masthmagaa.com: ರೋಮ್ಯಾಂಟಿಕ್ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ನಗುವಿನ ಹೂಗಳ ಮೇಲೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈಗ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚೀಟ್ ಪಡೆದುಕೊಂಡಿದೆ. ಯಾವುದೇ ಕಟ್ ಮತ್ತು ಯಾವುದೇ ದೃಶ್ಯಕ್ಕೆ ಮ್ಯೂಟ್ ಇಲ್ಲದೇ ಯು ಪ್ರಮಾಣ ಪತ್ರ ತನ್ನದಾಗಿಸಿಕೊಂಡಿದೆ. ಶ್ರೀ ರಂಗ , ಕೆಂಪಿರ್ವೆ ಮತ್ತು ಆಮ್ಲೆಟ್, ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿರುವ ವೆಂಕಟ್ ಭಾರದ್ವಾಜ್ ಆಕ್ಷನ್ ಕಟ್ ಹೇಳಿರುವ ನಗುವಿನ ಹೂಗಳ ಮೇಲೆ ಸಿನಿಮಾದಲ್ಲಿ ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ಅಭಿದಾಸ್, ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸುತ್ತಿದ್ದು, ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಇರಲಿ ಬಿಡು ಈ ಜೀವ ನಿನಗಾಗಿ ಎಂಬ ರೋಮ್ಯಾಂಟಿಕ್ ಹಾಡು ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ವೆಂಕಟ್‌ ಭಾರದ್ವಾಜ್‌ ಕಥೆ, ಚಿತ್ರಕಥೆ ಬರೆದು‌ ನಿರ್ದೇಶಿಸಿರುವ ನಗುವಿನ ಹೂಗಳ ಮೇಲೆ ಸಿನಿಮಾವನ್ನು ಟಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳಾದ ಬೆಂಗಾಲ್ ಟೈಗರ್, ಪಂಥಂ, ಒರೆ ಬುಜ್ಜುಗRead More →

masthmagaa.com: ಬಾಲಿವುಡ್‌ ನಿರ್ಮಾಪಕ, ನಿರ್ದೇಶಕ ಕರಣ್‌ ಜೋಹರ್‌ ನಿರ್ದೇಶನದ ಮುಂದಿನ ಸಿನಿಮಾ ಕಂಪ್ಲೀಟ್‌ ಆಗಿದೆ. “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ” ಎಂಬ ಹೆಸರಿನ ಈ ಚಿತ್ರದಲ್ಲಿ ಆಲಿಯಾ ಭಟ್‌ ಮತ್ತು ರಣವೀರ್‌ ಸಿಂಗ್‌ ನಟಿಸಿದ್ದಾರೆ. ಕೌಟುಂಬಿಕ ಕತೆಯನ್ನ ಹೊತ್ತಿರುವ ಈ ಚಿತ್ರದ ಫಸ್ಟ್‌ ಲುಕ್‌ ಕೂಡ ಬಿಡುಗಡೆಯಾಗಿದೆ. 