masthmagaa.com: ಇದೇ ಮೊದಲ ಬಾರಿಗೆ ಭಾರತದ ರಫ್ತು ಮೌಲ್ಯ ದಾಖಲೆಯ 750 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 61.5 ಲಕ್ಷ ಕೋಟಿ ರೂಪಾಯಿ ತಲುಪಿದೆ ಅಂತ ಕೇಂದ್ರ ಸರ್ಕಾರ ಹೇಳಿದೆ. 2021-22ರಲ್ಲಿ ದೇಶದ ರಫ್ತು 676 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 55.4 ಲಕ್ಷ ಕೋಟಿ ರೂಪಾಯಿ ಇತ್ತು. ಇದೀಗ ಅತ್ಯಂತ ವೇಗವಾಗಿ 750 ಬಿಲಿಯನ್‌ ಡಾಲರ್‌ಗೆ ತಲುಪಿದ್ದು, ಈ ವರ್ಷದ ಅಂತ್ಯದ ವೇಳೆಗೆ 760 ಬಿಲಿಯನ್‌ ಡಾಲರ್‌ಗೆ ತಲುಪುವ ಸಾಧ್ಯತೆಯಿದೆ ಅಂತ ಕೇಂದ್ರ ವಾಣಿಜ್ಯ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್‌ ಗೋಯೆಲ್‌ ಹೇಳಿದ್ದಾರೆ. ಇತ್ತ ದೇಶದ ರಕ್ಷಣಾ ಕ್ಷೇತ್ರದ ರಫ್ತಿನಲ್ಲೂ ಕೂಡ ಸರ್ವಕಾಲಿಕ ಏರಿಕೆಯಾಗಿದೆ. 2022-23ರ ಸಾಲಿನಲ್ಲಿ 13 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ರಫ್ತು ದಾಖಲಾಗಿದೆ. ಭಾರತ ಪ್ರಪಂಚದಾದ್ಯಂತ 80ಕ್ಕೂ ಹೆಚ್ಚು ದೇಶಗಳಿಗ ರಕ್ಷಣಾ ಸಾಮಗ್ರಿಗಳನ್ನ ರಫ್ತು ಮಾಡ್ತಿದೆ ಅಂತ ತಿಳಿದು ಬಂದಿದೆ. ಅಧಿಕೃತ ಅಂಕಿ ಅಂಶದ ಪ್ರಕಾರ ಈ ರಫ್ತು ಪ್ರಮಾಣ 2015-16ರಲ್ಲಿ ಕೇವಲ 2 ಸಾವಿರ ಕೋಟಿ ರೂಪಾಯಿ ಇತ್ತು. ಈಗRead More →

masthmagaa.com: ಉತ್ತರ ಪ್ರದೇಶದಾದ್ಯಂತ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದ 2006ರ ಉಮೇಶ್‌ ಪಾಲ್‌ ಕಿಡ್ನಾಪ್‌ ಕೇಸ್‌ನಲ್ಲಿ ಗ್ಯಾಂಗ್‌ಸ್ಟರ್‌, ಮಾಜಿ ಶಾಸಕ, ಮಾಜಿ ಸಂಸದ ಆತಿಕ್‌ ಅಹ್ಮದ್‌ಗೆ ಪ್ರಯಾಗ್‌ರಾಜ್‌ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೇ ಆರೋಪದಲ್ಲಿ ಇವನ ಜೊತೆಗೆ ಇನ್ನಿಬ್ರಿಗೂ ಜೀವಾವಧಿ ಶಿಕ್ಷೆಯಾಗಿದೆ. ಕೊಲೆ ಮತ್ತು ಕಿಡ್ನಾಪ್‌ ಸೇರಿ ಕನಿಷ್ಠ 100 ಕ್ರಿಮಿನಲ್ ಪ್ರಕರಣಗಳನ್ನಎದುರಿಸ್ತಿದ್ದ ಈ ಆತಿಹ್‌ ಅಹ್ಮದ್‌ನನ್ನ ಇತ್ತೀಚೆಗೆ ಗುಜರಾತ್‌ ಜೈಲಿನಿಂದ ಪ್ರಯಾಗ್‌ರಾಜ್‌ ಕೋರ್ಟ್‌ಗೆ ಕರೆತರಲಾಗಿತ್ತು. ಈಗ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇನ್ನೊಂದ್‌ ಕಡೆ ಉತ್ತರ ಪ್ರದೇಶ ಪೊಲೀಸ್ ಕಸ್ಟಡಿಯಲ್ಲಿ ರಕ್ಷಣೆ ನೀಡುವಂತೆ ಅತೀಕ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಇತ್ತ ಆತಿಕ್‌ಗೆ ಜೀವಾವಧಿ ಶಿಕ್ಷೆ ನೀಡಿರುವ ಕೋರ್ಟ್‌ ತೀರ್ಪಿಗೆ ಪ್ರತಿಕ್ರಿಯಿಸಿರುವ ಕೊಲೆಗೀಡಾದ ಉಮೇಶ್‌ಪಾಲ್‌ ತಾಯಿ ಹಾಗೂ ಪತ್ನಿ ಈ ಶಿಕ್ಷೆ ಸಾಲಲ್ಲ ಆತಿಕ್‌ಗೆ ಗಲ್ಲು ಶಿಕ್ಷೆ ವಿಧಿಸ್ಬೇಕು ಅಂತ ಆಗ್ರಹಿಸಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಬಿಜೆಪಿಯ ಪವರ್‌ ಫುಲ್‌ ನಾಯಕರ ಪೈಕಿ ಒಬ್ರು ಅಂತ ಕರೆಸಿಕೊಂಡಿರೋ,ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ರಾಜಕೀಯ ನಿವೃತ್ತಿಯ ಬಗ್ಗೆ ಆಗಾಗ ಚರ್ಚೆ ನಡೀತಾ ಇರುತ್ತೆ. ಅದಕ್ಕೆ ಅವರು ಕೊಡುವ ಹೇಳಿಕೆ ಕೂಡ ಪುಷ್ಠಿ ಕೊಡ್ತಾ ಇರ್ತವೆ. ಇದೀಗ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿರುವ ಬಗ್ಗೆ ನಿತಿನ್‌ ಗಡ್ಕರಿ ಮತ್ತೊಮ್ಮೆ ಮಾತನಾಡಿದ್ದಾರೆ. ಕಾರ್ಯಕ್ರಮವೊಂದ್ರಲ್ಲಿ ಮಾತನಾಡಿದ ಗಡ್ಕರಿ ಅವರು, ನನ್ನ ಕೆಲಸ ಇಷ್ಟ ಆಗಿದ್ರೆ, ಜನರಿಗೆ ಮತ್ತೆ ನನಗೆ ವೋಟ್‌ ಹಾಕ್ಬೇಕು ಅಂತ ಅನ್ನಿಸಿದ್ರೆ ಮಾತ್ರ ಮತ ಹಾಕ್ಲಿ. ನಾನು ಲಿಮಿಟ್‌ಗಿಂತ ಹೆಚ್ಚಾಗಿ ಯಾರನ್ನೂ ಸಮಾಧಾನಪಡಿಸುವ ಕೆಲಸ ಮಾಡೋದಿಲ್ಲ. ನಾನು ನನ್ನ ಕೆಲಸಕ್ಕೆ ಬದ್ಧವಾಗಿದ್ರೂ ಸಹ ನನ್ನ ಜಾಗಕ್ಕೆ ಬೇರೆ ಯಾರಾದ್ರೂ ಬಂದ್ರು ಪರ್ವಾಗಿಲ್ಲ ಅಂತ ಗಡ್ಕರಿ ಹೇಳಿದ್ದಾರೆ. ಇತ್ತೀಚೆಗೆ ಕೂಡ ಜನರು ಯಾರಿಗೆ ಇಷ್ಟ ಪಡ್ತಾರೆ ಅವ್ರಿಗೆ ವೋಟ್‌ ಹಾಕ್ಲಿ. ಅದು ಅವ್ರ ಆಯ್ಕೆ ಅಂತ ಹೇಳಿದ್ರು. ರಾಜಕೀಯ ನಾಯಕರು ಈ ರೀತಿ ಹೇಳಿಕೆ ಕೊಡೋದು ತುಂಬಾ ವಿರಳ. ಅದ್ರಲ್ಲೂ ಉನ್ನತ ಸ್ಥಾನ ಹೊಂದಿರೋ ಅದು ಬಿಜೆಪಿಯಂತ ಪಕ್ಷದಲ್ಲಿRead More →

