masthmagaa.com:
ಪುನೀತ್ ರಾಜ್ ಕುಮಾರ್ ಅವರ ಪ್ರಾಪರ್ಟಿ ವಿಚಾರ ತೆಗೆದಿರುವ ಉಮಾಪತಿ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ನಟ ದರ್ಶನ್, ಉಮಾಪತಿ ವಿನಾಕಾರಣ ದೊಡ್ಮನೆ ವಿಷಯ ತೆಗೆಯುತ್ತಿದ್ದಾರೆ. ಪುನೀತ್ ಮತ್ತು ರಾಘಣ್ಣ ಅವರ ಪ್ರಾಪರ್ಟಿ ಖರೀದಿಸಿದೆ ಎಂದು ಅವರೇ ನನಗೆ 2018ರ ಸುಮಾರಿನಲ್ಲಿ ಹೇಳಿದ್ದರು, ಆಗ ಆ ಪ್ರಾಪರ್ಟಿ ಮಾರುವ ಯೋಚನೆ ಇದ್ದರೆ ನನಗೆ ಕೊಡಿ ಎಂದು ಒಮ್ಮೆ ಕೇಳಿದ್ದೆ ಅಷ್ಟೇ, ಯಾವುದೇ ಒತ್ತಾಯ ಮಾಡಿರಲಿಲ್ಲ. ಆಗ ಅವರೇ ನೀವೇ ತೆಗೆದುಕೊಳ್ಳಿ ಎಂದಿದ್ದರು, ಅದೂ ಅಲ್ಲದೇ ಸುಮಾರು ಒಂದೂವರೆ ವರ್ಷ ಅದರ ಬಾಡಿಗೆ ಕೂಡ ನನಗೆ ಕೊಡುತ್ತಾ ಬಂದಿದ್ದಾರೆ. ಆದರೆ ಈಗ ನಾನು ಪುನೀತ್ ಪ್ರಾಪರ್ಟಿ ಬೇಕು ಅಂತ ಒತ್ತಾಯ ಮಾಡಿದೆ ಎಂದು ಹೇಳಿ ನನ್ನ 25 ಕೋಟಿ ವಂಚನೆ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ನಾನು ಮತ್ತು ನನ್ನ ತಂದೆ ಇಬ್ಬರು ದೊಡ್ಮನೆ ಇಂದಲೇ ಅನ್ನ ತಿಂದಿರೋದು, ಈಗ ವಿನಾಕಾರಣ ಅವರ ಹೆಸರು ಬಂದಿದ್ದಕ್ಕೆ ಈಗ ಮಾತನಾಡುತ್ತಿದ್ದೇನೆ ಎಂದು ದರ್ಶನ ಹೇಳಿದ್ದಾರೆ.