ಸಿಗಲಿಲ್ಲ ಪ್ರವಾಹ ಪರಿಹಾರ… ರೈತ ಆತ್ಮಹತ್ಯೆ..!

ನೆರೆಪರಿಹಾರ ಸಿಗದ ಹಿನ್ನೆಲೆಯಲ್ಲಿ ಸಂತ್ರಸ್ತ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ತಾಲೂಕಿನ ಎಸ್.ಕೆ.ಮೇಗಲ್‍ನಲ್ಲಿ ಈ ಘಟನೆ ನಡೆದಿದೆ. 55 ವರ್ಷದ ಚಂದ್ರೇಗೌಡ ಆತ್ಮಹತ್ಯೆ ಮಾಡಿಕೊಂಡ ರೈತ. ಒಂದು ಎಕರೆ ಗದ್ದೆ ಮತ್ತು ತೋಟ ಹೊಂದಿದ್ದ ಇವರು ಸಾಲ ಮಾಡಿ ಬೆಳೆ ಬೆಳೆದಿದ್ದರು. ಆದ್ರೆ ಈ ಬಾರಿ ಪ್ರವಾಹಕ್ಕೆ ಗದ್ದೆ, ತೋಟ ಎಲ್ಲವೂ ಕೊಚ್ಚಿ ಹೋಗಿವೆ. ಇದರಿಂದ ಕಂಗಾಲಾಗಿದ್ದ ರೈತ ಚಂದ್ರೇಗೌಡ ಸರ್ಕಾರದಿಂದ ಪರಿಹಾರ ಸಿಗುತ್ತೆ ಎಂದು ಕಾದಿದ್ದರು. ಆದ್ರೆ ಇಷ್ಟು ಸಮಯವಾದರೂ ಸರ್ಕಾರದಿಂದ ಯಾವುದೇ ಪರಿಹಾರ ಸಿಗದಿರೋದನ್ನು ನೋಡಿ ನೊಂದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುದುರೆಮುಖ ಠಾಣಾ ವ್ಯಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Contact Us for Advertisement

Leave a Reply