masthmagaa.com: ತಂಟೆಕೋರ ಚೀನಾಗೆ ಈ ಬಾರಿ ಭಾರತದ ಸೇನಾ ಮುಖ್ಯಸ್ಥರೇ ಎಚ್ಚರಿಕೆ ಕೊಟ್ಟಿದ್ದಾರೆ. ಭಾರತದಲ್ಲಿ ನಡೆದ 13ನೇ ಇಂಡೋ-ಪೆಸಿಫಿಕ್‌ ಸೇನಾ ಮುಖ್ಯಸ್ಥರ ಸಮಾವೇಶದಲ್ಲಿ ಭಾರತದ ಆರ್ಮಿ ಚೀಫ್ ಮನೋಜ್‌ ಪಾಂಡೆ ಮಾತನಾಡಿದ್ರು. ಇಂಡೋ-ಪೆಸಿಫಿಕ್‌ನ ಶಾಂತಿಗಾಗಿ ಹಲವು ದೇಶಗಳು ಪ್ರಯತ್ನಿಸುತ್ತಿದ್ದರೂ ಕೆಲವು ರಾಷ್ಟ್ರಗಳು ಮಾತ್ರ ಈ ಭಾಗದಲ್ಲಿ ಸ್ಪರ್ಧೆ ಮಾಡ್ತಿರೋದನ್ನ ನಾವು ನೋಡುತ್ತಿದ್ದೇವೆ. ಕೆಲವು ದೇಶಗಳು ಲೀಸ್‌ ಹೆಸರಲ್ಲಿ ಭೂ ಭಾಗಗಳನ್ನ ಸ್ವಾಧೀನಪಡಿಸಿಕೊಳ್ಳುತ್ತಿವೆ. ಮತ್ತು ಮಿಲಿಟರಿ ನೆಲೆಗಳನ್ನ ಸ್ಥಾಪಿಸಲು ಕೃತಕ ದ್ವೀಪಗಳನ್ನ ವಿಸ್ತರಿಸುತ್ತಿವೆ. ಇದು ಭದ್ರತಾ ಕಳವಳಕ್ಕೆ ಕಾರಣವಾಗಿದೆ ಅಂತ ಜನರಲ್ ಪಾಂಡೆ ಚೀನಾ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ. ‌ಇದೇ ವೇಳೆ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ, ಹಾಗೂ ವಿವಾದಗಳನ್ನು ಶಾಂತಿಯುತ ಮಾರ್ಗದಲ್ಲಿ ಬಗೆಹರಿಸಿಕೊಳ್ಳಬೇಕು. ಸೇನೆ ಬಳಕೆಗೆ ಹಚ್ಚಿನ ಒತ್ತು ನೀಡಬಾರದು. ಇಂಡೋ ಪೆಸಿಫಿಕ್‌ ಭಾಗದ ಶಾಂತಿಯಲ್ಲಿ ಇದು ಭಾರತದ ನಿಲುವು ಅಂತ ಸೇನಾ ಮುಖ್ಯಸ್ಥರು ಹೇಳಿದ್ದಾರೆ. ಇನ್ನು ಇದೇ ಸಭೆಯಲ್ಲಿ ಅಮೆರಿಕ ಸೇನಾ ಮುಖ್ಯಸ್ಥ ಜನರಲ್‌ ರಾಂಡಿ ಜಾರ್ಜ್‌ ಕೂಡ ಭಾಗವಹಿಸಿದ್ರು. ಇಂಡೋ- ಪೆಸಿಫಿಕ್‌ನ ಸ್ಥಿರತೆಗಾಗಿ ಅಮೆರಿಕ ಮತ್ತುRead More →

masthmagaa.com: ರಾಜ್ಯದಲ್ಲಿ ಕಾವೇರಿ ಹೋರಾಟಗಳು ಮುಂದುವರೆದಿವೆ. ಇದೀಗ ತಮಿಳುನಾಡಿಗೆ ನೀರು ಬಿಡುತ್ತಿರುವ ಕರ್ನಾಟಕ ಸರ್ಕಾರದ ವಿರುದ್ಧ ಇಂದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದ್ದು, ಇವರು ಡಿಎಂಕೆ ಏಜೆಂಟ್‌ಗಳು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತಾಡಿರುವ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ, ನಮ್ಮ ಬಹುತೇಕ ಎಲ್ಲಾ ಜಲಾಶಯಗಳಲ್ಲಿ ನೀರಿಲ್ಲ. ಕುಡಿಯುವ ಉದ್ದೇಶಕ್ಕೂ ಇರುವ ನೀರು ನಮಗೆ ಸಾಕಾಗುತ್ತಿಲ್ಲ. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ಪ್ರಧಾನಿ ಇದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ಸಿಎಂ ಹಾಗೂ ಡಿಸಿಎಂ ತಮಿಳುನಾಡಿನ ಏಜೆಂಟರಂತೆ ವರ್ತಿಸುತ್ತಿರುವುದರಿಂದ ಕರ್ನಾಟಕ ಬಿಕ್ಕಟ್ಟು ಎದುರಿಸುತ್ತಿದೆ ಅಂತ ಆರೋಪಿಸಿದ್ದಾರೆ. ಇತ್ತ ಕಾವೇರಿ ನೀರು ಬಿಡುವಂತೆ ಪ್ರಾಧಿಕಾರ ನೀಡಿರೋ ಆದೇಶದ ವಿರುದ್ದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸ್ತೀವಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಕ್ಟೋಬರ್ 15ರವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ಪ್ರಾಧಿಕಾರ ಆದೇಶಿಸಿದೆ. ನಾನು ವಕೀಲರೊಂದಿಗೆ ಮಾತನಾಡಿದ್ದೇನೆ. ಅವರುRead More →

masthmagaa.com: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ವಿಚಾರ ಅಧಿಕೃತವಾಗಿ ಹೊರ ಬೀಳ್ತಿದ್ದಂಗೆ ಉಭಯ ಪಕ್ಷಗಳಲ್ಲಿನ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೀಗ ಯಶವಂತಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಸ್ಥಳೀಯ ನಾಯಕರು ಇಂದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಇತ್ತ ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಆದ ತಕ್ಷಣ ಮುಸ್ಲಿಮರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ನಾನಿನ್ನೂ ಬದುಕಿದ್ದೇನೆ, ಮುಸ್ಲಿಂ ಸಮುದಾಯವನ್ನ ನಮ್ಮ ಜೊತೆ ಉಳಿಸಿಕೊಳ್ಳುತ್ತೇವೆ. ಈ ಬಗ್ಗೆ ಯಾವ ಆತಂಕ ಕೂಡ ಬೇಡ ಅಂತ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದ್ದಾರೆ. ಜೊತೆಗೆ ಈ ಮೈತ್ರಿ ಮಾಡಿಕೊಳ್ಳುವಂತೆ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಸಲಹೆ ನೀಡಿದ್ದು ನಾನೇ ಅಂತ ದೇವೇಗೌಡರು ಹೇಳಿದ್ದಾರೆ. ಇದೇ ವೇಳೆ ಮಾತಾಡಿರುವ ಕುಮಾರಸ್ವಾಮಿ, 2018 ರಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ,‌ಡಿಕೆ ಶಿವಕುಮಾರ್, ಪರಮೇಶ್ವರ್ ಇದ್ರು. ನಮ್ಮ ಪಕ್ಷಕ್ಕೆ ನನ್ನ ಮಗನಿಗೆ ಸಿಎಂ ಸ್ಥಾನ ಬೇಡ ಎಂದುRead More →