2016 ರ ಏ ದಿಲ್ ಹೈ ಮುಷ್ಕಿಲ್ ನಂತರ ನಿರ್ದೇಶಕರಾಗಿ ಕೆಲಸ ಮಾಡಿದ 2ನೇ ಸಿನಿಮಾ ಇದಾಗಿದೆ. ಕರಣ್‌ ಜೋಹರ್‌, ಸೇರಿದಂತೆ ಆಲಿಯಾ ಭಟ್‌, ರಣವೀರ್‌ ಸಿಂಗ್‌ ಕೂಡ ಸಿನಿಮಾದ ಫಸ್ಟ್‌ ಲುಕ್‌ ಅನ್ನ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಜುಲೈ 28, 2023 ರಂದು ರಿಲೀಸ್‌ ಆಗಲಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಟಾಕಿಂಗ್‌ ಸ್ಟಾರ್‌ ಅಂತಾನೇ ಫೇಮಸ್‌ ಆಗಿರುವ ಸೃಜನ್‌ ಲೋಕೆಶ್‌ ಮಜಾ ಟಾಕೀಸ್‌ ಮೂಲಕ ಮನೆ ಮಾತಾಗಿದ್ರು. ಯಾರ್‌ ಏನೇ ಮಾತಾಡಿದ್ರು ಕೌಂಟರ್‌ ಮೇಲೆ ಕೌಂಟರ್‌ ಕೊಡೋ ಸೃಜನ್‌ ಅವರು ಕಾಮಿಡಿ ಶೋ ಆದ ಮೇಲೆ ರಾಜರಾಣಿ ಶೋ ದಲ್ಲಿ ಜಡ್ಜ್‌ ಆಗಿ ಕಾಣಿಸಿಕೊಂಡಿದ್ರು. ನಂತರ ಬಂದಂತ ರಾಜ ರಾಣಿ ಸೀಸನ್‌ 2 ದಲ್ಲೂ ಕೂಡ ಜಡ್ಜ್‌ ಆಗಿ ಎಲ್ಲರಿಗೂ ಕೌಂಟರ್‌ ಕೋಡ್ತಾ ಇದ್ದಂತ ಇವರು ಎಲ್ಲರ ಕಾಲೆಳ್ಯೋದ್ರಲ್ಲಿ ಎತ್ತಿದ ಕೈ ಅಂತಾನೇ ಹೇಳಬೋದು. ಜಡ್ಜ್‌ ಆಗಿದ್ದ ಸೃಜನ್‌ ಈಗ ಆಂಕರ್‌ ಆಗಿ ಮತ್ತೊಂದು ಶೋ ಮೂಲಕ ಜನರನ್ನ ನಗಿಸೋಕೆ ಬರ್ತಾ ಇದ್ದಾರೆ. “ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್” ಎಂಬ ಹೆಸರನ್ನ ಇಟ್ಕೊಂಡು ಈ ಶೋ ಮಾಡಲಾಗ್ತಾ ಇದೆ. ಸೃಜನ್‌ ಅವರ ಆಂಕರಿಂಗ್‌ ಈ ಶೋಗೆ ಮತ್ತೂ ಒಳ್ಳೆ ಮಜಾ ಕೊಡೋ ಈ ಪ್ರೊಗ್ರಾಮ್‌ ನ ಪ್ರೋಮೋ ವನ್ನ ಕಲರ್ಸ್‌ ಕನ್ನಡ ತಮ್ಮ ಆಫಿಷಿಯಲ್‌ ಅಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡಿದೆ. ‘ಕಲರ್ಸ್ ಸಂಸಾರಗಳ ಕಲರ್​ಫುಲ್ ಹಣಾಹಣಿ… ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್’ ಎಂದು ಈ ಪ್ರೋಮೋಗೆRead More →

masthmagaa.com: ಕಾಂತಾರ ಸಿನಿಮಾದ ಗೆಲುವಿನ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಮ್ಮ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈಗ ಕಾಂತಾರ 2 ಸಿನಿಮಾ ಕೆಲಸದಲ್ಲಿ ಬಿಝಿ ಆಗಿರೋದು ಎಲ್ಲರಿಗೂ ಗೊತ್ತಿರುವ ವಿಷಯಾನೇ. ಆದಷ್ಟು ಬೇಗ ಕಾಂತಾರ 2 ಸಿನಿಮಾ ಮುಗಿಸಿ ಶೆಟ್ರು ರಿಲೀಸ್ ಡೇಟ್ ಬಗ್ಗೆ ಯಾವಾಗ ಅಪ್ಡೇಟ್ ಕೊಡ್ತಾರೆ ಅಂತ ಅಭಿಮಾನಿಗಳೆಲ್ಲ ಕಾಯ್ತಾ ಇರೋ ಹೊತ್ತಲ್ಲೇ ರಿಷಬ್ ಶೆಟ್ಟಿ ಮತ್ತೊಂದು ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಆದ್ರೆ ಇದು ಕಾಂತಾರ 2 ಸಿನಿಮಾ ಬಗ್ಗೆ ಅಲ್ಲ ಬೇರೆ ವಿಷಯದ ಬಗ್ಗೆ. ಈ ಬಗ್ಗೆ ಸ್ವತಃ ತಾವೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಹಾಕಿರುವ ಸೋಶಿಯಲ್ ಮೀಡಿಯಾ ಪೋಸ್ಟ್ ಹೀಗಿದೆ: ‘ಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ.. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ಇಂದು ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ, ‘ಕೆರಾಡಿ ಸ್ಟುಡಿಯೋಸ್’ ಎಂಬ ವೇದಿಕೆಯ ಮೂಲಕ ಚಿತ್ರಗಳRead More →

masthmagaa.com: ಸುದೀಪ್‌ ಅವರ 46ನೇ ಚಿತ್ರಕ್ಕೆ ಅವರ ಅಭಿಮಾನಿಗಳು ಕಾತರದಿಂದ ಕಾಯ್ತಾ ಇದ್ರು. ವಿಕ್ರಾಂತ್‌ ರೋಣ ಸಿನಿಮಾ ಆದಮೇಲೆ ಸುದೀಪ್‌ ಯಾವ ಸಿನಿಮಾಗೂ ಸಹಿ ಹಾಕಿರಲಿಲ್ಲ. ಸಿಸಿಎಲ್​ ಮತ್ತು ಕೆಸಿಸಿನಲ್ಲಿ ಬ್ಯುಸಿ ಆಗಿಬಿಟ್ಟಿದ್ರು. ನಂತರ ಬಿಜೆಪಿ ಪರವಾಗಿ ರಾಜ್ಯಾದ್ಯಂತ ಕ್ಯಾಂಪೇನ್​ ಮಾಡೋದ್ರಲ್ಲಿ ಬ್ಯುಸಿ ಆದ್ರು. ಹಾಗಾಗಿ ಅವರ ನೆಕ್ಸ್ಟ್‌ ಸಿನಿಮಾದ ಅಪ್‌ಡೇಟ್‌ಗಾಗಿ ಎಲ್ಲರೂ ಕಾಯ್ತಾ ಇದ್ರು. ಈಗ ಸುದೀಪ್‌ ಅವರ 46ನೇ ಸಿನಿಮಾಗೆ ಮುಹೂರ್ತ ಕೂಡಿಬಂದಿದೆ. ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಜೊತೆ ಸುದೀಪ್ ಸಿನಿಮಾ ಮಾಡಲಿದ್ದಾರೆ. ‘ವಿ ಕ್ರಿಯೇಷನ್ಸ್​’ ಮೂಲಕ ಅವರ ಹೊಸ ಸಿನಿಮಾ ರೆಡಿ ಆಗಲಿದೆ. ತಮಿಳಿನಲ್ಲಿ ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ಸಿನಿಮಾಗಳನ್ನು ‘ವಿ ಕ್ರಿಯೇಷನ್ಸ್​’ ನಿರ್ಮಾಣ ಮಾಡಿದೆ. ಅಂತಹ ದೊಡ್ಡ ಬ್ಯಾನರ್​ ಜೊತೆ ಸುದೀಪ್​ ಅವರು ಸಿನಿಮಾ ಮಾಡ್ತಾ ಇರೋದು ವಿಶೇಷ. ಇನ್ನೂ ಈ ವಿ ಕ್ರಿಯೇಷನ್ಸ್‌ನ ಸಂಸ್ಥಾಪಕ ಕಲೈಪುಲಿ ಎಸ್​. ಥನು ಅವರು ತಮ್ಮ ಯ್ಯುಟ್ಯುಬ್‌ ಚಾನೆಲ್‌ನಲ್ಲಿ “ಬಾದ್‌ಶಾ ಕಿಚ್ಚ ಸುದೀಪ್‌ ಜೊತೆ ಕೆಲಸ ಮಾಡ್ತಾ ಇರೋದಕ್ಕೆ ಖುಷಿ ಆಗ್ತಾ ಇದೆ.Read More →