masthmagaa.com: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಅಧಿಕೃತ ಬಂಗಲೆಯನ್ನ ಖಾಲಿ ಮಾಡೋದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಬಂಗಲೆ ತೆರವು ಮಾಡಲು ಕಾಲಾವಕಾಶ ಕೇಳೋದಿಲ್ಲ. ಎಲ್ಲಾ ನಿರ್ದೇಶನಗಳನ್ನ ಪಾಲಿಸ್ತೀನಿ ಅಂತ ರಾಹುಲ್‌ ಲೋಕಸಭಾ ಡೆಪ್ಯೂಟಿ ಸೆಕ್ರಟ್ರಿಗೆ ಪತ್ರ ಬರೆದಿದ್ದಾರೆ. ಇತ್ತ ರಾಹುಲ್‌ ತಮ್ಮ ಬಂಗಲೆ ಖಾಲಿ ಮಾಡಿದ್ರೆ, ತನ್ನ ತಾಯಿಯೊಂದಿಗೆ ಇರ್ತಾರೆ. ಅಥ್ವಾ ರಾಹುಲ್ ನನ್ನ ಮನೆಗೆ ಬರ್ಬೋದು. ನಾನು ಅವ್ರಿಗಾಗಿ ಮನೆ ಖಾಲಿ ಮಾಡ್ತೀನಿ ಅಂತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಜೊತೆಗೆ ರಾಹುಲ್‌ರ ಅನರ್ಹತೆ ವಿಚಾರದಲ್ಲಿ ನಮಗೆ 19 ಪಕ್ಷಗಳು ಸಪೋರ್ಟ್‌ ಮಾಡ್ತಿವೆ ನಾವು ಈ ಬಂಗ್ಲೆ ವಿಚಾರದಲ್ಲಿ ಆತಂಕ ಪಡೋದಿಲ್ಲ ಅಂತ ಕಾಂಗ್ರೆಸ್‌ ಹೇಳಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಪ್ರಧಾನಿ ನರೇಂದ್ರ ಮೋದಿ ಅವ್ರ ಫೋಟೊ ಹರಿದು ಹಾಕಿದ್ದ ಕೇಸ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಅನಂತ್‌ ಪಟೇಲ್‌ ಅವ್ರಿಗೆ ಗುಜರಾತ್‌ನ ನವಸಾರಿ ಕೋರ್ಟ್‌ 99 ರೂಪಾಯಿ ದಂಡ ವಿಧಿಸಿದೆ. 2017ರಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯೊಂದ್ರಲ್ಲಿ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಚೇಂಬರ್‌ಗೆ ನುಗ್ಗಿದ್ದ ಅನಂತ್‌ ಪಟೇಲ್‌, ಅಲ್ಲಿದ್ದ ಮೋದಿ ಅವರ ಫೋಟೊವನ್ನ ಹರಿದು ಹಾಕಿದ್ದರು. ಈಗ 99 ರೂಪಾಯಿ ದಂಡ ವಿಧಿಸಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಿಎಂ ಭಗವಂತ್ ಮಾನ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಿಖ್‌ರ ಅಕಾಲ್ ತಖ್ತ್ ಸಂಘಟನೆ ತೀವ್ರ ಖಂಡನೆ ವ್ಯಕ್ತಪಡಿಸಿದೆ. ‘ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆʼ ಇಡುವವರ ವಿರುದ್ಧ ಇದೇ ರೀತಿ ಕ್ರಮವನ್ನ ಏಕೆ ತೆಗೆದುಕೊಳ್ಳುವುದಿಲ್ಲ ಅಂತ ಕಟುವಾಗಿ ಪ್ರಶ್ನಿಸಿದೆ. ಸಿಖ್‌ರ ಪ್ರಮುಖ ಧಾರ್ಮಿಕ ಸಂಘಟನೆಯಾದ ಅಕಾಲ್ ತಖ್ತ್ ನ ಜತೇದಾರ್ ಗಿಯಾನಿ ಹರ್‌ಪ್ರೀತ್ ಸಿಂಗ್ ಅವ್ರು ಅಮೃತಪಾಲ್ ಕೇಸ್‌ಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಎಲ್ಲಾ ಸಿಖ್ ಯುವಕರನ್ನ ಬಿಡುಗಡೆ ಮಾಡಬೇಕು ಅಂತ ಆಗ್ರಹ ಮಾಡಿದ್ದಾರೆ. ಅಷ್ಟೇ ಅಲ್ಲ ಬಿಡುಗಡೆ ಮಾಡೋದಕ್ಕೆ ಪಂಜಾಬ್‌ ಸರ್ಕಾರಕ್ಕೆ 24 ಗಂಟೆಗಳ ಡೆಡ್‌ ಲೈನ್‌ ಕೂಡ ಕೊಟ್ಟಿದ್ದಾರೆ. ಅಮೃತಪಾಲ್ ಮತ್ತು ಖಲಿಸ್ತಾನದ ಬೇಡಿಕೆಯನ್ನ ಬೆಂಬಲಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟವರ ವಿರುದ್ಧ, ( ಎನ್ಎಸ್ಎ )ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಏಕೆ ಹಾಕಬೇಕು? ಅಂತ ಪ್ರಶ್ನಿಸಿದ್ದಾರೆ. ಜೊತೆಗೆ ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆಯಿಡುವ ಲಕ್ಷಾಂತರ ಜನರಿದ್ದಾರೆ. ಹಿಂದೂ ರಾಷ್ಟ್ರಕ್ಕಾಗಿ ಕರೆ ನೀಡುವವರನ್ನೂ ಸಹ ಬಂಧಿಸಬೇಕು. ಅವರ ವಿರುದ್ಧವೂ ಎನ್ಎಸ್ಎRead More →

masthmagaa.com: ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 73 ರೂಪಾಯಿ ಜಾಸ್ತಿಯಾಗಿ ₹58,965 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 70 ರೂಪಾಯಿ ಜಾಸ್ತಿಯಾಗಿ ₹54,010 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 131 ರೂಪಾಯಿ ಜಾಸ್ತಿಯಾಗಿ ₹69,500 ಆಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 40 ಅಂಕ ಇಳಿಕೆ ಕಂಡು 57,613ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 34 ಅಂಕ ಇಳಿಕೆ ಕಂಡು 16,951 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 11 ಪೈಸೆ ಏರಿಕೆಗೊಂಡು 82.20 ಆಗಿದೆ. (82 ರೂಪಾಯಿ 20 ಪೈಸೆ). -masthmagaa.com Share on: WhatsAppContact Us for AdvertisementRead More →