masthmagaa.com: 2023ರ ಮೊದಲಾರ್ಧದಲ್ಲಿ ಪ್ರತಿದಿನ ಒಂದಕ್ಕಿಂತ ಹೆಚ್ಚು ದ್ವೇಷ ಭಾಷಣ ಅಥವಾ ಮುಸ್ಲಿಂರನ್ನು ಗುರಿಯಾಗಿಸಿದ ರ‍್ಯಾಲಿಗಳು ನಡೆದಿವೆ ಅಂತ ಹಿಂದುತ್ವ ವಾಚ್‌ ವರದಿ ಮಾಡಿದೆ. 2023ರ ಮೊದಲ ಆರು ತಿಂಗಳಲ್ಲಿ ಮುಸ್ಲಿಂರನ್ನು ಗುರಿಯಾಗಿಸಿಕೊಂಡು ಒಟ್ಟು 255 ದ್ವೇಷ ಭಾಷಣ ಸಭೆಗಳು ಅಥವಾ ರ‍್ಯಾಲಿಗಳು ನಡೆದಿದ್ದು, ಈ ಪೈಕಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಹೆಚ್ಚು ವರದಿಯಾಗಿವೆ ಅಂತ ಹಿಂದುತ್ವ ವಾಚ್ ಹೇಳಿದೆ. ಇನ್ನು ಈ ದ್ವೇಷ ಭಾಷಣದ ಘಟನೆಗಳು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ನಡೆದಿದ್ರೆ, ನಂತರ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಉತ್ತರಾಖಂಡ ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 1 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದರೂ, ಈ ವರ್ಷ ಸುಮಾರು ಶೇಕಡಾ 5 ರಷ್ಟು ದ್ವೇಷ ಭಾಷಣದ ಪ್ರಕರಣಗಳು ವರದಿಯಾಗಿವೆ ಎಂದು ಹಿಂದುತ್ವ ವಾಚ್ ತಿಳಿಸಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಏರ್ ಇಂಡಿಯಾ ತನ್ನ ಮಹಿಳಾ ಕ್ಯಾಬಿನ್ ಸಿಬ್ಬಂದಿಯ ಸಮವಸ್ತ್ರದಲ್ಲಿ ಬದಲಾವಣೆ ತರಲು ಮುಂದಾಗಿದೆ ಅಂತ ತಿಳಿದು ಬಂದಿದೆ. ಕಳೆದ 60 ವರ್ಷಗಳಿಂದ ಫ್ಲೈಟ್ ಅಟೆಂಡೆಂಟ್‌ಗಳು ಸಾಂಪ್ರದಾಯಿಕ ಭಾರತೀಯ ಉಡುಗೆಯಾದ ಸೀರೆಗಳನ್ನು ಧರಿಸುತ್ತಿದ್ದರು. ಆದರೆ ಈಗ ಏರ್‌ ಇಂಡಿಯಾ ಗಗನಸಖಿಯರ ಸೀರೆ ಟ್ರೆಂಡ್‌ ಬದಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಹೊಸದಾಗಿ ತಮ್ಮ ಮಹಿಳಾ ಸಿಬ್ಬಂದಿಗೆ ಡಿಸೈನರ್‌ ಚೂಡಿದಾರ್‌ಗಳು ಹಾಗೂ ಪುರುಷ ಸಿಬ್ಬಂದಿಗೆ ಡಿಸೈನರ್‌ ಸೂಟ್‌ಗಳನ್ನು ಕಂಪನಿ ವಿನ್ಯಾಸ ಮಾಡುತ್ತಿದೆ. ಪ್ರಖ್ಯಾತ ಫ್ಯಾಶನ್‌ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಈ ಹೊಸ ಸಮವಸ್ತ್ರಗಳನ್ನು ವಿನ್ಯಾಸ ಮಾಡಲಿದ್ದಾರೆ ಅನ್ನೋ ಸುದ್ಧಿ ಹರಿದಾಡ್ತಿದೆ. ಅಂದ್ಹಾಗೆ ಜೆಆರ್‌ಡಿ ಟಾಟಾ ಅವರು 1962ರಲ್ಲಿ ಏರ್‌ ಇಂಡಿಯಾ ಮಹಿಳಾ ಸಿಬ್ಬಂದಿಗೆ ಸೀರೆಯನ್ನು ಪರಿಚಯಿಸಿದ್ದರು. ಅಂದಿನಿಂದ ಏರ್‌ ಇಂಡಿಯಾ ಇದೇ ಟ್ರೆಂಡ್‌ ಮುಂದುವರಿಸಿಕೊಂಡು ಬಂದಿತ್ತು. -masthmagaa.com Share on: WhatsAppContact Us for AdvertisementRead More →

masthmagaa.com: ಗುಜರಾತ್‌ನಲ್ಲಿ ಹೂಡಿಕೆ ಮಾಡದಂತೆ ವಿದೇಶಿ ಹೂಡಿಕೆದಾರರಿಗೆ ಬೆದರಿಕೆ ಹಾಕಲಾಗಿತ್ತು ಅಂತ ಪ್ರಧಾನಿ ಮೋದಿ ಹಿಂದಿನ ಯುಪಿಎ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ. ಗುಜರಾತ್‌ನಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಈ ರೀತಿಯ ಶೃಂಗಸಭೆಯಲ್ಲಿ ಭಾಗವಹಿಸಲು ಅಂದಿನ ಕೇಂದ್ರ ಸಚಿವರು ನಿರಾಕರಿಸಿದ್ದರು. ಗುಜರಾತ್‌ನಲ್ಲಿ ಬಂಡವಾಳ ಹೂಡಿಕೆ ಮಾಡಬಾರದು ಅಂತ ವಿದೇಶಿ ಹೂಡಿಕೆದಾರರಿಗೆ ಬೆದರಿಕೆ ಹಾಕಲಾಗಿತ್ತು. ಇನ್ವೆಸ್ಟರ್ಸ್‌ ಹೂಡಿಕೆ ಮಾಡಲು ಮುಂದಾದ್ರೂ ಅವರಿಗೆ ಯಾವುದೇ ಬೆಂಬಲ ಸಿಗ್ತಿರಲಿಲ್ಲ ಅಂತ ಮೋದಿ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 479 ರೂಪಾಯಿ ಕಡಿಮೆಯಾಗಿ ₹58,454 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂಪಾಯಿ ಕಡಿಮೆಯಾಗಿ ₹53,540 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 627 ರೂಪಾಯಿ ಕಡಿಮೆಯಾಗಿ ₹70,930 ಆಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 173 ಅಂಕ ಏರಿಕೆ ಕಂಡು 66,118ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 51 ಅಂಕ ಏರಿಕೆ ಕಂಡು 19,716 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 05 ಪೈಸೆ ಏರಿಕೆ ಕಂಡು 83.21 ಆಗಿದೆ. (83 ರೂಪಾಯಿ 21 ಪೈಸೆ). -masthmagaa.com Share on: WhatsAppContact Us for AdvertisementRead More →

