masthmagaa.com:
ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಅರೆಸ್ಟ್ ಅಗಿರೋ ಸತ್ಯೇಂದ್ರ ಜೈನ್ ಅವ್ರ ವಿಚಾರಣೆ ವೇಳೆಯಲ್ಲಿ ವಕೀಲರು ಇರಬಹುದು ಅಂತ ಟ್ರಯಲ್ ಕೋರ್ಟ್ ಅನುಮತಿ ನೀಡಿದೆ. ಈ ಆದೇಶವನ್ನ ಪ್ರಶ್ನಿಸಿ ED ಈಗ ದಿಲ್ಲಿ ಹೈಕೋರ್ಟ್ನ ಮೊರೆ ಹೋಗಿದೆ. ಅಲ್ಲಿನ ಹಂಗಾಮಿ ಮುಖ್ಯ ನ್ಯಾಯಧೀಶ ವಿಪಿನ್ ಸಿಂಘಿ ಮತ್ತು ನ್ಯಾಯಧೀಶ ಸಚಿನ್ ದತ್ತ ED ಮನವಿಯನ್ನ ಸ್ವೀಕರಿಸಿದ್ದು, ವಿಚಾರಣೆ ನಡೆಸೋಕೆ ಶುಕ್ರವಾರ ನಿಗದಿಪಡಿಸಿದ್ದಾರೆ. ಇನ್ನೊಂದ್ ಕಡೆ ಸತ್ಯೇಂದ್ರ ಜೈನ್ ಬಗ್ಗೆ ದೇಶ ಹೆಮ್ಮೆ ಪಡ್ಬೇಕು, ಜನ್ರಿಗೆ ಉಚಿತವಾಗಿ ಚಿಕಿತ್ಸೆ ನೀಡೋ ʻಮೊಹಲ್ಲಾ ಕ್ಲಿನಿಕ್ʼ ನೀಡಿದ್ದಕ್ಕಾಗಿ ಅವ್ರಿಗೆ ಪದ್ಮವಿಭೂಷಣ ಪ್ರಶಸ್ತಿ ಕೊಡ್ಬೇಕು ಅಂತ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
-masthmagaa.com
Contact Us for Advertisement