masthmagaa.com: ಬಾಲಿವುಡ್‌ನ ಹಲವು ವಿಷಯಗಳ ಬಗ್ಗೆ ಪ್ರಿಯಾಂಕ ಚೋಪ್ರಾ ಈಗ ಒಪನ್‌ ಆಗೇ ಹೇಳ್ತಾ ಇದಾರೆ. ಈ ಹಿಂದೆ ತನ್ನ ಬಣ್ಣದಿಂದ ಅನುಭವಿಸಿದ ಕಷ್ಟಗಳ ಬಗ್ಗೆ ಪ್ರಿಯಾಂಕ ಮಾತಾಡಿದ್ರು . ಈಗ ಬಾಲಿವುಡ್‌ನ ಮತ್ತೊಂದು ಅಸಲಿ ಮುಖವನ್ನ ಸಮಾಜದ ಎದುರು ತೆರೆದಿಟ್ಟಿದ್ದಾರೆ. ದಿ ಜೋ ರಿಪೋರ್ಟ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕ ಮಾತನಾಡಿದ್ದಾರೆ. “ಆಗಷ್ಟೇ ನಾನು ಬಾಲಿವುಡ್​ಗೆ ಕಾಲಿಟ್ಟಿದ್ದೆ. ಒಂದು ಸಿನಿಮಾವನ್ನೂ ಸಹ ಒಪ್ಪಿಕೊಂಡಿದ್ದೆ. ಅದರಲ್ಲಿ ನಾನು ಡ್ಯಾನ್ಸ್ ಮಾಡಬೇಕಿತ್ತು. ಆಗ ನಿರ್ದೇಶಕರು ನನ್ನ ಬಳಿ ಬಂದು ನೀವು ನೃತ್ಯ ಮಾಡುತ್ತ ನಿಮ್ಮ ಒಳ ಉಡುಪಗಳನ್ನೆಲ್ಲ ಕಳಚಬೇಕು ಅಂತ ಹೇಳಿದ್ರು. ನನಗೆ ತುಂಬ ಸಿಟ್ಟು ಬಂತು, ಏನು ಹೇಳಬೇಕು ಅಂತಾನೇ ಗೊತ್ತಾಗಲಿಲ್ಲ. ಆದರೆ ಅದಕ್ಕೆ ಒಪ್ಪಲಿಲ್ಲ. ಮರುದಿನವೇ ಆ ಪ್ರಾಜೆಕ್ಟ್​ ಅನ್ನ ಬಿಟ್ಟೆ. ನನಗೆ ಅದರಲ್ಲಿ ನಟಿಸಲು ಇಷ್ಟವಿಲ್ಲ ಅಂತ ಹೇಳಿದ್ದೆ. ಶೂಟಿಂಗ್​ ಸೆಟ್​ನಲ್ಲಿ ನನ್ನ ಒಳ ಉಡುಪು ಬಿಚ್ಚಲು ಹೇಳಿದ ನಿರ್ದೇಶಕನಿಗೆ ನಾನು ಏನೂ ಬೈದಿರಲಿಲ್ಲ. ಅವನ ವಿರುದ್ಧ ಸಹ ಮಾತನಾಡಲಿಲ್ಲ. ಯಾಕಂದ್ರೆ ಆತನ ವಿರುದ್ಧ ಮಾತಾಡೋಕೆ ನನಗೆRead More →

masthmagaa.com: ಸ್ನೇಹಿತರೇ, ಸಿನಿಮಾ ಅಂದ ತಕ್ಷಣ ಕೇವಲ ಎಂಟರ್ಟೈನ್ ಮೆಂಟ್ ಅಷ್ಟೇ ಅಂತ ನಾವು ಭಾವಿಸ್ತೀವಿ. ಆದ್ರೆ ಅದನ್ನು ಹೊರತುಪಡಿಸಿ ನಮ್ಮನ್ನ ಯಾವುದಾದರೂ ಒಂದು ರೀತಿಯಲ್ಲಿ inspire ಮಾಡಬಹುದಾದಂತಹ ಎಷ್ಟೋ ಸಿನಿಮಾಗಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಬಂದಿವೆ, ಬರ್ತಾನೂ ಇರುತ್ತವೆ. 80, 90 ರ ದಶಕದಲ್ಲಿ ಅಣ್ಣಾವ್ರು ಅಭಿನಯಿಸಿದ್ದ ಚಿತ್ರಗಳೆಲ್ಲವೂ ಸ್ಫೂರ್ತಿಯ ಚಿಲುಮೆಯೇ ಆಗಿದ್ದವು. Inspirational ಸಿನಿಮಾಗಳಿಗೆ care of address ಅಣ್ಣಾವ್ರು ಆಗಿದ್ದರು. ಅಣ್ಣಾವ್ರ ಬಹುತೇಕ ಸಿನಿಮಾಗಳು ಒಬ್ಬ ideal ಪರ್ಸನ್ ಹೇಗಿರಬೇಕು, ಆತನ ನಡೆ ನುಡಿ ಹೇಗಿರಬೇಕು, ಗುರು ಹಿರಿಯರಿಗೆ ಯಾವ ರೀತಿ ಗೌರವ ಕೊಡಬೇಕು, ಹೆಣ್ಣುಮಕ್ಕಳ ಹತ್ತಿರ ಹೇಗೆ ನಡ್ಕೋಬೇಕು ಅನ್ನೋದನ್ನ ಸಾರಿ ಸಾರಿ ಹೇಳುತ್ತಿದ್ದವು. ವಿಚಾರದ ಜೊತೆಗೆ ವ್ಯಕ್ತಿತ್ವ ವಿಕಸನದ visual document ರೀತಿ ಅಣ್ಣಾವ್ರ ಎಷ್ಟೋ ಸಿನಿಮಾಗಳು ಜನಮನವನ್ನು ಸೆಳೆಯುತ್ತಿದ್ದವು ಅನ್ನೋದರಲ್ಲಿ ಅನುಮಾನವೇ ಇಲ್ಲ. Dr. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ಬಿಡುಗಡೆ ಆದಾಗ ಕೆಲಸಕ್ಕಾಗಿ ಹಳ್ಳಿ ಬಿಟ್ಟು ಸಿಟಿ ಸೇರಿದ್ದ ಲಕ್ಷಾಂತರ ಜನ ಪುನಃ ಹಳ್ಳಿಗಳಿಗೆ ಮುಖRead More →

