ವೇದಿಕೆ ಮೇಲೆ ನಿಶ್ಚಿತಾರ್ಥ ಮಾಡಿಕೊಂಡ ಚಂದನ್ ಶೆಟ್ಟಿ ವಿರುದ್ಧ ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪಾರಂಪರಿಕ ನಾಡಹಬ್ಬದಲ್ಲಿ ಈ ರೀತಿ ವರ್ತಿಸಿರೋದು ಅಕ್ಷಮ್ಯ ಅಪರಾಧ. ಕ್ಷಮಿಸಲು ಸಾಧ್ಯವೇ ಇಲ್ಲ. ತಾಯಿ ಏನ್ ತೀರ್ಮಾನ ಕೊಡ್ತಾರೋ ಕೊಡಲಿ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಇಬ್ಬರಿಗೂ ನೋಟಿಸ್ ನೀಡಲಾಗಿದ್ದು, ಕಾನೂನು ರೀತಿಯ ಕ್ರಮ ಕೈಗೊಳ್ಳಾಗುತ್ತೆ. ಇದು ಹುಡುಗಾಟಿಕೆ ಆಡೋ ಜಾಗವಲ್ಲ. ಆ ಹುಡುಗ ನನಗೆ ಪರಿಚಯದವನೇ..ಯಾಕೆ ಹೀಗೆ ಮಾಡಿದ್ನೋ ಗೊತ್ತಿಲ್ಲ. ಇದಕ್ಕೆ ಉಪಸಮಿತಿ ಹೊಣೆಯಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಚಂದನ್ ಶೆಟ್ಟಿ, ನಾವು ಎಂಗೇಜ್ಮೆಂಟ್ ಆಗಿಲ್ಲ. ಜಸ್ಟ್ ಪ್ರಪೋಸ್ ಮಾಡಿದ್ದೇನೆ. ನಾವು ಮನರಂಜನೆಗಾಗಿ ಹೀಗೆ ಮಾಡಿದ್ವಿ. ಎಲ್ಲರಿಗೂ ನಮ್ಮ ನಡುವೆ ಪ್ರೀತಿ ಇದೆ ಅಂತ ಅನುಮಾನ ಇತ್ತು. ಅದನ್ನು ಸರಿಪಡಿಸಿದ್ದೇವೆ ಅಷ್ಟೆ ಅಂದ್ರು.
Contact Us for Advertisement