masthmagaa.com:
ಅಯೋಧ್ಯೆ ಬಗ್ಗೆ ಹೊಸ ಪುಸ್ತಕ ಬರೆದಿರುವ ಸಲ್ಮಾನ್ ಖುರ್ಷೀದ್ ವಿವಾದವನ್ನು ಮೈಮೇಲೆ ಎಳ್ಕೊಂಡಿದ್ದಾರೆ. ದೆಹಲಿ ಮೂಲದ ವಕೀಲರೊಬ್ಬರು ದೂರು ನೀಡಿದ್ದು, 68 ವರ್ಷದ ಸಲ್ಮಾನ್ ಖುರ್ಷೀದ್ ಹಿಂದುತ್ವವನ್ನು ಇಸ್ಲಾಮಿಕ್ ಉಗ್ರ ಸಂಘಟನೆಗಳಿಗೆ ಹೋಲಿಸಿದ್ದಾರೆ ಅಂತ ಆರೋಪಿಸಿದ್ದಾರೆ. ಇನ್ನು ಪಂಚರಾಜ್ಯ ಚುನಾವಣೆ ಹೊತ್ತಲ್ಲಿ ಸಲ್ಮಾನ್ ಖುರ್ಷೀದ್ ಪುಸ್ತಕವನ್ನು ಬಿಜೆಪಿ ರಾಜಕೀಯ ಬಾಣವಾಗಿ ಮಾಡ್ಕೊಂಡಿದೆ. ಕಾಂಗ್ರೆಸ್ ಈಗಿಂದೀಗಲೇ ಸಲ್ಮಾನ್ ಖುರ್ಷೀದ್ರನ್ನು ಪಕ್ಷದಿಂದ ತೆಗೆದುಹಾಕಬೇಕು. ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಹಿಂದುತ್ವವನ್ನು ಗೌರವಿಸೋದಾದ್ರೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್ ಈ ರೀತಿ ಮಾಡೋ ಮೂಲಕ ಧರ್ಮ ರಾಜಕಾರಣ ಮಾಡ್ತಿದೆ ಅಂತ ಬಿಜೆಪಿ ಆರೋಪಿಸಿದೆ. ತಮ್ಮ ಹೊಸ ಪುಸ್ತಕದಲ್ಲಿ ಸಲ್ಮಾನ್ ಖುರ್ಷೀದ್, ಹಿಂದುತ್ವ ಅನ್ನೋದು ಸಾಧು ಸಂತರ ಪುರಾತನ ಧರ್ಮವನ್ನು ಬದಿಗೆ ಸರಿಸ್ತಿದೆ. ಇದು ಎಲ್ಲಾ ರೀತಿಯಲ್ಲೂ ಐಎಸ್ಐಎಸ್ ಅಥವಾ ಬೋಕೋ ಹರಮ್ ರೀತಿಯ ಉಗ್ರ ಸಂಘಟನೆಗಳ ರೀತಿ ಇದೆ ಅಂತ ಬರೆದುಕೊಂಡಿದ್ದಾರೆ.
-masthmagaa.com
Contact Us for Advertisement