ಗುರುಗ್ರಾಮದಲ್ಲಿ ಮತ್ತೆ ನಮಾಜ್ ಗಲಾಟೆ! ಯಾಕೆ ಗೊತ್ತಾ?

masthmagaa.com:

ಹರಿಯಾಣದ ಗುರುಗ್ರಾಮದ ಸೆಕ್ಟರ್ 37ನಲ್ಲಿ ನಿಗದಿಪಡಿಸಿದ ಸ್ಥಳವೊಂದ್ರಲ್ಲಿ ಮುಸ್ಲಿಮರು ನಮಾಜ್ ಮಾಡುವಾಗ ಅಡ್ಡಿಪಡಿಸಲಾಗಿದೆ. 26/11ರ ಮುಂಬೈ ದಾಳಿಯ ಸ್ಮರಣಾರ್ಥವಾಗಿ ಈ ಪ್ರಾರ್ಥನೆ ಮಾಡ್ತಿದ್ದಾರೆ ಅಂತ ಸುದ್ದಿಗಳು ಹರಿದಾಡಿದ್ದರಿಂದ ಅಲ್ಲಿಗೆ ಬಂದ ಕೆಲವರು ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಪ್ರಾರ್ಥನೆಗೆ ಬಂದಿದ್ದವರಲ್ಲಿ ಹಲವರು ಹಾಗೇ ವಾಪಸ್ ಹೋಗಲು ನಿರ್ಧರಿಸಿದ್ರು. ಆದ್ರೆ 25 ಮಂದಿ ಪ್ರಾರ್ಥನೆ ಮಾಡಲು ನಿರ್ಧರಿಸಿದ್ರು. ಈ ವೇಳೆ ಸ್ಥಳದಲ್ಲಿ ನೂರೈವತ್ತು ಪೊಲೀಸರಿದ್ದರು ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply