಲ್ಲಿಗೆ ಬರ್ತಾರೆ ಅಂತೆಲ್ಲಾ ಮಾನಿಟರ್ ಮಾಡ್ತಿತ್ತು. ಆದ್ರೆ ಖಾದಿರ್ ಖಾನ್ ಏನ್ ಮಾಡ್ತಿದ್ದಾರೆ ಅನ್ನೋದು ಗೊತ್ತಾಗಿರಲಿಲ್ಲ. ಹೀಗಾಗಿ ಅವರು ಮೊಸಾದ್ ಕೈಯಿಂದ ಬಚಾವಾದ್ರು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply