masthmagaa.com:
ಬಲ್ಗೇರಿಯಾದ ಕುರುಡು ಮಹಿಳೆ, ಭವಿಷ್ಯಗಾರ್ತಿ ಬಾಬಾ ವಂಗಾ ಭಾರತದ ಕುರಿತು ಭವಿಷ್ಯ ಹೇಳಿದ್ದಾರೆ. ಈ ವರ್ಷ ಪ್ರಪಂಚದಲ್ಲಿ ಹವಾಮಾನ ಬದಲಾವಣೆಯಿಂದ ತಾಪಮಾನ ಭಾರೀ ಏರಿಕೆಯಾಗಲಿದೆ. ಇದರಿಂದಾಗಿ ಮಿಡತೆಗಳ ಕಾಟ ಏಕಾಏಕಿ ಹೆಚ್ಚಾಗುತ್ತದೆ. ಹಸಿರು ಮತ್ತು ಆಹಾರಕ್ಕಾಗಿ ಮಿಡತೆಗಳ ಹಿಂಡು ಭಾರತದ ಮೇಲೆ ದಾಳಿ ಮಾಡುತ್ತವೆ. ಇವುಗಳು ಬೆಳೆಗಳ ಮೇಲೆ ಗಂಭೀರ ಪರಿಣಾಮ ಉಂಟುಮಾಡಿ, ದೇಶದಲ್ಲಿ ಕ್ಷಾಮದ ಪರಿಸ್ಥಿತಿ ನಿರ್ಮಾಣ ಮಾಡ್ತದೆ ಅಂತ ಹೇಳಿದ್ದಾರೆ. ಅಂದ್ಹಾಗೆ ಬಾಬಾ ವಂಗಾ ತಮ್ಮ 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡಿದ್ರು. ಇದಾದ ಬಳಿಕ ಅವರಿಗೆ ದೇವರು ಭವಿಷ್ಯ ಗ್ರಹಿಸುವ ಶಕ್ತಿ ನೀಡಿದ್ದಾರೆಂದು ಹೇಳಲಾಗುತ್ತಿದೆ. ಅವರು ಪ್ರಪಂಚದ ಬಗ್ಗೆ ಅನೇಕ ಭವಿಷ್ಯಗಳನ್ನು ನುಡಿದಿದ್ದು, ಅವುಗಳಲ್ಲಿ ಕೆಲವು ನಿಜ ಆಗಿವೆ ಅಂತ ಭಾವಿಸಲಾಗಿದೆ. ಈಗ ಭಾರತದ ಬಗ್ಗೆ ಕೂಡ ಭವಿಷ್ಯ ಹೇಳಿರೋದ್ರಿಂದ ಎಲ್ಲರ ಚಿತ್ತ ಈಗ ಆ ಕಡೆ ನೆಟ್ಟಿದೆ.
-masthmagaa.com
Contact Us for Advertisement