masthmagaa.com: ಬಾಲಿವುಡ್‌ ಫೇಮಸ್‌ ನಟಿ ಆಲಿಯಾ ಭಟ್‌ ಇದೀಗ ಹೀರೋಯಿನ್‌ ಜೊತೆಗೆ ಇನ್ನೊಂದು ಮಹತ್ವದ ಹೆಜ್ಜೆಯನ್ನ ಸಿನಿಮಾ ರಂಗದಲ್ಲಿ ಇಟ್ಟಿದ್ದಾರೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಬಿಗ್‌ ಹಿಟ್‌ ಆದ ಬೆನ್ನಲ್ಲೇ ಇದೀಗ ಸಿನಿಮಾ ನಿರ್ಮಾಣಕ್ಕೂ ಆಲಿಯಾ ಭಟ್‌ ಮುಂದಾಗಿದ್ದಾರೆ. https://www.instagram.com/p/CxpK9ybMFcj/?utm_source=ig_web_copy_link ಜಿಗ್ರಾ ಅನ್ನೋ ಸಿನಿಮಾದಲ್ಲಿ ಆಲಿಯಾ ಭಟ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈ ಸಿನಿಮಾ ಸಹ ನಿರ್ಮಾಪಕಿಯಾಗಿಯೂ ಕೂಡ ಗುರುತಿಸಿಕೊಳ್ಳಲಿದ್ದಾರೆ. ವಾಸನ್‌ ಬಾಲಾ ಈ ಚಿತ್ರವನ್ನ ನಿರ್ದೇಶನ ಮಾಡಿದ್ರೆ ಕರಣ್‌ ಜೋಹರ್‌ ಈ ಸಿನಿಮಾವನ್ನ ನಿರ್ಮಾಣ ಮಾಡ್ತಿದ್ದಾರೆ. ಜೊತೆಗೆ ಆಲಿಯಾ ಭಟ್‌ ಈ ಸಿನಿಮಾದ ಸಹ ನಿರ್ಮಾಪಕಿಯಾಗಿದ್ದಾರೆ. “ಧರ್ಮ ಪ್ರೋಡಕ್ಷನ್‌ನಿಂದ ನನ್ನ ಕೆರಿಯರ್ ಶುರು ಮಾಡಿದೆ. ಈಗ ಇದೇ ಸಂಸ್ಥೆಯ ಜೊತೆ ಸಹ- ನಿರ್ಮಾಣ ಮಾಡ್ತಿದ್ದೇನೆ” ಅಂತ ಆಲಿಯಾ ಭಟ್‌ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಕನ್ನಡದ ಹೆಸರಾಂತ ಪೋಷಕ ನಟ ಬ್ಯಾಂಕ್‌ ಜನಾರ್ಧನ್‌ ಅವರಿಗೆ ಹಾರ್ಟ್‌ ಅಟ್ಯಾಕ್‌ ಆಗಿದ್ದು ನಿನ್ನೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯಾಂಕ್ ಜನಾರ್ಧನ್‌ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನಡೀತಾ ಇದೆ, ಈಗ ಆರೋಗ್ಯವಾಗಿದ್ದಾರೆ. ಸದ್ಯ ಅವರಿಗೆ ಆಂಜಿಯೋಗ್ರಾಮ್ ಮಾಡಲಾಗ್ತಾ ಇದೆ ಅಂತ ಅವರ ಮಗ ಗುರುಪ್ರಸಾದ್‌ ತಿಳಿಸಿದ್ದಾರೆ. ಬ್ಯಾಂಕ್ ಜನಾರ್ಧನ್‌ ಅವರಿಗೆ 74 ವರ್ಷ ವಯಸ್ಸು. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟೀವ್‌ ಇದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ನಾಟಕ, ಸೀರಿಯಲ್‌ಗಳಲ್ಲೂ ಬಣ್ಣ ಹಚ್ಚಿದ್ದ ಇವರು ಹಾಸ್ಯ ಮತ್ತು ವಿಲನ್‌ ಪಾತ್ರದ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೊನ ಪ್ರೇಮಕಥಾಹಂದರ ಒಳಗೊಂಡಿರುವ “ಅಭಿರಾಮಚಂದ್ರ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ನಟ ಪ್ರಮೋದ್ ಶೆಟ್ಟಿ ಹಾಗೂ ದೀಕ್ಷಿತ್ ಶೆಟ್ಟಿ ಟ್ರೇಲರ್ ರಿಲೀಸ್ ಮಾಡಿ ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಗೇಂದ್ರ ಗಾಣಿಗ ನಿರ್ದೇಶನ ಅಭಿರಾಮಚಂದ್ರ ಸಿನಿಮಾ ಅಕ್ಟೋಬರ್ 6ಕ್ಕೆ ಬಿಡುಗಡೆಯಾಗುತ್ತಿದೆ. ಈ ಕುರಿತ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ಹಂಚಿಕೊಂಡರು. ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಸಿನಿಮಾ ತುಂಬಾ ಅದ್ಭುತವಾಗಿ ಮೂಡಿದೆ. ನನಗೆ ಇಷ್ಟವಾದ ಪಾರ್ಟ್ ಯಾವುದು ಅಂದರೆ ಕುಂದಾಪುರ ಕನ್ನಡವನ್ನು ಸಿನಿಮಾದಲ್ಲಿ ಬಳಸಲು ಮೀಟರ್ ಬೇಕು. ಆ ಮೀಟರ್ ಅಭಿರಾಮಚಂದ್ರ ಸಿನಿಮಾದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಯಾಕೆಂದರೆ ತುಂಬಾ ಜನರಿಗೆ ಆ ಭಾಷೆ ಅರ್ಥವಾಗಲ್ಲ. ತುಂಬಾ ವೇಗವಾಗಿ ಮಾತನಾಡುವುದರಿಂದ ಅದು ಬೇಗ ಅರ್ಥವಾಗುವುದಿಲ್ಲ. ಈ ಟ್ರೇಲರ್ ನಲ್ಲಿ ಆ ಭಾಷೆ ಪ್ರಾಮಿಸಿಂಗ್ ಆಗಿ ಕಾಣುತ್ತಿದೆ. ನಿರ್ದೇಶಕರ ಹಲವಾರು ಗೆಳೆಯರು ಈ ಸಿನಿಮಾವನ್ನು ಪ್ರೀಮಿಯರ್ ಶೋ ಸ್ಪಾನ್ಸರ್ ಮಾಡುತ್ತಿದ್ದು, ನಾನು ಅವರಿಗೆ ಸಾಥ್ ಕೊಡುತ್ತಿದ್ದೇನೆ. ಹೊಸಬರ ಸಿನಿಮಾಗೆ ನೀವು ಬೆಂಬಲ ಕೊಡಿ ಎಂದರು.Read More →

masthmagaa.com: ಚಮಕ್, ಅಯೋಗ್ಯ, ಬೀರ್ ಬಲ್, ಬುದ್ದಿವಂತ 2 ಸೇರಿದಂತೆ ಅನೇಕ ಯಶಸ್ವೀ ಚಿತ್ರಗಳ ನಿರ್ಮಾಪಕರಾದ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನ ಡಾ|| ಟಿ.ಆರ್. ಚಂದ್ರಶೇಖರ್ ಅವರನ್ನು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರನಾಗಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ತಾವರ್ ಚಂದ್ ಗೆಹ್ಲೋಟ್ ರವರು ಮೂರು ವರ್ಷಗಳ ಅವಧಿಗೆ ನೇಮಕ ಮಾಡಿದ್ದಾರೆ. ಹಲವು ಯಶಸ್ವಿ ಚಿತ್ರಗಳ ನಿರ್ಮಾಪಕರಾಗಿರುವ ಡಾ|| ಟಿ.ಆರ್ ಚಂದ್ರಶೇಖರ್, ಮೂಲತಃ ಎಂಜಿನಿಯರಿಂಗ್ ಹಾಗೂ ಪಿ ಹೆಚ್ ಡಿ ಪದವೀದರರಗಿದ್ದಾರೆ. ಪ್ರಸ್ತುತ ಹೆಮ್ಮೆಯ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸರಾಗಿ ಡಾ||ಟಿ.ಆರ್.ಚಂದ್ರಶೇಖರ್ ರವರು, ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ‌. -masthmagaa.com Share on: WhatsAppContact Us for AdvertisementRead More →

