ಸಿದ್ದು ಬುಟ್ಟಿಯಲ್ಲಿ ಹಾವಿಲ್ಲ : ಬಿಜೆಪಿ.. ಹಾವು ತಿರುಗಾಡಲು ಹೋಗಿದೆ ಕಾಂಗ್ರೆಸ್

masthmagaa.com:

ಬಿಟ್​ ಕಾಯಿನ್​ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ಬಡಿದಾಟ ಮುಂದುವರಿದಿದೆ. ಇವತ್ತು ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವ ಆರ್​. ಅಶೋಕ್​, ಸಿದ್ದರಾಮಯ್ಯ ಬುಟ್ಟಿಯಲ್ಲಿರುವ ಹಾವ್​ ಬಿಡ್ತೀನಿ, ಹಾವ್ ಬಿಡ್ತೀನಿ ಎನ್ನುತ್ತಿದ್ದಾರೆ. ಯಾವ್ ಹಾವು ಬಿಡ್ತೀರಾ ನಾಗರಹಾವು ಬಿಡ್ತೀರಾ, ಕೇರೆ ಹಾವು ಬಿಡ್ತೀರಾ, ಮಂಡಲ ಹಾವು ಬಿಡ್ತೀರಾ.. ವಾಸ್ತವದಲ್ಲಿ ಅವರು ಹಾವೇ ಇಲ್ಲದ ಬುಟ್ಟಿ ಇಟ್ಟುಕೊಂಡಿದ್ದಾರೆ ಅಂತ ಆರ್​. ಅಶೋಕ್​ ಕಿಡಿಕಾರಿದ್ರು. ಇನ್ನು ಸಚಿವ ಅಶೋಕ್​ಗೆ ಟಾಂಗ್​ ಕೊಟ್ಟಿರೋ ಕಾಂಗ್ರೆಸ್ ಸಂಸದ ಡಿಕೆ ಸುರೇಶ್​​, ಬುಟ್ಟಿ ಇದ್ದ ಮೇಲೆ ಹಾವು ಇರುತ್ತೆ. ಹಾವು ಎಲ್ಲೋ ಹೊರಗೆ ಹೋಗಿರಬಹುದು ಅಷ್ಟೇ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply