ಬೆಳಗಾವಿ ಗಡಿ ವಿವಾದ ಕೇಸ್‌ ವಿಚಾರಣೆ ರದ್ದು! ಯಾಕೆ?

masthmagaa.com:

ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಬೇಕಿದ್ದ ವಿಚಾರಣೆ ನಡೆದಿಲ್ಲ. ನ್ಯಾಯಾಧೀಶ ಕೆ ಎಂ ಜೋಸೆಫ್‌ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಯನ್ನ ನವಂಬರ್‌ 23ಕ್ಕೆ ಮುಂದೂಡಿತ್ತು. ಆದರೆ ಜೋಸೆಫ್‌ ಅವರು ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಪೀಠದಲ್ಲಿ ಭಾಗಿಯಾದ ಕಾರಣ, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಕೇಸ್‌ನ ವಿಚಾರಣೆ ನಡೆದಿಲ್ಲ. ಹಾಗೂ ಮುಂದಿನ ವಿಚಾರಣೆ ಯಾವಾಗ ಅನ್ನೊದನ್ನ ಕೂಡ ಪ್ರಸ್ತಾಪಿಸಿಲ್ಲ.

-masthmagaa.com

Contact Us for Advertisement

Leave a Reply