masthmagaa.com: 2024ರ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಸ್ಪರ್ಧಿಸಲು ಮಲಯಾಳಂನ `2018- Everyone is a hero’ ಸಿನಿಮಾ ಅಧಿಕೃತವಾಗಿ ಪ್ರವೇಶ ಪಡಿದಿದೆ. ಈ ವಿಷಯನ್ನು ಇಂದು ಚೆನ್ನೈನಲ್ಲಿ ಫಿಲ್ಮ್‌ ಫೆಡರೇಷನ್‌ ಆಫ್ ಇಂಡಿಯಾ ಪ್ರಕಟಿಸಿದ್ದು, 16 ಜನ ಜ್ಯೂರಿಗಳಿರುವ ತಂಡ 2018 ಸಿನಿಮಾವನ್ನು ಅವಿರೋಧವಾಗಿ ಆಯ್ಕೆ ಮಾಡಿದೆ ಅಂತ ಆಯ್ಕೆ ಸಮಿತಿ ಅಧ್ಯಕ್ಷ ಗಿರೀಶ್ ಕಾಸರವಳ್ಳಿ ತಿಳಿಸಿದ್ದಾರೆ. 2024ರ ಆಸ್ಕರ್ ಪ್ರಶಸ್ತಿಯ ‘ಅತ್ಯುತ್ತಮ ಅಂತರರಾಷ್ಟ್ರೀಯ ವೈಶಿಷ್ಟ್ಯದ ಚಿತ್ರ’ ವಿಭಾಗಕ್ಕೆ 2018 ಸಿನಿಮಾವನ್ನು ಕಳುಹಿಸಿಕೊಡಲಾಗಿದೆ ಅಂತ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಗೋವುಗಳ ಸಾಕಾಣಿಕೆ ಹೆಸರಿನಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ದೇಶದಲ್ಲಿ ಇಸ್ಕಾನ್ ಅತಿ ದೊಡ್ಡ ವಂಚನೆ ಮಾಡ್ತಿದೆ ಅಂತ ಬಿಜೆಪಿ ಸಂಸದೆ ಮನೇಕಾ ಗಾಂಧಿ ಆರೋಪಿಸಿದ್ದಾರೆ. ಮೇನಕಾ ಗಾಂಧಿ ಅವರು ಇಸ್ಕಾನ್ ಮೇಲೆ ಮಾಡಿರುವ ಗಂಭೀರ ಆರೋಪದ ವೀಡಿಯೋ ವೈರಲ್ ಆಗಿದೆ. ಈ ದೇಶದಲ್ಲಿ ಅತೀ ದೊಡ್ಡ ಮೋಸಗಾರರು ಅಂದ್ರೆ ಅದು ಇಸ್ಕಾನ್. ಇವರು ಗೋ ಶಾಲೆಗಳನ್ನು ನಡೆಸಲು ಸರ್ಕಾರದಿಂದ ಬೇಕಾದ ಸೌಲಭ್ಯ, ದೊಡ್ಡ ದೊಡ್ಡ ಜಮೀನುಗಳು, ಗೋಮಾಳಗಳು ಎಲ್ಲ ವ್ಯವಸ್ಥೆ ಸಿಗುತ್ತವೆ. ಇತ್ತೀಚೆಗಷ್ಟೇ ನಾನು ಇಸ್ಕಾನ್‌ನ ಅನಂತಪುರದ ಗೋ ಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಹಾಲು ಕೊಡದ ಒಂದೇ ಒಂದು ಹಸುವಾಗಲಿ ಇಲ್ಲವೇ ಕರುಗಳಾಲಿ ಇರಲಿಲ್ಲ. ಯಾಕಂದ್ರೆ ಎಲ್ಲಾ ಕರುಗಳು ಹಾಗೂ ಹಸುಗಳನ್ನ ಮಾರಾಟ ಮಾಡಲಾಗಿದೆ ಅಂತ ಆರೋಪಿಸಿದ್ದಾರೆ. ಬೀದಿ ಬೀದಿಗಳಲ್ಲಿ ಹರೇ ರಾಮ್- ಹರೇ ಕೃಷ್ಣ ಎಂದು ಹೇಳಿಕೊಂಡು ಅಡ್ಡಾಡುವ ಇವರು ಹಾಲಿನಲ್ಲೇ ಅವರ ಜೀವನವಿದೆ ಎಂಬಂತೇ ಹೇಳಿಕೊಳ್ಳುತ್ತಾರೆ. ಆದರೆ ಇಸ್ಕಾನ್ ಅವರು ಕಸಾಯಿಖಾನೆಗೆ ಮಾರಿದಷ್ಟು ಗೋವುಗಳನ್ನ ಬೇರೆ ಯಾರೂ ಮಾರಿರೋಕೆ ಸಾಧ್ಯವೇRead More →