ದೊಡ್ಮನೆ ವಿಚಾರಕ್ಕೆ ಬಂದರೆ ಸುಮ್ನಿರಲ್ಲ, ಇಂದ್ರಜಿತ್ ಗಂಡಸೇ ಆಗಿದ್ರೆ ನನ್ನ ವಾಯ್ಸ್ ನೋಟ್ ಬಿಡಲಿ: ದರ್ಶನ್

masthmagaa.com:

ಪುನೀತ್ ರಾಜ್ ಕುಮಾರ್ ಅವರ ಪ್ರಾಪರ್ಟಿ ವಿಚಾರ ತೆಗೆದಿರುವ ಉಮಾಪತಿ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ನಟ ದರ್ಶನ್, ಉಮಾಪತಿ ವಿನಾಕಾರಣ ದೊಡ್ಮನೆ ವಿಷಯ ತೆಗೆಯುತ್ತಿದ್ದಾರೆ. ಪುನೀತ್ ಮತ್ತು ರಾಘಣ್ಣ ಅವರ ಪ್ರಾಪರ್ಟಿ ಖರೀದಿಸಿದೆ ಎಂದು ಅವರೇ ನನಗೆ 2018ರ ಸುಮಾರಿನಲ್ಲಿ ಹೇಳಿದ್ದರು, ಆಗ ಆ ಪ್ರಾಪರ್ಟಿ ಮಾರುವ ಯೋಚನೆ ಇದ್ದರೆ ನನಗೆ ಕೊಡಿ ಎಂದು ಒಮ್ಮೆ ಕೇಳಿದ್ದೆ ಅಷ್ಟೇ, ಯಾವುದೇ ಒತ್ತಾಯ ಮಾಡಿರಲಿಲ್ಲ. ಆಗ ಅವರೇ ನೀವೇ ತೆಗೆದುಕೊಳ್ಳಿ ಎಂದಿದ್ದರು, ಅದೂ ಅಲ್ಲದೇ ಸುಮಾರು ಒಂದೂವರೆ ವರ್ಷ ಅದರ ಬಾಡಿಗೆ ಕೂಡ ನನಗೆ ಕೊಡುತ್ತಾ ಬಂದಿದ್ದಾರೆ. ಆದರೆ ಈಗ ನಾನು ಪುನೀತ್ ಪ್ರಾಪರ್ಟಿ ಬೇಕು ಅಂತ ಒತ್ತಾಯ ಮಾಡಿದೆ ಎಂದು ಹೇಳಿ ನನ್ನ 25 ಕೋಟಿ ವಂಚನೆ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ನಾನು ಮತ್ತು ನನ್ನ ತಂದೆ ಇಬ್ಬರು ದೊಡ್ಮನೆ ಇಂದಲೇ ಅನ್ನ ತಿಂದಿರೋದು, ಈಗ ವಿನಾಕಾರಣ ಅವರ ಹೆಸರು ಬಂದಿದ್ದಕ್ಕೆ ಈಗ ಮಾತನಾಡುತ್ತಿದ್ದೇನೆ ಎಂದು ದರ್ಶನ ಹೇಳಿದ್ದಾರೆ.

ಇನ್ನು ಇಂದ್ರಜಿತ್ ಲಂಕೇಶ್ ಅವರ ಆರೋಪಗಳ ಬಗ್ಗೆ ಮಾತಾಡಿದ ದರ್ಶನ್ ಇಂದ್ರಜಿತ್ ಗಾಂಡುಗಿರಿ ಎಂಬ ಪದ ಬಳಸಿದ್ದಾರೆ, ಅವರು ಗಂಡಸೇ ಆಗಿದ್ರೆ ನನ್ನ ಒಂದು ವಾಯ್ಸ್ ನೋಟ್ ಅವರ ಬಳಿ ಇದೆ ಅದನ್ನ ಮಾಧ್ಯಮದ ಮುಂದೆ ತೆರೆದಿಡಲು ಹೇಳಿ ಆಮೇಲೆ ನಾನು ಬೇರೆ ಎಲ್ಲ ಆರೋಪಗಳಿಗೆ ಉತ್ತರ ಕೊಡುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.
-masthmagaa.com
Contact Us for Advertisement

Leave a Reply