masthmagaa.com:
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಮ್ಮಿಯಾಗ್ತಿರೋ ಬೆನ್ನಲ್ಲೇ ಜನರಿಗೆ ಮತ್ತಷ್ಟು ರಿಲೀಫ್ ಘೋಷಿಸಲಾಗಿದೆ. ಬಹುತೇಕ ರಾಜ್ಯವನ್ನ ಓಪನ್ ಮಾಡಲಾಗಿದೆ. ಇವತ್ತು ರಾಜ್ಯ ಕೊರೋನಾ ಪರಿಸ್ಥಿತಿ ಬಗ್ಗೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಅನ್ಲಾಕ್ 3.0 ಅನ್ನ ಘೋಷಿಸಿದ್ರು. ಇದು ಎರಡು ವಾರ ಅಂದ್ರೆ ಜುಲೈ 19ರ ಬೆಳಗ್ಗೆ 5 ಗಂಟೆವರೆಗೆ ಜಾರಿಯಲ್ಲಿರುತ್ತೆ ಅಂತ ಸಿಎಂ ಹೇಳಿದ್ರು. ಹಾಗಿದ್ರೆ ಯಾವುದಕ್ಕೆಲ್ಲಾ ಅನುಮತಿ ನೀಡಲಾಗಿದೆ, ಯಾವುದಕ್ಕೆ ಅವಕಾಶ ನೀಡಲ್ಲ ಅನ್ನೋದನ್ನ ಒನ್ ಬೈ ಒನ್ ಬೈ ನೋಡ್ತಾ ಹೋಗಣ.
ಅನ್ಲಾಕ್ 3.0
– ನೈಟ್ ಕರ್ಫ್ಯೂ ಇರುತ್ತೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಮಾತ್ರ.
– ವಾರಾಂತ್ಯ ಕರ್ಫ್ಯೂ ಇರಲ್ಲ.
– ವ್ಯಾಪಾರ ವಹಿವಾಟಿಗೆ ಸಂಜೆ 5 ಗಂಟೆವರೆಗೆ ಇದ್ದ ಅನುಮತಿ ರಾತ್ರಿ 9 ಗಂಟೆವರೆಗೆ ವಿಸ್ತರಣೆ.
– ಬಸ್, ಮೆಟ್ರೋಗಳಲ್ಲಿ 100% ಸೀಟು ಭರ್ತಿಗೆ ಅವಕಾಶ.
– ಮಾಲ್ಗಳನ್ನ ಓಪನ್ ಮಾಡಲು ಅವಕಾಶ.
– ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ. ಬೇರೆ ಯಾವುದೇ ಸೇವೆಗಳು ಇರೋದಿಲ್ಲ.
– ಮದ್ವೆ ಸಮಾರಂಭಗಳಲ್ಲಿ 100 ಜನ ಸೇರಲು ಅವಕಾಶ.
– ಅಂತ್ಯಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶ.
– ಸರ್ಕಾರಿ ಕಚೇರಿ 100% ಸಿಬ್ಬಂದಿಯೊಂದಿಗೆ ಓಪನ್.
– ಕ್ರೀಡಾಂಗಣ, ಈಜುಕೊಳಗಳಲ್ಲಿ ಕ್ರೀಡಾಪಟುಗಳು ಅಭ್ಯಾಸ ನಡೆಸಲು ಅವಕಾಶ.
– ಪಬ್ಗೆ ಅವಕಾಶ ಇಲ್ಲ, ಬಾರ್ಗೆ ಅವಕಾಶ ಇದೆ.
– ಶಾಲಾ-ಕಾಲೇಜು ಸದ್ಯಕ್ಕೆ ಓಪನ್ ಇಲ್ಲ.
– ಚಿತ್ರಮಂದಿರ ತೆರೆಯಲು ಅವಕಾಶ ಇಲ್ಲ.
– ಸಾಮಾಜಿಕ, ಧಾರ್ಮಿಕ, ರಾಜಕೀಯ ಸಮಾರಂಭಗಳಿಗೆ, ಪ್ರತಿಭಟನೆಗೆ ಅವಕಾಶ ಇಲ್ಲ.
ಇನ್ನು ಯಾವುದಾದ್ರೂ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋ ಅವಶ್ಯಕತೆ ಇದ್ರೆ ಆಗ ಜಿಲ್ಲಾಡಳಿತವು ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ನಿರ್ಬಂಧ ಜಾರಿಗೆ ತರಬಹುದು. 15 ದಿನದಲ್ಲಿ ಕೊರೋನಾ ಕಂಟ್ರೋಲ್ಗೆ ಬಂದು, ಜನ ಸಹಕರಿಸಿದ್ರೆ ಇದೇ ನಿಯಮ ಮುಂದುವರಿಯುತ್ತೆ. ಇಲ್ಲದಿದ್ರೆ 15 ದಿನದ ನಂತ್ರ ಈ ಸಡಿಲಿಕೆ ಇರಲ್ಲ ಅಂತ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
-masthmagaa.com
Contact Us for Advertisement