ನನ್ನನ್ನು ಎನ್​​​ಸಿಬಿ ಅಧಿಕಾರಿಗಳು ಸಿಲುಕಿಸುತ್ತಿದ್ದಾರೆ: ಎನ್​​​ಸಿಬಿ

mastshmagaa.com:

ಮುಂಬೈ ಹಡಗಿನಲ್ಲಿ ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಮುಂಬೈ ಕೋರ್ಟ್​ ಜಾಮೀನು ನೀಡಲು ನಿರಾಕರಿಸಿದ ಬೆನ್ನಲ್ಲೇ ಆರ್ಯನ್ ಖಾನ್ ಬಾಂಬೆ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಎನ್​ಸಿಬಿ ಅಧಿಕಾರಿಗಳು ವಾಟ್ಸಾಪ್ ಸಂದೇಶಗಳನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ ಅಂತ ಕೂಡ ಆರೋಪಿಸಿದ್ದಾರೆ. ಅಕ್ಟೋಬರ್ 26ರಂದು ಹೈಕೋರ್ಟ್​ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲಿದೆ. ಮತ್ತೊಂದ್ಕಡೆ ಇದೇ ಪ್ರಕರಣದಲ್ಲಿ ನಿನ್ನೆ ಎನ್​ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ನಟಿ ಅನನ್ಯಪಾಂಡೆಗೆ ಮತ್ತೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಎನ್​ಸಿಬಿ ಅಧಿಕಾರಿಗಳು, ಅನನ್ಯ ಪಾಂಡೆಯನ್ನು ವಾಟ್ಸಾಪ್ ಚಾಟ್ ಜೊತೆಗೆ ಅನುಮಾನಾಸ್ಪದ ಹಣಕಾಸಿನ ವ್ಯವಹಾರ ಸಂಬಂಧ ವಿಚಾರಣೆಗೆ ಒಳಪಡಿಸಲಾಗಿದೆ ಅಂತ ತಿಳಿಸಿದ್ದಾರೆ. ಅದ್ರ ಬೆನ್ನಲ್ಲೇ ಬಾಂದ್ರಾದ ಮೂರು ಸ್ಥಳಗಳಲ್ಲಿ ಎನ್​ಸಿಬಿ ದಾಳಿ ನಡೆಸಿದೆ.

-mastshmagaa.com

Contact Us for Advertisement

Leave a Reply