masthmagaa.com: ಗೋವಿಂದಾಯನಮಃ, ಶಿವಲಿಂಗದಂಥ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ ಕೆ.ಸುರೇಶ್ ಅವರ ನಿರ್ಮಾಣದ ‘ತೋತಾಪುರಿ -2’ ಚಿತ್ರ ಈ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಕಳೆದವರ್ಷ ತೆರೆಕಂಡಿದ್ದ ನವರಸನಾಯಕ ಜಗ್ಗೇಶ್, ಅದಿತಿ ಪ್ರಭುದೇವ ಅಭಿನಯದ ತೋತಾಪುರಿ ಚಿತ್ರದ ಸೀಕ್ವೇನ್ಸ್ ಇದಾಗಿದ್ದು, ನೀರ್ ದೋಸೆ ಖ್ಯಾತಿಯ ವಿಜಯಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಸುರೇಶ್ ಆರ್ಟ್ಸ್, ಮೋನ್ ಫ್ಲಿಕ್ಸ್ ಸ್ಟುಡಿಯೋಸ್ ಲಾಂಚನದಲ್ಲಿ ಕೆ.ಎ. ಸುರೇಶ್ ಅವರು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಉತ್ತಮ ಮನರಂಜನೆಯ ಜೊತೆ ಸದಭಿರುಚಿಯ ಹಾಸ್ಯ ತೋತಾಪುರಿ-2 ಚಿತ್ರದ ಹೈಲೈಟ್. ನಟ ರಾಕ್ಷಸ ಡಾಲಿ ಧನಂಜಯ್ ಚಿತ್ರದಲ್ಲಿ ಜಗ್ಗೇಶ್ ಅವರ ಜೊತೆ ಮತ್ತೊಬ್ಬ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ನಿರಂಜನ ಬಾಬು ಅವರ ಛಸಯಾಗ್ರಹಣ, ಅರುಣ್ ಆಂಡ್ರ್ಯೂ ಅವರ ಸಂಗೀತ ಸಂಯೋಜನೆಯಿದೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸುಮನ ರಂಗನಾಥ್, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿದಿವೆ. -masthmagaa.com Share on: WhatsAppContact Us for AdvertisementRead More →

masthmagaa.com: ಬಹದ್ದೂರ್, ಭರ್ಜರಿ, ಭರಾಟೆ, ಜೇಮ್ಸ್ ಚಿತ್ರಗಳ ನಿರ್ದೇಶಕ ಹಾಗೂ ಖ್ಯಾತ ಗೀತರಚನೆಕಾರ ಚೇತನ್ ಕುಮಾರ್ ನಿರ್ದೇಶನದ ಹಾಗೂ “ಗಟ್ಟಿಮೇಳ” ಧಾರಾವಾಹಿ ಖ್ಯಾತಿಯ ರಕ್ಷ್ ರಾಮ್ ನಾಯಕನಾಗಿ ನಟಿಸುತ್ತಿರುವ “ಬರ್ಮ” ಚಿತ್ರದ ಮುಹೂರ್ತ ಸಮಾರಂಭ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಆರಂಭ ಫಲಕ ತೋರಿದರು. ರಾಘವೇಂದ್ರ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು ಹಾಗೂ ನಟ ಧ್ರುವ ಸರ್ಜಾ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದರು. ನಿರ್ಮಾಪಕ ಕೆ.