ಧಾರ್ಮಿಕ ಸಾಮರಸ್ಯ ಕದಡೋಕೆ ದುಷ್ಕರ್ಮಿಗಳು ಏನ್‌ ಮಾಡಿದ್ರು ಗೊತ್ತಾ? ಇಲ್ಲಿದೆ ನೋಡಿ ಸ್ಟೋರಿ

masthmagaa.com:

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಉತ್ತರ ಪ್ರದೇಶದ ಲಕ್ನೋ ಶಾಲೆಯೊಂದರಲ್ಲಿ ಮಕ್ಕಳು ನಾಟಕ ಒಂದನ್ನ ಪ್ರದರ್ಶಿಸಿದ್ದಾರೆ. ಆದ್ರೆ ಕೆಲ ಕಿಡಿಗೇಡಿಗಳು ನಾಟಕದ ಸಣ್ಣ ತುಣುಕನ್ನ ಶೇರ್‌ ಮಾಡಿ ಕೋಮು ಗಲಭೆಗೆ ಪ್ರೇರಿಪಿಸಿದ್ದಾರೆ. ಇವರು ಶೇರ್‌ ಮಾಡಿದ ವಿಡಿಯೋದಲ್ಲಿ ಭಾರತ ಮಾತೆ ಪಾತ್ರವನ್ನ ಮಾಡ್ತಿದ್ದ ಬಾಲಕಿಯ ಕಿರೀಟ ತೆಗೆದು, ಆಕೆಗೆ ನಮಾಜ್‌ ಮಾಡುವಂತೆ ಹೇಳಲಾಗಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿತ್ತು. ಬಳಿಕ ಶಾಲೆಗೆ ಹೋಗಿ ಪೊಲೀಸರು ತನಿಖೆ ಮಾಡಿದ್ದಾರೆ. ಆವಾಗ ಸತ್ಯ ಬೆಳಕಿಗೆ ಬಂದಿದೆ. ಅದ್ರಲ್ಲಿ ಮಕ್ಕಳು ಯಾವುದೇ ಜಾತಿ ಭೇದ ಭಾವವಿಲ್ದೇ ಎಲ್ಲರೂ ಒಟ್ಟಾಗಿ ಬಾಳಿ ಅನ್ನೋ ಸಂದೇಶ ಕೊಡುವಂತ ನಾಟಕ ಮಾಡಿದ್ದಾರೆ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗೂ ಪೂರ್ಣ ಕಿರು ನಾಟಕವನ್ನ ಅಪ್‌ಲೋಡ್‌ ಕೂಡ ಮಾಡಿದ್ದಾರೆ. ಆದ್ರೆ ಈ ಕಿಡಿಗೇಡಿಗಳು ನಾಟಕವನ್ನ ಎಡಿಟ್‌ ಮಾಡಿ ತಪ್ಪು ಅರ್ಥ ಬರುವಂತೆ ಶೇರ್‌ ಮಾಡಿದ್ದಾರೆ. ಇದೀಗ ಈ ವಿಡಿಯೋವನ್ನ ಶೇರ್‌ ಮಾಡಿದ ಆರೋಪಿಗಳ ವಿರುದ್ದ ಪೊಲೀಸರು ತನಿಖೆ ನಡೆಸ್ತಿದಾರೆ.

-masthmagaa.com

 

Contact Us for Advertisement

Leave a Reply