masthmagaa.com: ದೇಶದ ಹೈ ವೋಲ್ಟೇಜ್‌ ಎಲೆಕ್ಷನ್‌ ಅಂತ ಕರೆಯಲಾಗ್ತಿರೋ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಡೆಗೂ ದಿನಾಂಕ ಪ್ರಕಟವಾಗಿದೆ. ಇಂದು ಬೆಳಿಗ್ಗೆ ಭಾರತೀಯ ಚುನಾವಣಾ ಆಯೋಗದ ಮುಖ್ಯಸ್ಥ ಪಿ ರಾಜೀವ್‌ ಕುಮಾರ್‌ ಎಲೆಕ್ಷನ್‌ ಡೇಟ್‌ ಅನೌನ್ಸ್‌ ಮಾಡಿದ್ದಾರೆ. ಮೇ 10ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯುತ್ತೆ. ಮೇ 13ನೇ ತಾರೀಖು 224 ಕ್ಷೇತ್ರಗಳ ಫಲಿತಾಂಶ ಹೊರಬೀಳುತ್ತೆ. ಏಪ್ರಿಲ್‌ 13ಕ್ಕೆ ಗೆಜೆಟ್ ನೋಟಿಫಿಕೇಷನ್ ಅಗುತ್ತೆ,ಏಪ್ರಿಲ್‌ 20ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಏಪ್ರಿಲ್ 21ನೇ ತಾರೀಖು ನಾಮಪತ್ರಗಳ ಪರಿಶೀಲನೆ ಆಗುತ್ತೆ ನಾಮಪತ್ರ ವಾಪಸ್ ಪಡೆಯೋಕೆ ಏಪ್ರಿಲ್ 24 ಕೊನೆಯ ದಿನ ಆಗಿದೆ. ಇನ್ನು ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ನೀತಿ ಸಂಹಿತೆ ಕೂಡ ಜಾರಿಯಾಗಿದೆ. ಚುನಾವಣಾ ಅಕ್ರಮ ತಡೆಯೋಕೆ 2,400 ವಿಚಕ್ಷಣ ತಂಡ ನಿಯೋಜನೆ ಮಾಡಲಾಗಿದೆ. ಅಕ್ರಮಗಳ ಮೇಲೆ ನಿಗಾವಹಿಸಲು 2016 ಫ್ಲೈಯಿಂಗ್ ಸ್ಕ್ವಾಡ್​ ನಿಯೋಜಿಸಲಾಗಿದೆ. ಎಲ್ಲಾ ವಿಮಾನ ನಿಲ್ದಾಣ, ಬಂದರು, ಹೆದ್ದಾರಿಗಳಲ್ಲಿ ಕಣ್ಣಿಡಲಾಗಿದೆ. ಬ್ಯಾಂಕ್​Read More →

masthmagaa.com: ಇದೇ ಮೊದಲ ಬಾರಿಗೆ ಭಾರತದ ರಫ್ತು ಮೌಲ್ಯ ದಾಖಲೆಯ 750 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 61.5 ಲಕ್ಷ ಕೋಟಿ ರೂಪಾಯಿ ತಲುಪಿದೆ ಅಂತ ಕೇಂದ್ರ ಸರ್ಕಾರ ಹೇಳಿದೆ. 2021-22ರಲ್ಲಿ ದೇಶದ ರಫ್ತು 676 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 55.4 ಲಕ್ಷ ಕೋಟಿ ರೂಪಾಯಿ ಇತ್ತು. ಇದೀಗ ಅತ್ಯಂತ ವೇಗವಾಗಿ 750 ಬಿಲಿಯನ್‌ ಡಾಲರ್‌ಗೆ ತಲುಪಿದ್ದು, ಈ ವರ್ಷದ ಅಂತ್ಯದ ವೇಳೆಗೆ 760 ಬಿಲಿಯನ್‌ ಡಾಲರ್‌ಗೆ ತಲುಪುವ ಸಾಧ್ಯತೆಯಿದೆ ಅಂತ ಕೇಂದ್ರ ವಾಣಿಜ್ಯ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್‌ ಗೋಯೆಲ್‌ ಹೇಳಿದ್ದಾರೆ. ಇತ್ತ ದೇಶದ ರಕ್ಷಣಾ ಕ್ಷೇತ್ರದ ರಫ್ತಿನಲ್ಲೂ ಕೂಡ ಸರ್ವಕಾಲಿಕ ಏರಿಕೆಯಾಗಿದೆ. 