ಪಿ.ಶ್ರೀಕಾಂತ್, ನಿರ್ದೇಶಕ ಎ.ಪಿ.ಅರ್ಜುನ್, ನಟ ಧೀರನ್ ರಾಮಕುಮಾರ್ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಮುಹೂರ್ತ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು. ಚೇತನ್ ಕುಮಾರ್ ಅವರು ಒಳ್ಳೆಯ ಕಥೆ ಸಿದ್ದ ಮಾಡಿಕೊಂಡಿರುತ್ತಾರೆ. ರಕ್ಷ್ ಈ ಸಿನಿಮಾ ಮೂಲಕ ನಾಯಕನಾಗುತ್ತಿದ್ದಾರೆ. ಇಡೀ “ಬರ್ಮ” ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾರೈಸಿದರು. “ಬರ್ಮ” ನನ್ನ ನಿರ್ದೇಶನದ ಐದನೇ ಚಿತ್ರRead More →

masthmagaa.com: ಕಿಚ್ಚ ಸುದೀಪ್‌ ಅವರು ನಡೆಸಿಕೊಡುವ ಬಿಗ್‌ಬಾಸ್‌ಗೆ ತುಂಬಾ ಜನ ಕಾಯ್ತಾ ಇದ್ದಾರೆ. ಬಿಗ್‌ಬಾಸ್‌ಗೆ ಕೆಲವೇ ಕೆಲವು ದಿನಗಳು ಮಾತ್ರ ಇದೆ. ಕಲರ್ಸ್‌ ಕನ್ನಡ ಒಫಿಷಿಯಲ್‌ ಆಗಿ ಅನೌನ್ಸ್‌ ಕೂಡ ಮಾಡಿದೆ. ಬಿಗ್‌ಬಾಸ್‌ ಬರ್ತಾ ಇದೆ ಅಂದಮೇಲೆ ಕಂಟೆಸ್ಟಂಟ್‌ಗಳು ಯಾರೆಲ್ಲಾ ಬರಬಹುದು ಅನ್ನೋ ಕುತೂಹಲ ಕೂಡ ಜನರಲ್ಲಿ ಇದೆ. ಸೋ ಈಗ ಕಲರ್ಸ್‌ ಕನ್ನಡದಲ್ಲಿ ಬರ್ತಾ ಇರುವಂತ ಬಿಗ್‌ಬಾಸ್‌ ಸಿಸನ್‌ 10ಕ್ಕೆ ಬರ್ತಾ ಇರುವಂತ ಮೊದಲ ಕಂಟೆಸ್ಟಂಟ್‌ ಯಾರು ಅನ್ನೋದು ರಿವೀಲ್‌ ಆಗಿದೆ. ಇದನ್ನ ಕಲರ್ಸ್‌ ಕನ್ನಡ ತನ್ನ ಒಫಿಷಿಯಲ್‌ ಪೇಜ್‌ನಲ್ಲಿ ಅನೌನ್ಸ್‌ ಮಾಡಿದ್ದಾರೆ. “ಬೆಸ್ಟ್ ರೇಟೆಡ್ ಚಲನ ಚಿತ್ರ – 777 ಚಾರ್ಲಿ ಸಿನಿಮಾದ ಚಾರ್ಲಿ ಬಿಗ್ ಬಾಸ್ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಅಭಿನಂದನೆಗಳು ಚಾರ್ಲಿ” ಅಂತ ಕಲರ್ಸ್​ ಕನ್ನಡ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಅನೌನ್ಸ್‌ ಮಾಡಿದೆ. ಹಾಗಾದ್ರೆ ಚಾರ್ಲಿ ಅಂದ್ರೆ ಯಾರು ? ಅನ್ನೋದು ಇಲ್ಲಿರೋ ಪ್ರಶ್ನೆ. ಯಾಕಂದ್ರೆ ಆ ಸಿನಿಮಾದ ನಿಜವಾದ ಚಾರ್ಲಿಯನ್ನ ಅಂದ್ರೆ ನಾಯಿಯನ್ನ ಬಿಗ್‌ಬಾಸ್‌ಗೆ ಕರೆತರೋಕೆRead More →

