masthmagaa.com:
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಸ್ವಪಕ್ಷೀಯ ಶಾಸಕರೇ ಆಗಿರೋ ಎಂ.ಪಿ. ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ನನ್ನ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕೆಲವೊಂದು ಕೆಲಸ ಮಾಡಿಸಬೇಕಿದೆ. ಹೀಗಾಗಿ ಆರೋಗ್ಯ ಸಚಿವ ಡಾ. ಸುಧಾಕರ್ಗೆ 15 ದಿನಗಳಿಂದ ಕಾಲ್ ಮಾಡ್ತಿದ್ದೀನಿ. ಅವರು ನನ್ನ ಫೋನ್ ಸ್ವೀಕರಿಸುತ್ತಿಲ್ಲ. ನಿನ್ನೆ ಅವರ ಆಪ್ತ ಸಹಾಯಕರಿಗೆ (PA) ಫೋನ್ ಮಾಡಿ ಸಚಿವರೇನು ದೇವಲೋಕದಿಂದ ಇಳಿದು ಬಂದಿದ್ದಾರಾ ಅಂತ ಕೇಳಿದ್ದೀನಿ. ನನ್ನಂಥವನಿಗೇ ಈ ರೀತಿ ಆಟ ಆಡಿಸ್ತಾರೆ ಅಂದ್ರೆ, ಬೇರೆಯವರ ಕಥೆ ಏನು ಯೋಚ್ನೆ ಮಾಡಿ. ಇನ್ನೊಂದುಸಲ ಫೋನ್ ಸ್ವೀಕರಿಸಿಲ್ಲ ಅಂದ್ರೆ ರೇಣುಕಾಚಾರ್ಯನ ಇನ್ನೊಂದು ಮುಖ ತೋರಿಸಬೇಕಾಗುತ್ತೆ’ ಅಂತ ಶಾಸಕ ರೇಣುಕಾಚಾರ್ಯ ಎಚ್ಚರಿಸಿದ್ದಾರೆ.
-masthmagaa.com
Contact Us for Advertisement