masthmagaa.com:
ಪ್ರಸಿದ್ಧ ಹಿಂದೂ ಸಮಾಜ ಸೇವಕ ಮತ್ತು ಖ್ಯಾತ ವಾಸ್ತುಶಿಲ್ಪಿ ಶ್ರೀ ಗಂಗಾರಾಮ್ ಅವರ ಸಮಾಧಿ ಸ್ಥಳಕ್ಕೆ ಸಾರ್ವಜನಿಕರು ಪ್ರವೇಶಿಸಲು ಪಾಕ್ ಸರ್ಕಾರ ಅನುಮತಿ ನೀಡ್ತಾ ಇದೆ. ಲಾಹೋರ್ನಲ್ಲಿರೋ ಈ ಸಮಾಧಿ ಸ್ಥಳವನ್ನು 10 ವರ್ಷಗಳ ಹಿಂದೆ ದುಷ್ಕರ್ಮಿಗಳು ವಶಕ್ಕೆ ಪಡೆದಿದ್ದರು. ಇದಾದ ಬಳಿಕ ಇಲ್ಲಿಗೆ ಸಾರ್ವಜನಿಕರ ಎಂಟ್ರಿ ಬಂದ್ ಆಗಿತ್ತು. ಇದೀಗ ಸಮಾಧಿ ಸ್ಥಳವನ್ನು ಪುನಃ ವಶಕ್ಕೆ ಪಡೆದಿರೋ ಲಾಹೋರ್ ಆಡಳಿತ, ಈಗಾಗಲೇ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರೋ ಅಧಿಕಾರಿಗಳು, ತಿಂಗಳಾಂತ್ಯದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತೇವೆ. ಸಮಾಧಿ ಸ್ಥಳದಲ್ಲಿ ಗಂಗಾರಾಮ್ ಅವರ ಸೇವೆಯನ್ನು ಸ್ಮರಿಸೋ ಆರ್ಟ್ ಗ್ಯಾಲರಿಯನ್ನು ಕೂಡ ನಿರ್ಮಿಸಲಾಗುತ್ತೆ ಅಂತ ತಿಳಿಸಿದ್ದಾರೆ. ಅಂದಹಾಗೆ ಈ ಗಂಗಾರಾಮ್ 1851ರಲ್ಲಿ ಲಾಹೋರ್ನಿಂದ 65 ಕಿಲೋಮೀಟರ್ ದೂರದಲ್ಲಿರೋ ಮಂಗತ್ವಾಲಾದಲ್ಲಿ ಜನಿಸಿದ್ರು. ವಾಸ್ತುಶಿಲ್ಪಿ ಮತ್ತು ಸಿವಿಲ್ ಎಂಜಿನಿಯರ್ ಆಗಿದ್ದ ಇವರು, ಲಾಹೋರ್ ನಗರ ರಚನೆಯಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸಿದ್ರು. ಇವತ್ತಿಗೂ ಲಾಹೋರ್ನಲ್ಲಿರೋ ಹೈಕೋರ್ಟ್, ಹಲವು ಕಾಲೇಜುಗಳು, ಲಾಹೋರ್ ಮ್ಯೂಸಿಯಂ ಸೇರಿದಂತೆ ಹಲವು ಕಟ್ಟಡಗಳನ್ನು ಡಿಸೈನ್ ಮಾಡಿದ್ರು. ಅಲ್ಲದೆ ಲಾಹೋರ್ ಆಸ್ಪತ್ರೆ ಕಟ್ಟಲು ಭೂಮಿಯನ್ನು ದಾನ ನೀಡಿದ್ರು. 76 ವರ್ಷದ ಇವರು 1927ರಲ್ಲಿ ಸಾವನ್ನಪ್ಪಿದ್ರು.
-masthmagaa.com
Contact Us for Advertisement