ಮುಂಬೈನ ಗೋವಂಡಿಯಲ್ಲಿ ರೈಲು ಡಿಕ್ಕಿ ಹೊಡೆದು ಓರ್ವ ಭಿಕ್ಷುಕ ಸಾವನ್ನಪ್ಪಿದ್ದಾರೆ. ಆತನ ಗುರುತು ಪತ್ತೆ ಹಚ್ಚಿ ಮನೆಗೆ ಹೋದ ರೈಲ್ವೆ ಪೊಲೀಸರು ಶಾಕ್ ಆಗಿದ್ದಾರೆ. ಆತನ ಗುಡಿಸಲಿನಲ್ಲಿದ್ದ ಚೀಲಗಳನ್ನು ತೆಗೆದು ನೋಡಿದಾಗ ಬರೋಬ್ಬರಿ 2 ಲಕ್ಷ ರೂಪಾಯಿಯಷ್ಟು ಚಿಲ್ಲರೆ ಮತ್ತು ನೋಟುಗಳು ಪತ್ತೆಯಾಗಿವೆ. ಇಷ್ಟೇ ಅಲ್ಲ. ಭಿಕ್ಷುಕನ ಮನೆಯಲ್ಲಿ ಬ್ಯಾಂಕ್ ಪಾಸ್ ಬುಕ್ ಸಿಕ್ಕಿದೆ. ಅದರಲ್ಲಿ 8 ಲಕ್ಷದ 77 ಸಾವಿರ ರೂಪಾಯಿ ಜಮೆ ಮಾಡಿರುವ ರಶೀದಿ ಕೂಡ ಸಿಕ್ಕಿದೆ. ಈತ ಮುಂಬೈನ ಲೋಕಲ್ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಎನ್ನಲಾಗಿದೆ. ಶುಕ್ರವಾರ ರೈಲ್ವೆ ಹಳಿ ದಾಟುವಾಗ ಡಿಕ್ಕಿಯಾಗಿ ಆತ ಸಾವನ್ನಪ್ಪಿದ್ದ. ಪೊಲೀಸರಿಗೆ ಭಿಕ್ಷುಕ ಆಜಾದ್ ಗೆ ಸೇರಿದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಸೀನಿಯರ್ ಸಿಟಿಜನ್ ಕಾರ್ಡ್ ಸಿಕ್ಕಿದೆ. ಅದರಲ್ಲಿ ರಾಜಸ್ಥಾನದ ವಿಳಾಸ ಬರೆಯಲಾಗಿದೆ. Share on: WhatsAppContact Us for AdvertisementRead More →

ಇರಾನ್‍ನಲ್ಲಿ ಇನ್‍ಸ್ಟಾಗ್ರಾಂ ಸ್ಟಾರ್ ಒಬ್ಬರು ಹಾಲಿವುಡ್ ನಟಿ ಎಂಜೆಲಿನಾ ಜೂಲಿ ಅವರ ಸ್ಪೂಕಿ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕೆ ಧರ್ಮ ನಿಂದನೆ ಕೇಸ್‍ನಲ್ಲಿ ಅರೆಸ್ಟ್ ಮಾಡಲಾಗಿದೆ. ಸಹರ್ ತಬರ್ ಎಂಬುವವರ ಮೇಲೆ ಧರ್ಮನಿಂದನೆ ಮತ್ತು ಸಾಂಸ್ಕøತಿಕ ಅಪರಾಧ, ಸಾಮಾಜಿಕ ಮತ್ತು ನೈತಿಕ ಭ್ರಷ್ಟಾಚಾರದ ಕೇಸ್ ದಾಖಲಿಸಲಾಗಿದೆ. ಸಹರ್ ತಬರ್ ತಮ್ಮ ಮುಖಕ್ಕೆ ಮೇಕಪ್ ಮಾಡಿ, ಎಂಜೆಲಿನಾ ಜೂಲಿಯವರ ಸ್ಪೂಕಿ ಚಿತ್ರದಂತೆ ಫೋಟೋ ತೆಗೆದು ಅದನ್ನು ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್‍ನಲ್ಲಿ ಇನ್‍ಸ್ಟಾಗ್ರಾಂ ಬಳಕೆಗೆ ಮಾತ್ರವೇ ಅವಕಾಶ ಇದ್ದು, ಬೇರೆ ಯಾವುದೇ ಸೋಷಿಯಲ್ ಮೀಡಿಯಾ ಬಳಕೆಗೆ ಅವಕಾಶವಿಲ್ಲ. ಕಳೆದ ವರ್ಷ ತಮ್ಮ ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಸಹರ್ ತಬರ್ ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದರು. ಈ ಮೂಲಕ ಇನ್‍ಸ್ಟಾಗ್ರಾಂನಲ್ಲಿ ಫುಲ್ ಫೇಮಸ್ ಆಗಿದ್ದರು. ಕೆಲವೊಂದು ಫೋಟೋಗಳಲ್ಲಿ ಸಹರ್, ಹಿಜಾಬ್ ಧರಿಸಿ, ಮೂಗಿನ ಮೇಲೆ ಬ್ಯಾಂಡೇಜ್ ಕೂಡ ಹಾಕಿದ್ದರು. View this post on Instagram A post shared by Sahar Tabar (@sahartabar_officialx) on NovRead More →

ಫೋಲ್ಕ್ ಸಿಂಗರ್ ಸುಷ್ಮಾ ನೆಕ್ಪುರ್ ಹತ್ಯೆ ಸಂಬಂಧ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆಕೆಯ ಪ್ರಿಯಕರ ಗಜೇಂದ್ರ ಭಾಟಿ ಆತನ ಕಾರ್ ಡ್ರೈವರ್, ಸ್ನೇಹಿತರನ್ನು ಬಂಧಿಸಲಾಗಿದೆ. ಜೊತೆಗೆ ಬಂಧಿತರಲ್ಲಿ ಇಬ್ಬರು ಶಾರ್ಪ್ ಶೂಟರ್‍ಗಳೂ ಸೇರಿದ್ದಾರೆ. ಅಕ್ಟೋಬರ್ 1ರಂದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಬಳಿ ಸುಷ್ಮಾ ಅವರನ್ನು ಹತ್ಯೆಗೈಯ್ಯಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಶಾರ್ಪ್ ಶೂಟರ್‍ಗಳನ್ನು ಅರೆಸ್ಟ್ ಮಾಡಿದ್ದರು. ಸುಷ್ಮಾ ಪ್ರಿಯಕರನೇ ಹತ್ಯೆಗೆ ಸುಪಾರಿಗೆ ಕೊಟ್ಟಿದ್ದು ಅಂತ ಅವರಿಂದಲೇ ತಿಳಿದುಬಂದಿತ್ತು. ನಂತರ ಪೊಲೀಸರು ಸುಷ್ಮಾ ಪ್ರಿಯಕರ ಗಜೇಂದ್ರ ಭಾಟಿ, ಡ್ರೈವರ್ ಅಮಿತ್, ಸ್ನೇಹಿತರಾದ ಪ್ರಮೋದ್ ಕಸನ ಮತ್ತು ಅಜಬ್ ಸಿಂಗ್ ಸೇರಿ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ. ಶಾರ್ಪ್ ಶೂಟರ್‍ಗಳನ್ನು ಸಂದೀಪ್ ಮತ್ತು ಸುಖೇಶ್ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಷ್ಮಾ ಪ್ರಿಯಕರ ಗಜೇಂದ್ರ, ನನ್ನ ಮತ್ತು ಸುಷ್ಮಾ ನಡುವಿನ ಸಂಬಂಧ ಹಾಳಾಗಿತ್ತು. ನನ್ನ ಆಸ್ತಿಯನ್ನು ಆಕೆ ಮತ್ತು ಆಕೆಯ ಮಗುವಿನ ಹೆಸರಿಗೆ ಮಾಡುವಂತೆ ಒತ್ತಾಯಿಸುತ್ತಿದ್ದಳು. ಇದೇ ಕಾರಣಕ್ಕೆ ಕೊಲೆಗೆ ಸುಪಾರಿ ನೀಡಿರೋದಾಗಿ ಗಜೇಂದ್ರRead More →

