masthmagaa.com:
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರ ನಿವಾಸದ ಹೊರಗಡೆ ಸ್ಪೋಟಕ ಇಡಲಾಗಿದೆ ಅನ್ನೊ ಬೆದರಿಕೆ ಕರೆ ಬಂದಿತ್ತು. ವಿಷಯ ತಿಳಿದ ಕೂಡಲೇ ಸ್ಪೋಟಕ ನಿಷ್ಕ್ರಿಯ ದಳ ಸ್ಥಳಕ್ಕೆ ಬಂದು ಸುತ್ತಮುತ್ತಲಿನ ಪ್ರದೇಶವನ್ನ ಸಂಪೂರ್ಣವಾಗಿ ಹುಡುಕಿದ್ರು. ಆದ್ರೆ ಯಾವುದೇ ಸ್ಪೋಟಕ ವಸ್ತು ದೊರಕಿಲ್ಲ. ಅಪರಚಿತ ವ್ಯಕ್ತಿಯೊಬ್ಬ ಸುಳ್ಳು ಬೆದರಿಕೆ ಕರೆ ಮಾಡಿದ್ದು, ಆತನ ಪತ್ತೆಗಾಗಿ ತನಿಖೆ ಮಾಡಲಾಗ್ತಿದೆ ಅಂತ ಪೊಲೀಸರು ಹೇಳಿದ್ದಾರೆ.
-masthmagaa.com
Contact Us for Advertisement