masthmagaa.com:
ಬಿಟ್ ಕಾಯಿನ್ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಡಿದಾಟ ಮುಂದುವರಿದಿದೆ. ಇವತ್ತು ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವ ಆರ್. ಅಶೋಕ್, ಸಿದ್ದರಾಮಯ್ಯ ಬುಟ್ಟಿಯಲ್ಲಿರುವ ಹಾವ್ ಬಿಡ್ತೀನಿ, ಹಾವ್ ಬಿಡ್ತೀನಿ ಎನ್ನುತ್ತಿದ್ದಾರೆ. ಯಾವ್ ಹಾವು ಬಿಡ್ತೀರಾ ನಾಗರಹಾವು ಬಿಡ್ತೀರಾ, ಕೇರೆ ಹಾವು ಬಿಡ್ತೀರಾ, ಮಂಡಲ ಹಾವು ಬಿಡ್ತೀರಾ.. ವಾಸ್ತವದಲ್ಲಿ ಅವರು ಹಾವೇ ಇಲ್ಲದ ಬುಟ್ಟಿ ಇಟ್ಟುಕೊಂಡಿದ್ದಾರೆ ಅಂತ ಆರ್. ಅಶೋಕ್ ಕಿಡಿಕಾರಿದ್ರು. ಇನ್ನು ಸಚಿವ ಅಶೋಕ್ಗೆ ಟಾಂಗ್ ಕೊಟ್ಟಿರೋ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಬುಟ್ಟಿ ಇದ್ದ ಮೇಲೆ ಹಾವು ಇರುತ್ತೆ. ಹಾವು ಎಲ್ಲೋ ಹೊರಗೆ ಹೋಗಿರಬಹುದು ಅಷ್ಟೇ ಅಂತ ಹೇಳಿದ್ದಾರೆ.
-masthmagaa.com
Contact Us for Advertisement