masthmagaa.com: ಅಜಿತ್‌ ಕುಮಾರ್‌ ಸದ್ಯ ಬೈಕ್‌ ಟ್ರಿಪ್‌ ಮಾಡೋದ್ರಲ್ಲಿ ಬ್ಯುಸಿ ಇದಾರೆ. ಮೊನ್ನೆ ಅಷ್ಟೇ ಹೊಸ ಮೋಟೋ ಸೈಕಲ್‌ ಎಂಬ ಕಂಪನಿಯನ್ನ ಶುರು ಮಾಡಿ ಸುದ್ದಿಯಾಗಿದ್ರು. ಭಾರತದ ಮಾತ್ರ ಅಲ್ಲದೇ ನೇಪಾಳ, ಭೂತಾನ್ ಮತ್ತು ಯುರೋಪ್‌ನ ಕೆಲವು ಭಾಗಗಳನ್ನು ಬೈಕ್‌ ರೈಡ್‌ನಲ್ಲೇ ನೋಡಿದ್ದಾರೆ. ಅಷ್ಟೆಲ್ಲಾ ಬೈಕ್‌ ಕ್ರೇಜ್‌ ಇರುವಂತ ನಟ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತನ್ನ ಜೊತೆಗೆ ಬಂದಿದ್ದ ಸಹ ಸವಾರನಿಗೆ 12.5 ಲಕ್ಷದ ಬೈಕ್‌ ಅನ್ನ ಗಿಫ್ಟ್‌ ಕೊಟ್ಟಿದ್ದಾರೆ. ಮೇ ತಿಂಗಳಿನಲ್ಲಿ ಅಜಿತ್‌ ಅವರು ನೇಪಾಳ ಮತ್ತು ಭೂತಾನ್‌ ಪ್ರವಾಸವನ್ನ ಸಂಪೂರ್ಣವಾಗಿ ಮುಗಿಸಿದ್ದಾರೆ. ಈ ಪ್ರವಾಸಕ್ಕೆ ಸುಗತ್ ಸತ್ಪತಿ ಅವರು ಅಜಿತ್‌ ಅವರಿಗೆ ಟ್ರಿಪ್‌ ಪ್ಲಾನಿಂಗ್‌ಗೆ ಸಹಾಯ ಮಾಡಿದ್ರಂತೆ. ಹಾಗಾಗಿ ಅಜಿತ್‌ ಕುಮಾರ್‌ ಸುಗತ್ ಸತ್ಪತಿ ಅವರಿಗೆ 12.5 ಲಕ್ಷ ಮೌಲ್ಯದ ಬಿ.ಎಂ.ಬ್ಲ್ಯೂ. ಬೈಕ್‌ ಅನ್ನ ಗಿಫ್ಟ್‌ ಆಗಿ ನೀಡಿದ್ದಾರೆ. ನವೆಂಬರ್‌ ತಿಂಗಳಲ್ಲಿ ಇವರಿಬ್ಬರೂ ಇನ್ನೊಂದು ಬೈಕ್‌ ರೈಡ್‌ಗೆ ರೆಡಿ ಆಗ್ತಾ ಇದಾರಂತೆ. ಇದನ್ನ ಸುಗತ್ ಸತ್ಪತಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಹಾಗೂ ಅಜಿತ್‌Read More →

masthmagaa.com: ಪ್ಯಾನ್‌ ಇಂಡಿಯಾ ಪೊನ್ನಿಯನ್‌ ಸೆಲ್ವನ್‌ 2 ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್‌ ಮಾಡಿತ್ತು. ರಿಲೀಸ್‌ ಆದ 25 ದಿನಗಳಲ್ಲಿ 350 ಕೋಟಿಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್​ನಲ್ಲಿ ಕಲೆಕ್ಷನ್ ಮಾಡಿತ್ತು. ಏಪ್ರಿಲ್ 28 ರಂದು ಐದು ಭಾಷೆಗಳಲ್ಲಿ ರಿಲೀಸ್‌ ಆದ ಈ ಚಿತ್ರ ಇದೀಗ ಒಟಿಟಿಗೆ ಬರೋಕೆ ರೆಡಿಯಾಗಿದೆ. ಈಗಾಗಲೇ ಪೊನ್ನಿಯನ್‌ ಸೆಲ್ವನ್‌ ಭಾಗ 1 ಅಮೇಜಾನ್‌ ಪ್ರೈಮ್‌ನಲ್ಲಿ ಸಿಗತ್ತೆ. ಈಗ ಪೊನ್ನಿಯನ್‌ ಸೆಲ್ವನ್‌ ಚಿತ್ರದ 2 ನೇ ಭಾಗ ಕೂಡ ಅಮೇಜಾನ್‌ ಪ್ರೈಮ್‌ನಲ್ಲೇ ರಿಲೀಸ್‌ ಆಗಲಿದೆ. ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಜೂನ್ 2 ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ವಿಕ್ರಂ, ಐಶ್ವರ್ಯಾ ರೈ, ತ್ರಿಷಾ, ಕಾರ್ತಿ, ಜಯಂ ರವಿ, ಶೋಭಿತಾ ದುಲಿಪಾಲ, ಐಶ್ವರ್ಯಾ ಲಕ್ಷ್ಮಿ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ-ನಟಿಯರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪೊನ್ನಿಯಿನ್ ಸೆಲ್ವನ್ ಕಾದಂಬರಿಯನ್ನೇ ಮಣಿರತ್ನಂ ಅವರು ಎರಡು ಭಾಗಗಳನ್ನಾಗಿ ಮಾಡಿ ಸಿನಿಮಾ ಮಾಡಿದ್ದಾರೆ. ಕಾದಂಬರಿಯಲ್ಲಿ ಕೆಲವೊಂದು ಕಡೆ ಬದಲಾವಣೆ ಮಾಡಿ ಸಿನಿಮಾ ಮಾಡಿದ್ದಾರೆ. -masthmagaa.com ShareRead More →

masthmagaa.com: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಮೋದಿ ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ಅನಿವಾಸಿ ಭಾರತೀಯರ ಬಗ್ಗೆ ಇಂದು (ಮೇ 23) ಭಾಷಣ ಮಾಡಿದ್ದಾರೆ.ಮೋದಿಯವರನ್ನ ಸ್ವಾಗತ ಮಾಡಲು ಹಲವು ಮನರಂಜನೆ ಕಾರ್ಯಕ್ರಮಗಳನ್ನ ಏರ್ಪಡಿಸಲಾಗಿತ್ತು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಯ ಕುರಿತಾದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಪ್ರಸಿದ್ದಕನ್ನಡ ಚಿತ್ರ ಕಾಂತಾರದ ವರಾಹ ರೂಪಂ ಹಾಡಿಗೂ ಕೂಡ ನೃತ್ಯ ಮಾಡಿದ್ದಾರೆ. ಕಾಂತಾರ ಸಿನಿಮಾದ ಗುಳಿಗ ವೇಷ ಹಾಕಿಕೊಂಡು ಯಕ್ಷಗಾನ ವೇಷಧಾರಿಗಳು ಹಾಗೂ ಕೆಲವು ಮಹಿಳೆಯರು ವರಾಹ ರೂಪಂ ಹಾಗೂ ವಾ ಪೊರ್ಲು ಯಾ ಹಾಡಿಗೆ ಜನಪದ ಹಾಗೂ ಭರತ ನಾಟ್ಯ ರೀತಿಯಲ್ಲಿ ನೃತ್ಯ ಮಾಡಿದ್ರು. ಭಾರತದ ಹಲವು ರಾಜ್ಯಗಳ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಆ ರಾಜ್ಯಗಳ ಸಾಂಸ್ಕೃತಿಕ ನೃತ್ಯಗಳನ್ನು ವೇದಿಕೆ ಮೇಲೆ ಮಾಡಿದ್ರು. ತೆಲುಗು ರಾಜ್ಯದ ಪರವಾಗಿ RRR ಸಿನಿಮಾದ ನಾಟು ನಾಟು ಹಾಡಿಗೂ ಕೂಡ ಹೆಜ್ಜೆ ಹಾಕಿದ್ರು. ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದ ನಂತರ ಮಾತನಾಡಿದ ಮೋದಿ, ”ನಮ್ಮ ಜೀವನಶೈಲಿ ವಿಭಿನ್ನವಾಗಿರಬಹುದು ಆದರೆ ಈಗ ಯೋಗRead More →