2022-23ರ ಸಾಲಿನಲ್ಲಿ 13 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ರಫ್ತು ದಾಖಲಾಗಿದೆ. ಭಾರತ ಪ್ರಪಂಚದಾದ್ಯಂತ 80ಕ್ಕೂ ಹೆಚ್ಚು ದೇಶಗಳಿಗ ರಕ್ಷಣಾ ಸಾಮಗ್ರಿಗಳನ್ನ ರಫ್ತು ಮಾಡ್ತಿದೆ ಅಂತ ತಿಳಿದು ಬಂದಿದೆ. ಅಧಿಕೃತ ಅಂಕಿ ಅಂಶದ ಪ್ರಕಾರ ಈ ರಫ್ತು ಪ್ರಮಾಣ 2015-16ರಲ್ಲಿ ಕೇವಲ 2 ಸಾವಿರ ಕೋಟಿ ರೂಪಾಯಿ ಇತ್ತು. ಈಗRead More →

masthmagaa.com: ಉತ್ತರ ಪ್ರದೇಶದಾದ್ಯಂತ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದ 2006ರ ಉಮೇಶ್‌ ಪಾಲ್‌ ಕಿಡ್ನಾಪ್‌ ಕೇಸ್‌ನಲ್ಲಿ ಗ್ಯಾಂಗ್‌ಸ್ಟರ್‌, ಮಾಜಿ ಶಾಸಕ, ಮಾಜಿ ಸಂಸದ ಆತಿಕ್‌ ಅಹ್ಮದ್‌ಗೆ ಪ್ರಯಾಗ್‌ರಾಜ್‌ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೇ ಆರೋಪದಲ್ಲಿ ಇವನ ಜೊತೆಗೆ ಇನ್ನಿಬ್ರಿಗೂ ಜೀವಾವಧಿ ಶಿಕ್ಷೆಯಾಗಿದೆ. ಕೊಲೆ ಮತ್ತು ಕಿಡ್ನಾಪ್‌ ಸೇರಿ ಕನಿಷ್ಠ 100 ಕ್ರಿಮಿನಲ್ ಪ್ರಕರಣಗಳನ್ನಎದುರಿಸ್ತಿದ್ದ ಈ ಆತಿಹ್‌ ಅಹ್ಮದ್‌ನನ್ನ ಇತ್ತೀಚೆಗೆ ಗುಜರಾತ್‌ ಜೈಲಿನಿಂದ ಪ್ರಯಾಗ್‌ರಾಜ್‌ ಕೋರ್ಟ್‌ಗೆ ಕರೆತರಲಾಗಿತ್ತು. ಈಗ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇನ್ನೊಂದ್‌ ಕಡೆ ಉತ್ತರ ಪ್ರದೇಶ ಪೊಲೀಸ್ ಕಸ್ಟಡಿಯಲ್ಲಿ ರಕ್ಷಣೆ ನೀಡುವಂತೆ ಅತೀಕ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಇತ್ತ ಆತಿಕ್‌ಗೆ ಜೀವಾವಧಿ ಶಿಕ್ಷೆ ನೀಡಿರುವ ಕೋರ್ಟ್‌ ತೀರ್ಪಿಗೆ ಪ್ರತಿಕ್ರಿಯಿಸಿರುವ ಕೊಲೆಗೀಡಾದ ಉಮೇಶ್‌ಪಾಲ್‌ ತಾಯಿ ಹಾಗೂ ಪತ್ನಿ ಈ ಶಿಕ್ಷೆ ಸಾಲಲ್ಲ ಆತಿಕ್‌ಗೆ ಗಲ್ಲು ಶಿಕ್ಷೆ ವಿಧಿಸ್ಬೇಕು ಅಂತ ಆಗ್ರಹಿಸಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಬಿಜೆಪಿಯ ಪವರ್‌ ಫುಲ್‌ ನಾಯಕರ ಪೈಕಿ ಒಬ್ರು ಅಂತ ಕರೆಸಿಕೊಂಡಿರೋ,ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ರಾಜಕೀಯ ನಿವೃತ್ತಿಯ ಬಗ್ಗೆ ಆಗಾಗ ಚರ್ಚೆ ನಡೀತಾ ಇರುತ್ತೆ. ಅದಕ್ಕೆ ಅವರು ಕೊಡುವ ಹೇಳಿಕೆ ಕೂಡ ಪುಷ್ಠಿ ಕೊಡ್ತಾ ಇರ್ತವೆ. ಇದೀಗ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿರುವ ಬಗ್ಗೆ ನಿತಿನ್‌ ಗಡ್ಕರಿ ಮತ್ತೊಮ್ಮೆ ಮಾತನಾಡಿದ್ದಾರೆ. ಕಾರ್ಯಕ್ರಮವೊಂದ್ರಲ್ಲಿ ಮಾತನಾಡಿದ ಗಡ್ಕರಿ ಅವರು, ನನ್ನ ಕೆಲಸ ಇಷ್ಟ ಆಗಿದ್ರೆ, ಜನರಿಗೆ ಮತ್ತೆ ನನಗೆ ವೋಟ್‌ ಹಾಕ್ಬೇಕು ಅಂತ ಅನ್ನಿಸಿದ್ರೆ ಮಾತ್ರ ಮತ ಹಾಕ್ಲಿ. ನಾನು ಲಿಮಿಟ್‌ಗಿಂತ ಹೆಚ್ಚಾಗಿ ಯಾರನ್ನೂ ಸಮಾಧಾನಪಡಿಸುವ ಕೆಲಸ ಮಾಡೋದಿಲ್ಲ. ನಾನು ನನ್ನ ಕೆಲಸಕ್ಕೆ ಬದ್ಧವಾಗಿದ್ರೂ ಸಹ ನನ್ನ ಜಾಗಕ್ಕೆ ಬೇರೆ ಯಾರಾದ್ರೂ ಬಂದ್ರು ಪರ್ವಾಗಿಲ್ಲ ಅಂತ ಗಡ್ಕರಿ ಹೇಳಿದ್ದಾರೆ. ಇತ್ತೀಚೆಗೆ ಕೂಡ ಜನರು ಯಾರಿಗೆ ಇಷ್ಟ ಪಡ್ತಾರೆ ಅವ್ರಿಗೆ ವೋಟ್‌ ಹಾಕ್ಲಿ. ಅದು ಅವ್ರ ಆಯ್ಕೆ ಅಂತ ಹೇಳಿದ್ರು. ರಾಜಕೀಯ ನಾಯಕರು ಈ ರೀತಿ ಹೇಳಿಕೆ ಕೊಡೋದು ತುಂಬಾ ವಿರಳ. ಅದ್ರಲ್ಲೂ ಉನ್ನತ ಸ್ಥಾನ ಹೊಂದಿರೋ ಅದು ಬಿಜೆಪಿಯಂತ ಪಕ್ಷದಲ್ಲಿRead More →

masthmagaa.com: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಅಧಿಕೃತ ಬಂಗಲೆಯನ್ನ ಖಾಲಿ ಮಾಡೋದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಬಂಗಲೆ ತೆರವು ಮಾಡಲು ಕಾಲಾವಕಾಶ ಕೇಳೋದಿಲ್ಲ. ಎಲ್ಲಾ ನಿರ್ದೇಶನಗಳನ್ನ ಪಾಲಿಸ್ತೀನಿ ಅಂತ ರಾಹುಲ್‌ ಲೋಕಸಭಾ ಡೆಪ್ಯೂಟಿ ಸೆಕ್ರಟ್ರಿಗೆ ಪತ್ರ ಬರೆದಿದ್ದಾರೆ. ಇತ್ತ ರಾಹುಲ್‌ ತಮ್ಮ ಬಂಗಲೆ ಖಾಲಿ ಮಾಡಿದ್ರೆ, ತನ್ನ ತಾಯಿಯೊಂದಿಗೆ ಇರ್ತಾರೆ. ಅಥ್ವಾ ರಾಹುಲ್ ನನ್ನ ಮನೆಗೆ ಬರ್ಬೋದು. ನಾನು ಅವ್ರಿಗಾಗಿ ಮನೆ ಖಾಲಿ ಮಾಡ್ತೀನಿ ಅಂತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಜೊತೆಗೆ ರಾಹುಲ್‌ರ ಅನರ್ಹತೆ ವಿಚಾರದಲ್ಲಿ ನಮಗೆ 19 ಪಕ್ಷಗಳು ಸಪೋರ್ಟ್‌ ಮಾಡ್ತಿವೆ ನಾವು ಈ ಬಂಗ್ಲೆ ವಿಚಾರದಲ್ಲಿ ಆತಂಕ ಪಡೋದಿಲ್ಲ ಅಂತ ಕಾಂಗ್ರೆಸ್‌ ಹೇಳಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಪ್ರಧಾನಿ ನರೇಂದ್ರ ಮೋದಿ ಅವ್ರ ಫೋಟೊ ಹರಿದು ಹಾಕಿದ್ದ ಕೇಸ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಅನಂತ್‌ ಪಟೇಲ್‌ ಅವ್ರಿಗೆ ಗುಜರಾತ್‌ನ ನವಸಾರಿ ಕೋರ್ಟ್‌ 99 ರೂಪಾಯಿ ದಂಡ ವಿಧಿಸಿದೆ. 2017ರಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯೊಂದ್ರಲ್ಲಿ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಚೇಂಬರ್‌ಗೆ ನುಗ್ಗಿದ್ದ ಅನಂತ್‌ ಪಟೇಲ್‌, ಅಲ್ಲಿದ್ದ ಮೋದಿ ಅವರ ಫೋಟೊವನ್ನ ಹರಿದು ಹಾಕಿದ್ದರು. ಈಗ 99 ರೂಪಾಯಿ ದಂಡ ವಿಧಿಸಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಕಳೆದ ವರ್ಷ ಭಾರತಕ್ಕೆ ಮಾರಿರೋ ತೈಲ ಪ್ರಮಾಣ 20 ಪಟ್ಟಿಗಿಂತ ಜಾಸ್ತಿ ಏರಿಕೆಯಾಗಿದೆ ಅಂತ ರಷ್ಯಾ ಹೇಳಿದೆ. ರಷ್ಯಾ- ಯುಕ್ರೇನ್‌ ಯುದ್ಧವನ್ನ ವಿರೋಧಿಸಿ ಯುರೋಪ್‌ ರಾಷ್ಟ್ರಗಳು ರಷ್ಯಾ ಬಳಿ ತೈಲ ಖರೀದಿ ನಿಲ್ಲಿಸಿದ ಕಾರಣ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೈಲ ಮಾರಾಟ ಮಾಡಲಾಗಿದೆ. ನಮ್ಮಇಂಧನ ಮಾರಾಟಕ್ಕೆ ನಾವು ನಮ್ಮ ಮಿತ್ರ ರಾಷ್ಟ್ರಗಳ ಕಡೆ ತಿರುಗಿದ್ದೇವೆ. ಕಳೆದ ವರ್ಷ ಭಾರತಕ್ಕೆ ಮಾರಾಟವಾದ ತೈಲದ ಪ್ರಮಾಣದಲ್ಲಿ 22 ಪಟ್ಟು ಹೆಚ್ಚಾಗಿದೆ ಅಂತ ರಷ್ಯಾ ಉಪಪ್ರಧಾನಿ ಅಲೆಕ್ಸಾಂಡರ್‌ ನೊವಾಕ್‌ ಹೇಳಿಕೆ ನೀಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಿಎಂ ಭಗವಂತ್ ಮಾನ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಿಖ್‌ರ ಅಕಾಲ್ ತಖ್ತ್ ಸಂಘಟನೆ ತೀವ್ರ ಖಂಡನೆ ವ್ಯಕ್ತಪಡಿಸಿದೆ. ‘ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆʼ ಇಡುವವರ ವಿರುದ್ಧ ಇದೇ ರೀತಿ ಕ್ರಮವನ್ನ ಏಕೆ ತೆಗೆದುಕೊಳ್ಳುವುದಿಲ್ಲ ಅಂತ ಕಟುವಾಗಿ ಪ್ರಶ್ನಿಸಿದೆ. ಸಿಖ್‌ರ ಪ್ರಮುಖ ಧಾರ್ಮಿಕ ಸಂಘಟನೆಯಾದ ಅಕಾಲ್ ತಖ್ತ್ ನ ಜತೇದಾರ್ ಗಿಯಾನಿ ಹರ್‌ಪ್ರೀತ್ ಸಿಂಗ್ ಅವ್ರು ಅಮೃತಪಾಲ್ ಕೇಸ್‌ಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಎಲ್ಲಾ ಸಿಖ್ ಯುವಕರನ್ನ ಬಿಡುಗಡೆ ಮಾಡಬೇಕು ಅಂತ ಆಗ್ರಹ ಮಾಡಿದ್ದಾರೆ. ಅಷ್ಟೇ ಅಲ್ಲ ಬಿಡುಗಡೆ ಮಾಡೋದಕ್ಕೆ ಪಂಜಾಬ್‌ ಸರ್ಕಾರಕ್ಕೆ 24 ಗಂಟೆಗಳ ಡೆಡ್‌ ಲೈನ್‌ ಕೂಡ ಕೊಟ್ಟಿದ್ದಾರೆ. ಅಮೃತಪಾಲ್ ಮತ್ತು ಖಲಿಸ್ತಾನದ ಬೇಡಿಕೆಯನ್ನ ಬೆಂಬಲಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟವರ ವಿರುದ್ಧ, ( ಎನ್ಎಸ್ಎ )ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಏಕೆ ಹಾಕಬೇಕು? ಅಂತ ಪ್ರಶ್ನಿಸಿದ್ದಾರೆ. ಜೊತೆಗೆ ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆಯಿಡುವ ಲಕ್ಷಾಂತರ ಜನರಿದ್ದಾರೆ. ಹಿಂದೂ ರಾಷ್ಟ್ರಕ್ಕಾಗಿ ಕರೆ ನೀಡುವವರನ್ನೂ ಸಹ ಬಂಧಿಸಬೇಕು. ಅವರ ವಿರುದ್ಧವೂ ಎನ್ಎಸ್ಎRead More →

masthmagaa.com: ಜೈಲುನಲ್ಲಿದ್ದುಕೊಂಡೇ ಮನೆಯಿಂದ ನಶಾ ವಸ್ತುಗಳ ಡೀಲ್‌ ಮಾಡುತ್ತಿದ್ದ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಗಾಂಜಾ ದಂಧೆಯಲ್ಲಿ ತಿಂಗಳ ಹಿಂದೆ ಮುಜ್ಜು ಅನ್ನೋ ವ್ಯಕ್ತಿಯನ್ನ ಜೆಜೆ ನಗರ ಪೊಲೀಸರು ಬಂಧಿಸಿದ್ರು. ಈಗ ಆತನ ಹೆಂಡತಿಯನ್ನೂ ಅರೆಸ್ಟ್ ಮಾಡಲಾಗಿದೆ. ಈಕೆ ಗಂಡ ಜೈಲಿನಲ್ಲಿದ್ರೂ ಆತನ ಮಾರ್ಗದರ್ಶನದಲ್ಲಿ ಸ್ಮಗ್ಲಿಂಗ್‌ ಮಾಡ್ತಿದ್ಲು ಅಂತ ಗೊತ್ತಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಭ್ರಷ್ಟಾಚಾರ ಕೇಸಲ್ಲಿ ಬಂಧಿತವಾಗಿರೋ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪರನ್ನ 5 ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಕೊಟ್ಟಿದೆ. ಮಗನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಕೇಸಲ್ಲಿ ಮಾಡಾಳ್‌ಗೆ ಕೊಟ್ಟಿದ್ದ ಜಾಮೀನನ್ನ ನಿನ್ನೆ ಹೈಕೋರ್ಟ್‌ ವಜಾ ಮಾಡಿತ್ತು. ಬಳಿಕ ದಾರಿಯಲ್ಲೇ ಹೋಗ್ತಿದ್ದ ಶಾಸಕರನ್ನ ನಿಲ್ಲಿಸಿ ಅಡ್ಡಗಟ್ಟಿ ಅರೆಸ್ಟ್‌ ಮಾಡಲಾಗಿತ್ತು. ಬಳಿಕ ಕೋರ್ಟ್‌ಗೆ ಪ್ರೊಡ್ಯೂಸ್‌ ಮಾಡಲಾಗಿತ್ತು. ಈಗ ಮಾನ್ಯ ಶಾಸಕರನ್ನ ಕೋರ್ಟ್‌ 5 ದಿನಗಳ ಕಾಲ ಲೋಕಾಯುಕ್ತಕ್ಕೆ ಒಪ್ಪಿಸಿದೆ. ಇನ್ನೊಂದ್ಕಡೆ ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ, ಪ್ರಕರಣವನ್ನ ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಹೈ ಕೋರ್ಟ್‌ ವಜಾಗೊಳಿಸಿದೆ. -masthmagaa.com Share on: WhatsAppContact Us for AdvertisementRead More →