ಪತಿ ಮತ್ತು ಮಗಳ ಜೊತೆ ಸೋನಿಪತ್ ಹೋಗುತ್ತಿದ್ದ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿದೆ. ಹರಿಯಾಣದ ಮುರ್ತಲ್ ಬಳಿ ಈ ಘಟನೆ ನಡೆದಿದೆ. ದೆಹಲಿ ಮೂಲದ ಮಹಿಳೆ ಸೋನಿಪತ್‍ನಲ್ಲಿ ನೆಲೆಸಿದ್ದರು. ನಿನ್ನೆ ಬೆಳಗ್ಗಿನ ಜಾವ 3.30ಕ್ಕೆ ತನ್ನ ಪತಿ ಮತ್ತು ಮಗಳ ಜೊತೆ ಬೈಕ್‍ನಲ್ಲಿ ಮನೆಗೆ ಮರಳುತ್ತಿದ್ದರು. ಆದ್ರೆ ಮುರ್ತಲ್ ಬಳಿ ಬರೋವಾಗ ಪೆಟ್ರೋಲ್ ಖಾಲಿಯಾಗಿದೆ. ಹೀಗಾಗಿ ಮೂವರೂ ನಡೆದುಕೊಂಡು ಸಾಗುತ್ತಿದ್ದರು. ಮಹಿಳೆ ಹಿಂದೆ ಸ್ವಲ್ಪ ನಿಧಾನವಾಗಿ ಬರುತ್ತಿದ್ದರು. ಈ ವೇಳೆ ಬಂದ ಟ್ರಕ್‍ನಲ್ಲಿದ್ದ ಮೂವರು ಮಹಿಳೆಯನ್ನು ಕಿಡ್ನಾಪ್ ಮಾಡಿ, ಬಲ್ಲಾಭಗಡ್‍ನತ್ತ ಕರೆದೊಯ್ದಿದ್ದಾರೆ. ಈ ವೇಳೆ ಮೂವರೂ ಸೇರಿಕೊಂಡು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಸಂಬಂಧ ದೂರು ದಾಖಲಿಸಿರುವ ಮಹಿಳೆ ಪೊಲೀಸರಿಗೆ ಟ್ರಕ್‍ನ ನಂಬರ್ ಕೂಡ ನೀಡಿದ್ದಾರೆ. ಅಲ್ಲದೆ ಆರೋಪಿಗಳ ಹೆಸರು ವಿಜಯ್, ಸೋನು ಮತ್ತು ಸುಮೆರ್ ಎಂದು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇವರಲ್ಲಿ ವಿಜಯ್ ಈಗಾಗಲೇ ಸಿಕ್ಕಿಬಿದ್ದಿದ್ದು, ಉಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. Share on: WhatsAppContact Us for AdvertisementRead More →

ಮುಂಬೈನ ಆರೆ ಕಾಲೋನಿಯಲ್ಲಿ ಮೆಟ್ರೋಗೆ ರಸ್ತೆ ನಿರ್ಮಾಣ ಮಾಡಲು ಮರಗಳನ್ನು ಕಡಿಯೋದಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರುಣ್ ಮಿಶ್ರಾ ಮತ್ತು ನ್ಯಾ.ಅಶೋಕ್ ಭೂಷಣ್ ನೇತೃತ್ವದ ಪೀಠ ಈ ಆದೇಶ ನೀಡಿದೆ. ಮರಗಳನ್ನು ಕಡಿಯದಂತೆ ತಡೆಯಬೇಕು ಎಂದು ನಿನ್ನೆ ಕೆಲ ಕಾನೂನು ವಿದ್ಯಾರ್ಥಿಗಳು ನಿನ್ನೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಪತ್ರ ಬರೆದಿದ್ದರು. ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಿ, ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿದೆ. ಅಲ್ಲದೆ ಮರಗಳನ್ನು ಕಡಿಯದಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿ, ಮಧ್ಯಂತರ ಆದೇಶ ಹೊರಡಿಸಿದೆ. Share on:Read More →

