masthmagaa.com:
ಭಾರತದ ಇತಿಹಾಸವನ್ನು ಪಿತೂರಿ ಮಾಡಿ ತಿರುಚಲಾಗಿದ್ದು, ಸ್ವತಂತ್ರದ ನಂತರವೂ ಅದನ್ನೇ ಕಲಿಸಲಾಗಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಸ್ಸಾಂನ ಅಹೊಮ್ ಜನರಲ್ ಲಚಿತ್ ಬರ್ಫುಕನ್ ಅವ್ರ 400ನೇ ಜನ್ಮದಿನಾಚರಣೆ ವೇಳೆ ಮೋದಿ ಮಾತಾಡಿದ್ದಾರೆ. ದೇಶವನ್ನ ಲೂಟಿ ಮಾಡಲಾಯಿತು ಅಂತ ಹೇಳಲಾಗಿದೆ. ಆದ್ರೆ ಹಲವಾರು ವೀರರ ಬಗ್ಗೆ ಮಾಹಿತಿಯೇ ಇಲ್ಲ. ಉದ್ದೇಶ ಪೂರ್ವಕವಾಗಿ ಇತಿಹಾಸವನ್ನ ಮರೆಮಾಚಲಾಗಿದೆ. ಮೊಘಲರ ವಿರುದ್ಧ ಹೋರಾಡಿದ್ದ ವೀರ ಲಚಿತ್ ಬರ್ಫುಕನ್ ಪ್ರಮುಖರು ಅಲ್ವಾ? ಅವ್ರ ಬಗ್ಗೆ ಯಾಕೆ ಇತಿಹಾಸದಲ್ಲಿ ಮಾಹಿತಿ ಇಲ್ಲ. ಮೊಘಲರ ವಿರುದ್ಧ ಅಸ್ಸಾಂನ ಸಾವಿರಾರು ಜನರ ತ್ಯಾಗ ಮುಖ್ಯವಲ್ಲವೇ? ಅಂತ ಮೋದಿ ಪ್ರಶ್ನಿಸಿದ್ದಾರೆ.
-masthmagaa.com
Contact Us for Advertisement