masthmagaa.com:
ಅಯೋಧ್ಯೆಯಲ್ಲಿ ನಿರ್ಮಾಣ ಆಗ್ತಿರೊ ರಾಮ ಮಂದಿರಕ್ಕೆ ನೇಪಾಳದಲ್ಲಿ ಲಭ್ಯವಿರೊ ಪ್ರಾಚೀನ ಹಿಮಾಲಯದ ಕಲ್ಲುಗಳನ್ನ ಬಳಸ್ಬೇಕು ಅಂತ ನೇಪಾಳದ ಕೆಲವು ಹಿರಿಯ ನಾಗರಿಕರ ತಂಡವೊಂದು ಸಲಹೆ ನೀಡಿದೆ. ಈ ಗುಂಪಿನ ಮುಖ್ಯಸ್ಥ ಹಾಗೂ ನೇಪಾಳದ ಮಾಜಿ ಉಪ ಪ್ರಧಾನಿ ಬಿಮಲೇಂದ್ರ ನಿಧಿ, ರಾಮನ ಮೂರ್ತಿಗೆ ಈ ಹಿಮಾಲಯ ಕಲ್ಲುಗಳನ್ನ ಬಳಸ್ಬೇಕು ಅಂತ ಹೇಳಿದ್ದಾರೆ. ಅತ್ತ ನೇಪಾಳದ ಜನಕ್ಪುರದ ಜನರು ಮೆಟಲ್ನಿಂದ ಮಾಡಿದ ಶಿವ ಧನಸ್ಸನ್ನ ರಾಮ ಮಂದಿರದಲ್ಲಿ ಪ್ರದರ್ಶನ ಮಾಡೋಕೆ ಕೊಡುಗೆಯಾಗಿ ನೀಡ್ತೀವಿ ಅಂತ ಹೇಳಿದ್ದಾರೆ.
-masthmagaa.com
Contact Us for Advertisement