masthmagaa.com:
ಗುಜರಾತ್ನ ವಿಧಾನಸಭಾ ಚುನಾವಣಾ ಭಾಗವಾಗಿ ಪಕ್ಷದ ಪ್ರಣಾಳಿಕೆಯನ್ನ ಬಿಜೆಪಿ ಬಿಡುಗಡೆ ಮಾಡಿದೆ. ಚುನಾವಣೆಯಲ್ಲಿ ಪಕ್ಷವನ್ನ ಗೆಲ್ಲಿಸಿದ್ರೆ, ಏಕರೂಪ ನಾಗರಿಕ ಸಂಹಿತೆ ಅನುಷ್ಠಾನಗೊಳಿಸುವುದು, 20 ಲಕ್ಷ ಉದ್ಯೋಗ ಸೃಷ್ಟಿಸೋದು ಸೇರಿದಂತೆ ಹಲವು ಭರವಸೆಗಳನ್ನ ಮತದಾರರಿಗೆ ಬಿಜೆಪಿ ನೀಡಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿಆರ್ ಪಾಟೀಲ್ ಸೇರಿ ಪ್ರಣಾಳಿಕೆ ರಿಲೀಸ್ ಮಾಡಿದ್ದಾರೆ. ಇನ್ನು ನಾವು ಏನು ಭರವಸೆ ನೀಡಿದ್ದೇವೆವೋ ಅದನ್ನ ಮಾಡಿಯೇ ಸಿದ್ದ. ಇದುವೇ ನಮ್ಮ ವಿಶೇಷತೆ ಅಂತ ಪ್ರಣಾಳಿಕೆ ಬಿಡುಗಡೆ ಬಳಿಕ ನಡ್ಡಾ ಹೇಳಿದ್ದಾರೆ.
-masthmagaa.com
Contact Us for Advertisement