masthmagaa.com:
1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಸಿನಿಮಾದ ಶೂಟಿಂಗ್ ವೇಳೆ ಎರಡು ಕೃಷ್ಣಮೃಗಗಳನ್ನ ಬೇಟೆಯಾಡಿದ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬಿಗ್ ರಿಲೀಫ್ ಸಿಕ್ಕಿದೆ. ಗನ್ ಲೈಸೆನ್ಸ್ಗೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಕೋರ್ಟ್ಗೆ ಸಲ್ಲಿಸಿದ್ದ ಅಫಿಡವಿಟ್ ತಪ್ಪಾಗಿದೆ, ಇದು ದಾರಿತಪ್ಪಿಸುವ ಯತ್ನ ಅಂತ ರಾಜಸ್ಥಾನ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನ ಜೋಧ್ಪುರ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ಕೋರ್ಟ್ ವಜಾ ಮಾಡಿದೆ. ಅಂದ್ರೆ ಸಲ್ಮಾನ್ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ವಜಾ ಆಗಿದೆ.
ಹಾಗಿದ್ರೆ ಏನಿದು ಕೇಸ್ ಅಂತ ನೋಡೋದಾದ್ರೆ, 1998ರಲ್ಲಿ ರಾಜಸ್ಥಾನದ ಜೋಧ್ಪುರ್ನ ಕಂಕಣಿ ಎಂಬ ಗ್ರಾಮದಲ್ಲಿ ಸಿನಿಮಾ ಶೂಟಿಂಗ್ಗೆ ಅಂತ ಬಂದಿದ್ದ ಸಲ್ಮಾನ್ ಎರಡು ಕೃಷ್ಣಮೃಗಗಳನ್ನ ಬೇಟೆಯಾಡಿದ್ರು. ಬಳಿಕ ಅರೆಸ್ಟ್ ಆದ ಅವರು ಜಾಮೀನು ಪಡೆದು ಹೊರಬಂದ್ರು. ಈ ವೇಳೆ ತಾವು ಹೊಂದಿರುವ ಗನ್ನ ಲೈಸೆನ್ಸ್ ಅನ್ನು ಸಬ್ಮಿಟ್ ಮಾಡುವಂತೆ ಕೋರ್ಟ್ ಹೇಳಿತ್ತು. 2003ರಲ್ಲಿ ಈ ಸಂಬಂಧ ಅಫಿಡವಿಟ್ ಸಲ್ಲಿಸಿದ್ದ ಸಲ್ಮಾನ್ ಖಾನ್, ಲೈಸೆನ್ಸ್ ಕಳೆದುಹೋಗಿದೆ ಅಂತ ಹೇಳಿದ್ರು. ಆದ್ರೆ ಲೈಸೆನ್ಸ್ ಕಳೆದುಹೋಗಿರಲಿಲ್ಲ. ಅದನ್ನ ರಿನೀವಲ್ಗೆ ಕೊಡಲಾಗಿತ್ತು ಅನ್ನೋದು ನಂತ್ರದಲ್ಲಿ ಕೋರ್ಟ್ಗೆ ಗೊತ್ತಾಯ್ತು. ಘಟನೆ ನಡೆದು 20 ವರ್ಷದ ಬಳಿಕ ಅಂದ್ರೆ 2018ರಲ್ಲಿ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ತಪ್ಪಿತಸ್ಥ ಅಂತ ತೀರ್ಪು ನೀಡಿದ ಕೋರ್ಟ್ 5 ವರ್ಷ ಜೈಲು ಶಿಕ್ಷೆ ವಿಧಿಸಿತು. ಜೊತೆಗೆ ಕೃಷ್ಣಮೃಗ ಬೇಟೆಯಾಡುವಾಗ ಸಲ್ಮಾನ್ ಖಾನ್ ಜೊತೆಗಿದ್ದ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ನಟ, ನಟಿಯರಾದ ಸೈಫ್ ಅಲಿ ಖಾನ್, ತಬು, ಸೋನಾಲಿ ಬೇಂದ್ರೆ ಮತ್ತು ನೀಲಂ ಅವರನ್ನ ಕೋರ್ಟ್ ಖುಲಾಸೆಗೊಳಿಸ್ತು. ಈ ತೀರ್ಪನ್ನ ಪ್ರಶ್ನಿಸಿ ಸಲ್ಮಾನ್ ಖಾನ್ ಸೆಷನ್ಸ್ ಕೋರ್ಟ್ಗೆ ಹೋದ್ರು. ಇದೆಲ್ಲಾ ಆದ ಬಳಿಕ ಸುಳ್ಳು ಅಫಿಡವಿಟ್ ಸಲ್ಲಿಸಿದ್ದ ಸಲ್ಮಾನ್ ವಿರುದ್ಧ ರಾಜಸ್ಥಾನ ಸರ್ಕಾರ ಕೋರ್ಟ್ ಮೆಟ್ಟಿಲೇರ್ತು. ಈ ಅರ್ಜಿ ವಿಚಾರಣೆ ವೇಳೆ ನಟ ಸಲ್ಮಾನ್ ಖಾನ್ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಮುಂದೆ ಹಾಜರಾಗಿ, ಮಿಸ್ಸಾಗಿ ಅಫಿಡವಿಟ್ ಸಲ್ಲಿಸಿದ್ದೆ, ನನ್ನನ್ನ ಕ್ಷಮಿಸಿ ಅಂತ ಕೇಳಿದ್ರು. ಇವತ್ತು ಮತ್ತೆ ವಿಚಾರಣೆ ನಡೆಸಿದ ಕೋರ್ಟ್ ರಾಜಸ್ಥಾನ ಸರ್ಕಾರದ ಎರಡೂ ಅರ್ಜಿಗಳನ್ನ ವಜಾ ಮಾಡಿದೆ.
-masthmagaa.com
Contact Us for Advertisement