masthmagaa.com: ಈಶಾನ್ಯ ರಾಜ್ಯ ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪ್ರತಿಭಟನೆ ಇಂದು ಕೂಡ ಮುಂದುವರೆದಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳು ಮಣಿಪುರ ಸಿಎಂ ಎನ್‌. ಬಿರೇನ್‌ ಸಿಂಗ್‌ ಅವ್ರು ನಿವಾಸದ ಬಳಿ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಗುಂಪನ್ನ ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಹೊಗೆ ಸ್ಫೋಟಕಗಳನ್ನ ಬಳಸಿದ್ದಾರೆ. ಇನ್ನು ಮಣಿಪುರದಲ್ಲಿ ಉಂಟಾಗಿರುವ ಉದ್ವಿಗ್ನತೆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್‌, CRPF, RPF ಹೆಚ್ಚಿನ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಕಾನೂನು ಸುವವ್ಯಸ್ಥೆ ದೃಷ್ಟಿಯಿಂದ ಸೆಪ್ಟೆಂಬರ್‌ 27ರಿಂದ 29ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಷ್ಟೆ ಅಲ್ದೆ ತಪ್ಪು ಮಾಹಿತಿ ಮತ್ತು ರೂಮರ್ಸ್‌ಗಳು ಹರಡದಣತೆ ತಡೆಯಲು ಮತ್ತೆ ಅಕ್ಟೋಬರ್‌ 1ರವರೆಗೆ ಇಂಟರ್‌ನೆಟ್‌ ಸೇವೆಗಳನ್ನ ಬ್ಯಾನ್‌ ಮಾಡಲಾಗಿದೆ. ಇನ್ನು ಈ ಕೇಸ್‌ನ್ನ ಸಿಬಿಐಗೆ ಹಸ್ತಾಂತರಿಸಲಾಗಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಅವರ ಜೊತೆ ಸಂಪರ್ಕದಲ್ಲಿದ್ದೇವೆ ಅಂತ ಬಿರೇನ್‌ ಸಿಂಗ್‌ ಹೇಳಿದ್ದಾರೆ. Share on: WhatsAppContact Us for AdvertisementRead More →

masthmagaa.com: ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನ ತನ್ನದಾಗಿಸಿಕೊಂಡಿದೆ. ಭಾರತದ ತ್ರಿವಳಿ ಶೂಟರ್‌ಗಳಾದ ಮನು ಭಾಕರ್, ಇಷಾ ಸಿಂಗ್ ಮತ್ತು ರಿದಂ ಸಂಗ್ವಾನ್ ಅವರು ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಜೊತೆಗೆ 50 ಮೀಟರ್‌ ಏರ್‌ ರೈಫಲ್‌ ತಂಡ ಬೆಳ್ಳಿ ಪದಕ ಗೆದ್ದಿದೆ. ಇದ್ರೊಂದಿಗೆ ಮೆಡಲ್‌ ಪಟ್ಟಿಯಲ್ಲಿ 5 ಚಿನ್ನದ ಪದಕ, 5 ಬೆಳ್ಳಿ ಪದಕ ಮತ್ತು 10 ಕಂಚಿನ ಪದಕಗಳು ಸೇರಿ ಒಟ್ಟು 20 ಮೆಡಲ್‌ಗಳೊಂದಿಗೆ ಭಾರತ 6ನೇ ಸ್ಥಾನದಲ್ಲಿದೆ. ಇತ್ತ ಏಷ್ಯನ್‌ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ನೇಪಾಳ ಕ್ರಿಕೆಟ್‌ ಟೀಮ್‌ ಒಂದೇ ಪಂದ್ಯದಲ್ಲಿ 3 ವಿಶ್ವ ದಾಖಲೆ ಬರೆದಿದೆ. ನೇಪಾಳದ ಬ್ಯಾಟರ್‌ ದೀಪೇಂದ್ರ ಸಿಂಗ್‌ ಐರೆ, ಕೇವಲ 9 ಬಾಲ್‌ಗಳಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿದ್ದು, ಯುವರಾಜ್‌ ಸಿಂಗ್‌ ಅವರ ದಾಖಲೆಯನ್ನ ಬ್ರೇಕ್‌ ಮಾಡಿದ್ದಾರೆ. ಜೊತೆಗೆ ಕುಶಾಲ್‌ ಮಲ್ಲ ಕೇವಲ 34 ಬಾಲ್‌ಗಳಲ್ಲಿ ಶತಕ ಸಿಡಿಸುವ ಮೂಲಕ ಡೇವಿಡ್‌ ಮಿಲ್ಲರ್‌, ರೋಹಿತ್‌ ಶರ್ಮಾ ಅವರ ಹೆಸರಲ್ಲಿದ್ದRead More →

masthmagaa.com: ಗಡಿಯಲ್ಲಿ ತಂಟೆ ಮಾಡುವ ಡ್ರ್ಯಾಗನ್‌ ಚೀನಾ ತನ್ನ ರಾಯಭಾರಿಗಳ ಕೈಯಲ್ಲಿ ಮಾತ್ರ ಶಾಂತಿಯ ಉಪದೇಶ ಮಾಡಿಸುತ್ತೆ. ಇದೀಗ ಭಾರತದ ಜೊತೆಗಿನ ಸಹಕಾರವನ್ನ ಪುನರಾರಂಭಿಸಲು ಚೀನಾ ಬಯಸುತ್ತೆ ಅಂತ ಭಾರತದಲ್ಲಿರುವ ಚೀನಾದ ಹಿರಿಯ ರಾಜತಾಂತ್ರಿಕ ಅಧಿಕಾರಿ ಮಾ ಜಿಯಾ ಹೇಳಿದ್ದಾರೆ. ಉಭಯ ದೇಶಗಳ ಸೌಹಾರ್ದ ಸಹಬಾಳ್ವೆಗೆ ದಾರಿ ಹುಡಕಿಕೊಳ್ಳೋಕೆ ಭಾರತ ಮತ್ತು ಚೀನಾಗೆ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಯಿದೆ ಅಂತ ಜಿಯಾ ಹೇಳಿದ್ದಾರೆ. ಜೊತೆಗೆ ಭಾರತ ಮತ್ತು ಚೀನಾ ರಾಜತಾಂತ್ರಿಕತೆ ಮತ್ತು ಮಿಲಿಟರಿ ಚಾನೆಲ್‌ ಮೂಲಕ ಗಡಿ ಪರಿಸ್ಥಿತಿಯನ್ನ ಸಾಮಾನ್ಯ ಸ್ಥಿತಿಗೆ ತರಬೇಕು. ಅಲ್ದೆ ಉಭಯ ರಾಷ್ಟ್ರಗಳ ಸಂಬಂಧಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತವೆ ಎಂದು ನಾನು ಭಾವಿಸುತ್ತೇನೆ ಅಂತ ಜಿಯಾ ಹೇಳಿದ್ದಾರೆ. ಇದೇ ವೇಳೆ ಭಾರತ ಮತ್ತು ಚೀನಾ ಶಾಶ್ವತ ನೆರೆಹೊರೆಯವರಾಗಿದ್ದು, ಪರಸ್ಪರ ಸ್ಟಾಟೆಜಿಕ್‌ ಉದ್ದೇಶಗಳನ್ನ ಅರ್ಥಮಾಡಿಕೊಳ್ಳಬೇಕು. ಪರಸ್ಪರ ದುರ್ಬಲಗೊಳಿಸುವ ಮತ್ತು ಅವಮಾನಿಸುವ ಬದಲು ಪರಸ್ಪರರ ಯಶಸ್ಸಿಗೆ ಬೆಂಬಲ ಮತ್ತು ಕೊಡುಗೆ ನೀಡಬೇಕು ಅಂತ ಜಿಯಾ ಅಭಿಪ್ರಾಯಪಟ್ಟಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಮಹಿಳೆಯೊಬ್ಬರು ರಸ್ತೆ ಪಕ್ಕದಲ್ಲಿದ್ದ ಚಿರತೆ ಮರಿಯೊಂದನ್ನ ಬೆಕ್ಕಿನ ಮರಿಯೆಂದು ತಿಳಿದು ಮನೆಗೆ ತಂದು ಸಾಕಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ಆ ಮರಿ ಬೆಳೆದು ದೊಡ್ಡದಾದಾಗ ಅದು ಬ್ಲಾಕ್‌ ಪ್ಯಾಂಥರ್‌ ಅಥವಾ ಕಪ್ಪು ಚಿರತೆ ಅಂತ ಗೊತ್ತಾಗಿದೆ. ಇನ್ನು ಚಿರತೆ ಮರಿಯನ್ನ ಮಹಿಳೆ ತರುವ ಮತ್ತು ಅದರ ಬೆಳವಣಿಗೆಯ ವಿಡಿಯೋವೊಂದನ್ನ ಶೇರ್‌ ಮಾಡಲಾಗಿದೆ. ಈ ವಿಡಿಯೋದಲ್ಲಿ ಆಕೆಯ ಸಾಕು ಚಿರತೆ ಹಾಗೂ ನಾಯಿ ಒಟ್ಟಾಗಿ ಇರುವ ದೃಶ್ಯಗಳಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಅಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ವಿಶ್ವದೆಲ್ಲಡೆಯಿಂದ ಕಲಾಕೃತಿಗಳನ್ನ ಕದ್ದೊಯ್ದು ಮ್ಯೂಸಿಯಂ ಮಾಡ್ಕೊಂಡಿರೋ ಬ್ರಿಟನ್ನೀಗ, ಕಲಾಕೃತಿಗಳು ಕಾಣೆಯಾಗಿವೆ ಹುಡುಕಿಕೊಡಿ ಅಂತ ಜನರಿಗೆ ಮನವಿ ಮಾಡಿದೆ. ಲಂಡನ್‌ನ ಬ್ರಿಟಿಷ್‌ ಮ್ಯೂಸಿಯಂನಿಂದ ಸುಮಾರು 2 ಸಾವಿರ ಪ್ರಾಚೀನ ಕಲಾಕೃತಿಗಳು ಕಾಣೆಯಾಗಿದ್ದು, ಅವುಗಳು ಕುರಿತು ಯಾವುದೇ ಮಾಹಿತಿಯಿದ್ದರೆ ಹಂಚಿಕೊಳ್ಳುವಂತೆ ಮ್ಯೂಸಿಯಂನ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಅಂದ್ಹಾಗೆ ಇತ್ತೀಚೆಗೆ ಮ್ಯೂಸಿಯಂನ ಹಲವು ವಸ್ತುಗಳ ಕಳ್ಳತನ, ಮಿಸ್ಸಿಂಗ್‌ ಅಥ್ವಾ ಡ್ಯಾಮೇಜ್‌ನ ಆರೋಪದ ಮೇಲೆ ಅಲ್ಲಿನ ಸಿಬ್ಬಂದಿಯನ್ನ ಕೆಸಲದಿಂದ ತೆಗೆದು ಹಾಕಿದೆ. ಇದೀಗ ಈ ವಸ್ತುಗಳಾಗಲೀ ಅಥ್ವಾ ಅದರ ಕುರಿತ ಮಾಹಿತಿಯಾಗಲೀ ಇದ್ದರೆ ನಮ್ಮನ್ನ ಸಂಪರ್ಕಿಸಿ ಅಂತ ಮ್ಯೂಸಿಯಂ ರಿಕ್ವೆಸ್ಟ್‌ ಮಾಡಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಪಾಕಿಸ್ತಾನ ಪರ ಬೇಹುಗಾರಿಕೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನ ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ. ಶೈಲೇಶ್‌ ಕುಮಾರ್‌ ಸಿಂಗ್‌ ಅನ್ನೋ ವ್ಯಕ್ತಿ ಅರುಣಾಚಲ ಪ್ರದೇಶದಲ್ಲಿ ನಿಯೋಜನೆಯಾಗಿದ್ದ ಭಾರತೀಯ ಸೇನೆಯಲ್ಲಿ ಸುಮಾರು 9 ತಿಂಗಳ ಕಾಲ ತಾತ್ಕಾಲಿಕ ಲೇಬರ್‌ ಆಗಿ ಕೆಲಸ ಮಾಡಿದ್ದ. ಈ ವೇಳೆ ವಾಹನಗಳ ಇರೋ ಜಾಗ ಮತ್ತು ಅವುಗಳ ಓಡಾಟಕ್ಕೆ ಸಂಬಂಧಿಸಿದ ಸೇನೆ ಕುರಿತ ಮಾಹಿತಿಯನ್ನ ISI ಏಜೆಂಟ್‌ಗಳಿಗೆ ಕಳಿಸಿದ್ದಾನೆ ಅಂತ ಆರೋಪಿಸಲಾಗಿದೆ. ಈತ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಹರ್ಲೀನ್‌ ಕೌರ್‌ ಅನ್ನೋ ಪಾಕ್‌ ಏಜೆಂಟ್‌ ಜೊತೆಯಲ್ಲಿ ಮಾತಾಡ್ತಿದ್ದ ಅಂತ ಪೊಲೀಸರು ತಿಳಿಸಿದ್ದಾರೆ. ಅಷ್ಟೆ ಅಲ್ದೆ ಪ್ರೀತಿ ಅನ್ನೋ ಇನ್ನೋರ್ವ ISI ಏಜೆಂಟ್‌ ಜೊತೆ ಕಾಂಟ್ಯಾಕ್ಟ್‌ ಇದ್ದು, ಆಕೆಗೆ ತಾನು ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದೀನಿ ಅಂತ ಪರಿಚಯಿಸಿಕೊಂಡಿದ್ದ. ಜೊತೆಗೆ ಸೇನೆಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನ ಪ್ರೀತಿ ಬಳಿ ಕೂಡ ಶೇರ್‌ ಮಾಡಿದ್ದ. ಅದಕ್ಕೆ ಬದಲಾಗಿ ಹಣ ಪಡೆದಿದ್ದಾನೆ ಅಂತ ATS ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದ್ರೆ ಶೈಲೇಶ್‌ ಪ್ರಸ್ತುತ ಸೇನೆಯಲ್ಲಿ ಯಾವುದೇ ಕೆಲಸ ಮಾಡ್ತಿಲ್ಲ. ಅಂದ್ಹಾಗೆRead More →

masthmagaa.com: ಆರ್ಥಿಕ, ರಾಜಕೀಯ ಅಧ್ವಾನದಿಂದ ಕುಸೀತಿರೋ ಪಾಕ್‌ನ್ನ ಈಗ ಚಡ್ಡಿ ದೋಸ್ತ್‌ ಚೀನಾ ಕೂಡ ಕೈಬಿಡೋ ಹಂಗೆ ಕಾಣ್ತಿದೆ. ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಯಡಿ, ಇಂಧನ, ನೀರು ನಿರ್ವಹಣೆ ಹಾಗೂ ಹವಾಮಾನ ಬದಲಾವಣೆ ಕ್ಷೇತ್ರಗಳಲ್ಲಿ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಚೀನಾ ನಿರಾಕರಿಸಿದೆ ಅಂತ ತಿಳಿದು ಬಂದಿದೆ. ಜೊತೆಗೆ ಪಾಕಿಸ್ತಾನ ಪ್ರಸ್ತಾಪಿಸಿರುವ ಹಲವು ಕ್ರಮಗಳಿಗೆ ಚೀನಾ ಒಪ್ಪಿಗೆ ನೀಡಿಲ್ಲ. ಗಿಲ್ಗಿಟ್-ಬಾಲ್ಟಿಸ್ತಾನ್ , ಖೈಬರ್-ಪಖ್ತುಂಖ್ವಾ, POK ಮತ್ತು