ಟಿಎಂಸಿ ಸಂಸದೆ ನುಸ್ರತ್ ಜಹಾನ್ ತಬಲ ಬಾರಿಸಿದ್ದಾರೆ. ಕೋಲ್ಕತ್ತಾದ ಸುರುಚಿ ಸಂಘ ಪಂಡಾಲ್ ಬಳಿ ಅವರು ದುರ್ಗಾ ಪೂಜೆಯಲ್ಲಿ ಭಾಗಿಯಾಗಿದ್ದರು. ಅವರಿಗೆ ಅವರ ಪತಿ ನಿಖಿಲ್ ಜೈನ್ ಸಾಥ್ ಕೊಟ್ಟಿದ್ದರು. ಈ ವೇಳೆ ಅಲ್ಲಿ ತಬಲ ಬಾರಿಸುತ್ತಿದ್ದವರ ಬಳಿ ಹೋಗಿ ತಾನೂ ಬಾರಿಸಿದ್ದಾರೆ. ಈ ಮೂಲಕ ಸಂಸದೆ ನುಸ್ರತ್ ತಮ್ಮ ಡ್ರಮ್ಮಿಂಗ್ ಸ್ಕಿಲ್ಸ್ ಪ್ರದರ್ಶಿಸಿದ್ದಾರೆ. ಈ ವೇಳೆ ಇತರ ಭಕ್ತರೂ ಕೂಡ ದುರ್ಗಾಷ್ಠಮಿ ಪ್ರಯುಕ್ತ ತಾಯಿ ದುರ್ಗಾ ಪೂಜೆ ಮಾಡಿ ಪುನೀತರಾದ್ರು. #WATCH Kolkata: Trinamool Congress MP Nusrat Jahan and husband Nikhil Jain play the 'dhaak' at Suruchi Sangha. #DurgaPuja2019 pic.twitter.com/FFOaj4iyBA — ANI (@ANI) October 6, 2019 Share on: WhatsAppContact Us for AdvertisementRead More →

ನಾಥೂರಾಮ್ ಗೋಡ್ಸೆ ವಿಚಾರವಾಗಿ ಬಿಜೆಪಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ಮಾತನಾಡಿದ ಅವರು, ನಾಥುರಾಮ್ ಗೋಡ್ಸೆ ದೇಶಭಕ್ತನಾ ಅಥವಾ ಗಾಂಧೀಜಿಯವರ ಹಂತಕನಾ ಎಂದು ಬಿಜೆಪಿಯವರು ತಿಳಿಸಬೇಕು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ನಾಥುರಾಮ್ ಗೋಡ್ಸೆ ಬಗ್ಗೆ ತಮ್ಮ ಪಕ್ಷದ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ. ಅಲ್ಲದೆ ಬಿಜೆಪಿಯ ವಿಚಾರಧಾರೆಗಳು ಮತ್ತು ಗಾಂಧೀಜಿ ತತ್ವಗಳು ತದ್ವಿರುದ್ಧವಾಗಿವೆ. ಆದ್ರೂ ಬಿಜೆಪಿಯವರು ಗಾಂಧೀಜಿಯವರ 150ನೇ ಜಯಂತಿಯ ಅಂಗವಾಗಿ ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಆದ್ರೆ ಅವರು ಮೊದಲು ಗೋಡ್ಸೆ ದೇಶಭಕ್ತನಾ ಅಥವಾ ಹಂತಕನಾ ಅನ್ನೋದನ್ನ ಸ್ಪಷ್ಟಪಡಿಸಲಿ ಎಂದು ಸವಾಲ್ ಎಸೆದಿದ್ದಾರೆ. Share on: WhatsAppContact Us for AdvertisementRead More →

ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ ಗಡಿನುಸುಳಲು ಉಗ್ರರು ವಿಫಲ ಯತ್ನ ನಡೆಸಿದ್ದಾರೆ. ಇಂದು ಬೆಳಗ್ಗೆ ನೌಗಾಮ್ ವಲಯದಲ್ಲಿ ಕೆಲ ಉಗ್ರರು ಗಡಿ ನಿಯಂತ್ರಣ ರೇಖೆ ದಾಟಿಕೊಂಡು ಬರುತ್ತಿದ್ದರು. ಆದ್ರೆ ಅಷ್ಟರಲ್ಲಿ ಭಾರತದ ಗಡಿ ಭದ್ರತಾ ಪಡೆ ಯೋಧರ ಕಣ್ಣು ಈ ದುಷ್ಟರ ಮೇಲೆ ಬಿತ್ತು. ತಕ್ಷಣ ಬಿಎಸ್‍ಎಫ್ ಯೋಧರು ಕಾರ್ಯಾಚರಣೆ ಆರಂಭಿಸಿದ್ರು. ಇದರಿಂದ ಬೆದರಿದ ಉಗ್ರರು ವಾಪಸ್ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಓಡಿಹೋಗಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 12 ಮತ್ತು 13ರಂದು ರಾತ್ರಿ ಗಡಿ ನಿಯಂತ್ರಣ ರೇಖೆ ದಾಟಲು ಯತ್ನಿಸಿದ್ದ ಉಗ್ರರ ಯತ್ನವನ್ನು ಸೇನೆ ವಿಫಲಗೊಳಿಸಿತ್ತು. ಅಲ್ಲದೆ ಗಡಿ ನುಸುಳಲು ಯತ್ನಿಸುತ್ತಿದ್ದ ಓರ್ವ ಅನುಮಾನಾಸ್ಪದ ಕಮಾಂಡೋನನ್ನು ಕೂಡ ಸೇನೆ ಹೊಡೆದುರುಳಿಸಿತ್ತು. ಈ ಕುರಿತ ವಿಡಿಯೋ ಕೂಡ ಬಿಡುಗಡೆ ಮಾಡಿತ್ತು. ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಇನ್ನೂ ಭಾರಿ ಪ್ರಮಾಣದಲ್ಲಿ ಉಗ್ರರು ಗಡಿ ನುಸುಳಲು ಕಾದು ಕುಳಿತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ಬಳಿಕ ಪಾಕಿಸ್ತಾನಕ್ಕೆ ದಿಕ್ಕೇ ತೋಚದಂತಾಗಿದೆ. ಹೀಗಾಗಿ ಉಗ್ರರನ್ನು ಕಳುಹಿಸಿ ಹಿಂಸಾತ್ಮಕ ಕೃತ್ಯ ಎಸಗಲು ಪ್ಲಾನ್ ಮಾಡ್ಕೊಂಡಿದೆ.Read More →

ಜಾನಿ ದಾದಾ ಮತ್ತು ಟಿಕ್ ಟಾಕ್ ವಿಲನ್ ಎಂದು ಕರೆಸಿಕೊಳ್ಳುತ್ತಿದ್ದ ಅಶ್ವಿನಿ ಕುಮಾರ್ ಉತ್ತರ ಪ್ರದೇಶದ ಸರ್ಕಾರಿ ಬಸ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನನ್ನು ತಾನು ವಿಲನ್ ಎಂದು ಬಿಂಬಿಸಿಕೊಂಡು ಟಿಕ್‍ಟಾಕ್‍ನಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿದ್ದ ಈತ, 3 ಕೊಲೆ ಕೇಸ್‍ಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. 