masthmagaa.com: ಆಫ್ರಿಕಾದಿಂದ ತರಲಾಗಿದ್ದ ಚೀತಾವೊಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಸಾವನ್ನಪ್ಪಿದೆ. ಸಶಾ ಅನ್ನೋ ಹೆಣ್ಣು ಚೀತಾಗೆ ಕಳೆದ ಕೆಲದಿನಗಳಿಂದ ಉಷಾರಿರಲಿಲ್ಲ ಅಂತ ಕೂಡ ಹೇಳಲಾಗಿತ್ತು. ಅದ್ರಲ್ಲೂ ಜನವರಿಯಲ್ಲಿ ಸಶಾಗೆ ತುಂಬಾ ಮೆಡಿಕಲ್‌ ಎಮರ್ಜೆನ್ಸಿ ಇತ್ತು. ಚಿಕಿತ್ಸೆ ಕೂಡ ಕೊಡಿಸಲಾಗಿತ್ತು. ಇಷ್ಟಾದ್ರೂ ಈಗ ನಿರ್ಜಲೀಕರಣ ಅಥವಾ ಡೀ ಹೈಡ್ರೇಷನ್‌ನಿಂದ ಸಶಾ ಸಾವನ್ನಪ್ಪಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. 5.5 ವರ್ಷದ ಈ ಚಿರತೆಯನ್ನ ನಬೀಬಿಯಾದಿಂದ ಕರೆತರಲಾಗಿತ್ತು. -masthmagaa.com Share on: WhatsAppContact Us for AdvertisementRead More →

masthmagaa.com: ತಲೆಮರೆಸಿಕೊಂಡಿರೋ ಖಲಿಸ್ತಾನಿ ತೀವ್ರವಾದಿ ಅಮೃತ್‌ ಪಾಲ್‌ ಬಂಧನದ ಕಾರ್ಯಾಚರಣೆ ಕಂಟಿನ್ಯೂ ಆಗಿದೆ. ದೇಶದಲ್ಲಿ ನಡೀತಿದ್ದ ಕಳ್ಳ-ಪೊಲೀಸ್‌ ಆಟ ಈಗ ವಿದೇಶಕ್ಕೂ ಕಾಲಿಟ್ಟಿದೆ. ಅಮೃತ್‌ ಪಾಲ್‌ ಸಧ್ಯ ನೇಪಾಳಕ್ಕೆ ಪರಾರಿಯಾಗಿರಬಹುದು ಅಂತ ಶಂಕೆ ವ್ಯಕ್ತವಾಗ್ತಿದೆ. ನೇಪಾಳದ ಸ್ಥಳೀಯ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿವೆ. ಇದ್ರ ಬೆನ್ನಲ್ಲೇ ಭಾರತ ಸರ್ಕಾರ ನೇಪಾಳ ಸರ್ಕಾರಕ್ಕೆ ಪತ್ರ ಬರೆದಿದೆ. ಅಮೃತ್‌ಪಾಲ್‌ ಬಂಧನಕ್ಕೆ ಸಹಕಾರ ಕೊಡಬೇಕು ಅಂತ ಕಠ್ಮಂಡುವಿನಲ್ಲಿರೋ ಭಾರತೀಯ ರಾಯಭಾರ ಕಚೇರಿ ನೇಪಾಳ ಸರ್ಕಾರಕ್ಕೆ ಮನವಿ ಮಾಡಿದೆ. ಆತ ನೇಪಾಳದಲ್ಲಿ ಏನಾದ್ರೂ ಸಿಕ್ಕಿಬಿದ್ರೆ ಅವನನ್ನ ನಮಗೆ ಒಪ್ಪಿಸಬೇಕು. ಆತ ಭಾರತದ ಅಥವಾ ಇನ್ಯಾವುದೇ ನಕಲಿ ಪಾಸ್‌ಪೋರ್ಟ್‌ ಬಳಸಿ ಈ ದೇಶದಲ್ಲಿ ಅಡಗಿಕೊಳ್ಳಬಹುದು. ಅಥವಾ ಅದೇ ಪಾಸ್‌ಪೋರ್ಟ್‌ಗಳನ್ನ ಬಳಸಿ ಆತ ಮೂರನೇ ದೇಶಕ್ಕೆ ಪಲಾಯನ ಮಾಡಬೋದು. ಹೀಗಾಗಿ ಅದಕ್ಕೆ ಅವಕಾಶ ಮಾಡಿಕೊಡಬಾರದು. ಅವನು ಸಿಕ್ಕಿದ್ರೆ ನಮಗೆ ಒಪ್ಪಿಸಿ, ಇಲ್ಲಿಂದ ತಪ್ಪಿಸಿಕೊಳ್ಳೋಕೆ ಬಿಡಬೇಡಿ ಅಂತ ಭಾರತ ನೇಪಾಳಕ್ಕೆ ಮನವಿ ಮಾಡಿದೆ. ಜೊತೆಗೆ ʻಅಮೃತ್‌ ಪಾಲ್‌ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದಾನೆʼ ಅಂತ ನೇಪಾಳದ ಜನಪ್ರಿಯ ಪತ್ರಿಕೆ ಕಠ್ಮಂಡುRead More →