ಪಾಕಿಸ್ತಾನದ ಕರಾವಳಿ ಪ್ರದೇಶಗಳಲ್ಲಿ ಗಡಿಯಾಚೆಗಿನ ಪ್ರವಾಸೋದ್ಯಮದಲ್ಲಿ ಸಹಕಾರ ನೀಡಲು ಚೀನಾ ನಿರಾಕರಿಸಿದೆ ಅಂತ ವರದಿಯಾಗಿದೆ. ಇದ್ರಿಂದ ಕುಚಿಕು ದೋಸ್ತಿಗಳ ನಡುವೆ ಬಿರುಕು ಬಿಟ್ಟಿರುವ ಸೂಚನೆ ಸಿಗ್ತಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಭಾರತ ಹಾಗೂ ಕೆನಡಾ ನಡುವೆ ಬಿಕ್ಕಟ್ಟಿಗೆ ಕಾರಣವಾಗಿರೋ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಕಪಟಿ ಪಾಕ್‌ನ ಕೈವಾಡ ಇರಬಹುದಾ ಅನ್ನೋ ಗುಮಾನಿ ಈಗ ವ್ಯಕ್ತವಾಗಿದೆ. ಪಾಕಿಸ್ತಾನ ಗುಪ್ತಚರ ಇಲಾಖೆ ISI ನಿಜ್ಜರ್‌ನ ಹತ್ಯೆ ಮಾಡಿಸಿ ಭಾರತದ ಮೇಲೆ ಎತ್ತಾಕೋ ಪ್ರಯತ್ನ ಮಾಡಿರಬಹುದು ಅಂತ ರಾಷ್ಟ್ರೀಯ ಮಾಧ್ಯಮ ಒಂದಕ್ಕೆ ಭಾರತದ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಯಾಕಂದ್ರೆ ರಾಹತ್‌ ರಾವ್‌ ಮತ್ತು ತಾರಿಖ್‌ ಕಿಯಾನಿ ಅನ್ನೋ ಇಬ್ಬರು ISI ಏಜೆಂಟ್‌ಗಳು ಕೆನಡಾದಲ್ಲಿದ್ದು, ಅವರು ನಿಜ್ಜರ್‌ನ ಸಂಪರ್ಕದಲ್ಲಿದ್ರು ಅಂತ ಹೇಳಲಾಗಿದೆ. ಈ ಇಬ್ಬರು ಏಜೆಂಟ್‌ಗಳು ಭಾರತದಿಂದ ಬಂದಿರೋ ಹಾಗೂ ವಾಂಟೆಡ್‌ ಲಿಸ್ಟ್‌ನಲ್ಲಿರೋ ಭಯೋತ್ಪಾದಕರನ್ನ ಕೆನಡಾದಲ್ಲಿ ಹ್ಯಾಂಡಲ್‌ ಮಾಡ್ತಿದ್ರು. ಅತ್ತ ನಿಜ್ಜರ್‌ ಯಾವಾಗಲೂ ಜಾಗರೂಕನಾಗಿರ್ತಿದ್ದ, ಹೆಚ್ಚಿನ ಭದ್ರತೆ ಹೊಂದಿರುತ್ತಿದ್ದ. ಹೀಗಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಅವನ ಬಳಿ ಹೋಗೋದು ಅಸಾಧ್ಯ. ಯಾರೋ ಗೊತ್ತಿರುವವರೇ ಈ ಕೆಲಸ ಮಾಡಿರೋದು ಎನ್ನಲಾಗ್ತಿದೆ. ಅದ್ರಲ್ಲೂ ಪಾಕ್‌ ಗುಪ್ತಚರ ಇಲಾಖೆ ಭಾರತ ವಿರೋಧಿ ಖಲಿಸ್ತಾನಿ ಪರ ಚಳುವಳಿಗೆ ಇನ್ನಷ್ಟು ಪುಷ್ಠಿ ನೀಡಲು ನಿಜ್ಜರ್‌ನRead More →