30 ವರ್ಷದ ಈತ ಫೇಸ್‍ಬುಕ್‍ನಲ್ಲೂ ನಾನು ಎಲ್ಲವನ್ನೂ ನಿರ್ನಾಮ ಮಾಡುತ್ತೇನೆ. ಭೂತ ಈಗ ರೆಡಿಯಾಗಿದೆ ಅಂತೆಲ್ಲಾ ಬರೆದುಕೊಳ್ಳುತ್ತಿದ್ದ. ಸೆಪ್ಟೆಂಬರ್ 27ರಂದು ಆತ ಬಿಜೆಪಿ ನಾಯಕನ 25 ವರ್ಷದ ಪುತ್ರ ಮತ್ತು ಅಳಿಯನನ್ನು ಗುಂಡಿಟ್ಟು ಕೊಂದಿದ್ದ. ಜೊತೆಗೆ ಓರ್ವ ಯುವತಿಯನ್ನೂ ಕೊಲೆಗೈದಿದ್ದ. ಪೊಲೀಸರಿಗೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ ಈತನ ತಲೆಯ ಮೇಲೆ 1 ಲಕ್ಷ ರೂಪಾಯಿ ಇನಾಮು ಘೋಷಿಸಲಾಗಿತ್ತು. 15 ಪೊಲೀಸರ ತಂಡ ಅಶ್ವಿನ್ ಕುಮಾರ್ ನನ್ನು ಒಂದು ವರದಿಂದ ಚೇಸ್ ಮಾಡುತ್ತಿದ್ದರು. ಪೊಲೀಸರಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ಈತ ಸರ್ಕಾರಿ ಬಸ್ ಏರಿದ್ದ. ಪೊಲೀಸರು ತಡೆದು ಪರಿಶೀಲಿಸುವಾಗ ಗನ್ ತೆಗೆದು ಶೂಟ್ ಮಾಡಿಕೊಂಡಿದ್ದಾನೆ. Share on: WhatsAppContact Us for AdvertisementRead More →

ಅಳಿಯನೊಬ್ಬ ಮಾವನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಲು ಹೋಗಿ ಜೀವ ಬಿಟ್ಟಿದ್ದಾನೆ. ಫ್ಲೋರಿಡಾದ ಗಾಲ್ಫ್ ಬ್ರೀಜ್‍ನಲ್ಲಿ ಈ ಘಟನೆ ನಡೆದಿದೆ. 37 ಕ್ರಿಸ್ಟೋಫರ್ ಬರ್ಗನ್ ಎಂಬುವವರು ತಮ್ಮ ಮಾವನ 62ನೇ ವರ್ಷದ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಆಗಿ ವಿಶ್ ಮಾಡಬೇಕು ಅಂತ 4500 ಮೈಲಿ ದೂರದ ನಾರ್ವೆಯಿಂದ ಬಂದಿದ್ದರು. ರಾತ್ರಿ 11.30 ವೇಳೆಗೆ ಹಿಂದಿನ ಬಾಗಿಲು ಬಡಿದ ಶಬ್ದ ಕೇಳಿದ 62 ವರ್ಷದ ರಿಚರ್ಡ್ ಡೆನ್ನಿಸ್ ತಮ್ಮ ಗನ್ ಹಿಡಿದು ಹೋಗಿ ಬಾಗಿಲು ತೆಗೆದಿದ್ದಾರೆ. ಆದ್ರೆ ಆಗ ಪೊದೆಯಿಂದ ಜಿಗಿದ ಅಳಿಯ ವಿಶ್ ಮಾಡಿದ್ದಾರೆ. ಆದ್ರೆ ಅಷ್ಟರಲ್ಲಿ ರಿಚರ್ಡ್ ಡೆನ್ನಿಸ್ ಗುಂಡು ಹಾರಿಸಿ ಆಗಿತ್ತು. ಅದು ಕ್ರೀಸ್ಟೋಫರ್ ಬರ್ಗನ್ ಅವರ ಎದೆಯನ್ನೇ ಸೀಳಿ, ಹೃದಯಕ್ಕೆ ನಾಟಿದೆ. ಇದರಿಂದ ಅವರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಇದೊಂದು ಆಕಸ್ಮಿಕ ಘಟನೆಯಾದ್ದರಿಂದ ಯಾವುದೇ ರೀತಿಯ ಕ್ರಿಮಿನಲ್ ಕೇಸ್ ಹಾಕಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. Share on: WhatsAppContact Us for AdvertisementRead More →