masthmagaa.com: ವಿಜಯ್‌ ದಳಪತಿ ಅಭಿನಯ್‌ ಲಿಯೋ ಸಿನಿಮಾ ತೆರೆ ಮೇಲೆ ಬರೋಕೆ ರೆಡಿಯಾಗಿದೆ. ಆದ್ರೆ ಕೇರಳದಲ್ಲಿ ಮಾತ್ರ ಈ ಸಿನಿಮಾವನ್ನ ರಿಲೀಸ್‌ ಮಾಡಬೇಡಿ ಅನ್ನೋ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಜಾಸ್ತಿ ಆಗಿದೆ. ಅದರಲ್ಲೂ ಮೋಹನ್​ಲಾಲ್​ ಅಭಿಮಾನಿಗಳು ಹೆಚ್ಚು ಗರಂ ಆಗಿದ್ದಾರೆ. ‘ಲಿಯೋ’ ಸಿನಿಮಾವನ್ನು ಬ್ಯಾನ್‌ ಮಾಡುವ ಮಾತುಗಳು ಕೇಳಿಬರ್ತಾ ಇದೆ. ಸೋಷಿಯಲ್‌ ಮೀಡಿಯಾದಲ್ಲು #KeralaBoycottLEO ಅನ್ನೋ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗಿದೆ. ಇದೆಲ್ಲ ಶುರುವಾಗಿದ್ದು ಒಂದು ಸಣ್ಣ ವಿಷಯದಿಂದ. 2014ರಲ್ಲಿ ರಿಲೀಸ್‌ ಆದ ‘ಜಿಲ್ಲಾ’ ಸಿನಿಮಾದಲ್ಲಿ ದಳಪತಿ ವಿಜಯ್​ ಮತ್ತು ಮೋಹನ್​ಲಾಲ್​ ನಟಿಸಿದ್ದರು. ಮೋಹನ್​ಲಾಲ್​ ಅವರ ನಟನೆ ಬಗ್ಗೆ ವಿಜಯ್​ ದಳಪತಿ ಅವರ ಅಭಿಮಾನಿಯೊಬ್ಬರು ಕೆಟ್ಟದಾಗಿ ಕಾಮೆಂಟ್ ಮಾಡಿದ್ರು. ಅಲ್ಲಿಂದ ಈ ಫ್ಯಾನ್‌ ವಾರ್‌ ಶುರುವಾಗಿತ್ತು. ಹಾಗಾಗಿ ದಳಪತಿ ವಿಜಯ್​ ನಟನೆಯ ‘ಲಿಯೋ’ ಸಿನಿಮಾವನ್ನು ಕೇರಳದಲ್ಲಿ ರಿಲೀಸ್​ ಮಾಡೋಕೆ ಬಿಡೋದಿಲ್ಲ ಅಂತ ಮೋಹನ್‌ಲಾಲ್‌ ಫ್ಯಾನ್ಸ್‌ ಗಲಾಟೆ ಮಾಡ್ತಿದ್ದಾರೆ. ತಮಿಳಿನ ಲಿಯೋ ಸಿನಿಮಾ ಕನ್ನಡ, ಮಲಯಾಳಂ, ಹಿಂದಿ ಮತ್ತು ತೆಲುಗಿಗೆ ಡಬ್​ ಆಗಿ ರಿಲೀಸ್‌ ಆಗೋಕೆ ರೆಡಿಯಾಗಿದೆ. ಪ್ಯಾನ್‌ ಇಂಡಿಯಾ ಸಿನಿಮಾRead More →

masthmagaa.com: ಸಮಂತಾ ಅವರು ಮೈಯೋಸಿಟಿಸ್ ಖಾಯಿಲೆಯಿಂದ ಹೊರಬಂದ ವಿಷಯ ಎಲ್ಲರಿಗೂ ಗೊತ್ತಿರೋದೇ. ನಾಗಚೈತನ್ಯ ಅವರ ಜೊತೆ ಡಿವೋರ್ಸ್‌ ಪಡೆದ ಸಮಂತಾ ಮೈಯೋಸಿಟಿಸ್​ಗೆ ಖಾಯಿಲೆಗೆ ಒಳಗಾಗಿದ್ರು. ಆದ್ರೆ ಈಗ ಸ್ವಲ್ಪ ಸ್ವಲ್ಪವೇ ಸುಧಾರಿಸಿಕೋಳ್ತಾ ಇದ್ದಾರೆ. ಧ್ಯಾನ, ಯೋಗ, ದೇವಸ್ಥಾನ, ಸಿನಿಮಾ ಅಂತ ಮತ್ತೆ ಎಲ್ಲದರಲ್ಲೂ ಬ್ಯೂಸಿ ಆಗಿದ್ದಾರೆ. ಆದ್ರೆ ಮೈಯೋಸಿಟಿಸ್ ಖಾಯಿಲೆಯಿಂದ ಸಮಂತಾ ಅವರಿಗೆ ಸೈಡ್‌ ಎಫೆಕ್ಟ್‌ ಆಗಿದ್ಯಾ ಅನ್ನೋದು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಯಾಕಂದ್ರೆ ಸಮಂತಾ ಅವರ ಮುಖ ಮೊದಲಿನ ರೀತಿ ಇಲ್ಲ ಅನ್ನೋದು ಕೂಡ ಅಭಿಮಾನಿಗಳಿಗೆ ಅನಿಸಿದೆ. ಇನ್ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಸಮಂತಾ ನೇರವಾಗಿಯೇ ಉತ್ತರ ಕೊಟಿದ್ದಾರೆ. ಅಭಿಮಾನಿ ಒಬ್ರು ಸಮಂತಾ ಮುಖದಲ್ಲಿ ಆಗಿರುವಂತ ಚೇಂಜಸ್‌ ಬಗ್ಗೆ ಪ್ರಶ್ನೆ ಕೇಳಿದ್ರು. ಮೈಯೋಸಿಟಿಸ್ ಕಾಯಿಲೆಯಿಂದ ಹೊರಬರಲು ಸಮಂತಾ ಪಡೀತಾ ಇರುವಂತ ಚಿಕಿತ್ಸೆಯಿಂದ ಅವರ ಸೌಂದರ್ಯಕ್ಕೆ ಎಫೆಕ್ಟ್‌ ಆಗಿದೆ ಅನ್ನೋದು ಗೊತ್ತಾಗಿದೆ. ಮೈಯೋಸಿಟಿಸ್ ಖಾಯಿಲೆಗೋಸ್ಕರ ಸಮಂತಾ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದಾರೆ. ಇದು ಸಮಂತಾ ಮುಖದಲ್ಲಿ ಆಗುವಂತ ಚೇಂಜಸ್‌ಗೆ ಕಾರಣವಾಗಿದೆ. ಸ್ಕಿನ್‌ಕೇರ್‌ ಬ್ರ್ಯಾಂಡ್ ನಡೆಸುತ್ತಿರುವ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಸಮಂತಾ ಅವರRead More →

masthmagaa.com: “ಕುದ್ರು” ಚಿತ್ರದ “ಉಡಾಯಿಸು” ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ. ಇದು ಚಿತ್ರದ ಮೂರನೇ ಹಾಡಾಗಿದೆ. ಈ ಹಾಡನ್ನು ಉಡುಪಿ ಹಾಗೂ ಮಲೆನಾಡು ಪ್ರದೇಶದ ಸುಂದರ ಪರಿಸರದಲ್ಲಿ ಚಿತ್ರಿಕರಿಸಲಾಗಿದೆ. *ಉಡಾಯಿಸು* ಹಾಡು ಕಾಲೇಜು ಹುಡುಗರಿಗಾಗಿ ಚಿತ್ರೀಕರಿಸಿದ ಹಾಡು. ಕಾಲೇಜಲ್ಲಿ ಕ್ಲಾಸ್ ಬಂಕ್ ಮಾಡಿ ಎಂಜಾಯ್ ಮಾಡುವ ಗೀತೆಯಿದು. ನಾನು ಮೂಲತಃ ಉಡುಪಿಯವನು. ನೀರಿನಿಂದ ಸುತ್ತುವರೆದ ದ್ವೀಪವನ್ನು ತುಳುವಿನಲ್ಲಿ “ಕುದ್ರು ಎನ್ನುತ್ತಾರೆ. ಈ ಚಿತ್ರದ ಕಥೆಯನ್ನು ನಾನೇ ಬರೆದು ನಿರ್ದೇಶಿಸಿ, ನಿರ್ಮಾಣ ಮಾಡಿದ್ದೇನೆ ಎಂದು ಭಾಸ್ಕರ ನಾಯ್ಕ್ ಹೇಳಿದರು. “ಕುದ್ರು” ದ್ವೀಪದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮೂರು ಪಂಗಡದವರು ವಾಸಿಸುತ್ತಿರುತ್ತಾರೆ. ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಈ ರೀತಿಯಲ್ಲಿ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉಡುಪಿ, ಬೆಂಗಳೂರು, ಗೋವಾ ಹಾಗೂ ಸೌದಿ ಅರೇಬಿಯಾದಲ್ಲಿ ಚಿತ್ರೀಕರಣ ಮಾಡಿದ್ದೇವೆ. “ಕುದ್ರು” ನನ್ನ ಮೊದಲ ನಿರ್ದೇಶನದ ಚಿತ್ರ. ಒಂದು ಸಣ್ಣ ದ್ವೀಪದಲ್ಲಿ ಬೇರೆಬೇರೆ ಸಮುದಾಯದವರು ಸಾಮರಸ್ಯದಿಂದ ಬಾಳುತ್ತಿದಾಗ, ಒಂದು ವಾಟ್ಸಾಪ್ ಸಂದೇಶ ಹೇಗೆ ಅಶಾಂತಿಯನ್ನು ತಂದು ಹಾಕುತ್ತದೆ ಹಾಗೂ ಬಂದ ತೊಂದರೆಯನ್ನು ನಿವಾರಣೆRead More →