masthmagaa.com: ಇತ್ತೀಚೆಗೆ ಕೆನಡಾದ ಸಂಸತ್ತಿನಲ್ಲಿ ನಾಝಿ ಸದಸ್ಯನನ್ನ ಆಹ್ವಾನಿಸಿ ಆತನನ್ನ ಯುಕ್ರೇನ್‌ ವಾರ್‌ ಹೀರೋ ಅಂತ ಕರೆದು ಮುಜುಗರಕ್ಕೊಳಗಾಗಿದ್ದ ಘಟನೆ ನಡೆದಿತ್ತು. ಇದ್ರ ಬೆನ್ನಲ್ಲೇ ಈಗ ಕೆನಡಾ ಸಂಸತ್‌ನ ಸ್ಪೀಕರ್‌ ಆಂಟೋನಿ ರೋಟಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಘಟನೆ ಬಳಿಕ ಯಹೂದಿ ಮಾನವ ಹಕ್ಕುಗಳ ಸಂಘಟನೆ ಹೌಸ್‌ ಆಫ್‌ ಕಾಮನ್ಸ್‌ನ ಸ್ಪೀಕರ್‌ ಆಂಟೋನಿ ರೋಟಾ ಅವ್ರು ಕ್ಷಮೆ ಕೇಳಬೇಕು ಅಂತ ಆಗ್ರಹಿಸಿತ್ತು. ಜೊತೆಗೆ ಅಲ್ಲಿನ ವಿರೋಧ ಪಕ್ಷದ ಹಲವು ನಾಯಕರು ರೋಟಾ ಅವರು ರಾಜೀನಾಮೆ ನೀಡಬೇಕು ಅಂತ ಆಗ್ರಹಿಸಿದ್ದಾರೆ. ಈ ಹಿನ್ನಲೆಯಲ್ಲಿ ರೋಟಾ ಅವರು ತಮ್ಮ ಸ್ಪೀಕರ್‌ ಹುದ್ದೆಯನ್ನ ತ್ಯಜಿಸಿರೋದಾಗಿ ಅನೌನ್ಸ್‌ ಮಾಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಮಹತ್ವದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಭಾಷಣ ಮಾಡಿದೆ. ಭಾರತದ ಪರವಾಗಿ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಮಾತನಾಡಿದ್ದಾರೆ. ಈ ಬಾರಿ ತಾವು ʻಭಾರತದಿಂದ ಬಂದಿದ್ದೇನೆʼ ಅಂತ ಪರಿಚಿಯಿಸಿಕೊಂಡು ಅಲ್ಲೂ ಸಹ ಭಾರತ ಹೆಸರನ್ನ ಪ್ರೊಜೆಕ್ಟ್‌ ಮಾಡಿದಾರೆ. ಇನ್ನು ಭಾಷಣದ ಆರಂಭದಲ್ಲೇ ದಕ್ಷಿಣ ಏಷ್ಯಾದ ಬಗ್ಗೆ ಮಾತನಾಡಿರೋ ಜೈಶಂಕರ್‌, ಭಾರತ ಹಿಂದುಳಿದ ದೇಶಗಳ ದನಿ ಅಂತ ಹೇಳಿದ್ದಾರೆ. ಅಲ್ದೇ ಭಾರತ ವಸುದೈವ ಕುಟುಂಬಕಂ ಅನ್ನೋ ತತ್ವದ ಮೇಲೆ ನಂಬಿಕೆ ಇಟ್ಟಿದೆ. ಈ ಕೂಡಲೇ ಭದ್ರತಾ ಮಂಡಳಿಯಲ್ಲಿ ರಿಫಾರ್ಮ್‌ ಆಗಬೇಕು. ಭಾರತ ಜವಾಬ್ದಾರಿ ತಗೋಳೋಕೆ ರೆಡಿ ಇದೆ, ನಾವು ಜಗತ್ತಿನ ಶಾಂತಿಗೆ ಇನ್ನಷ್ಟು ಕೆಲಸ ಮಾಡಬೇಕು ಅಂತ ಹೇಳಿದಾರೆ. ಇದೇ ವೇಳೆ ಭಾರತದ ವಿರೋಧಿಗಳನ್ನ ಹೆಸರು ಹೇಳದೆ ತರಾಟೆಗೆ ತಗೊಂಡಿರೋ ಅವರು,‌ ಕೆಲವೊಂದಷ್ಟು ದೇಶಗಳು ಅಶಾಂತಿಯನ್ನೂ ರಕ್ಷಣೆ ಮಾಡ್ತಿವೆ. ಇದು ಮುಂದುವರೆಯಬಾರದು. ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವವನ್ನ ಗೌರವಿಸಬೇಕು. ಭಯೋತ್ಪಾದನೆ ರಾಜಕೀಯ ಅಜೆಂಡಾವನ್ನ ಪೂರೈಸೋದಿಲ್ಲ ಅಂತೇಳಿದಾರೆ. ಈ ಮೂಲಕ ಕೆನಡಗೆ ಹಾಗೂ ಅಲ್ಲಿನ ಪ್ರಧಾನಿ‌, ಖಲಿಸ್ತಾನಿ ರಕ್ಷಕ ಜಸ್ಟೀನ್ ಟ್ರುಡುಗೆRead More →