ರಾಜ್ಯದಲ್ಲಿ ಅನ್ನ ರಾಜಕೀಯ! ಸಿಎಂ, ಮಾಜಿ ಸಿಎಂ ಕುಸ್ತಿ!

masthmagaa.com:

ಬಿಜೆಪಿಯವರು 7 ಕೆಜಿ ರೇಷನ್ ಅಕ್ಕಿಯನ್ನ 5 ಕೆಜಿಗೆ ಇಳಿಸಿದ್ದಾರೆ ಅಂತ ಹೇಳಿದ್ದ ಸಿದ್ದರಾಮಯ್ಯಗೆ ಇವತ್ತು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ಸಿದ್ದರಾಮಯ್ಯನವರು ತಾವು ಅಧಿಕಾರಕ್ಕೆ ಬಂದ ಮೇಲೆಯೇ ರೇಷನ್ ಕೊಡ್ತಿದ್ದಾರೆ ಅನ್ನೋ ರೀತಿ ಮಾತಾಡ್ತಿದ್ದಾರೆ. ರೇಷನ್ ಕೊಡೋ ವ್ಯವಸ್ಥೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಇದೆ. ರಾಜ್ಯ ಸರ್ಕಾರ ಕೊಡ್ತಿರೋ ಅಕ್ಕಿಯನ್ನ ಕೇಂದ್ರ ಸರ್ಕಾರ ಪ್ರತಿ ಕೆಜಿಗೆ 32 ರೂಪಾಯಿ ದರದಲ್ಲಿ ಖರೀದಿಸುತ್ತೆ. ಇದರಲ್ಲಿ 29 ರೂಪಾಯಿಯನ್ನ ಕೇಂದ್ರ ಸರ್ಕಾರ ಭರಿಸುತ್ತೆ. ಉಳಿದ ಮೂರು ರೂಪಾಯಿಯನ್ನ ಕಾಂಗ್ರೆಸ್ ಸರ್ಕಾರ ಇದ್ದಾಗ ಅವರು ಕೊಟ್ಟಿದ್ರು, ಈಗ ನಮ್ಮ ಸರ್ಕಾರ ಕೊಡ್ತಿದೆ. 3 ರೂಪಾಯಿ ದೊಡ್ಡದಾ, 29 ರೂಪಾಯಿ ದೊಡ್ಡದಾ? 29 ರೂಪಾಯಿ ಕೊಟ್ಟೋರನ್ನ ಬಿಟ್ಟು, ಮೂರು ರೂಪಾಯಿ ಕೊಟ್ಟ ತಮ್ಮ ಫೋಟೋ ಹಾಕಿಸಿ ಅನ್ನಭಾಗ್ಯ ಮಾಡಿದ್ರು ಅಂತ ಸಿಎಂ ಬೊಮ್ಮಾಯಿ ಹೇಳಿದ್ರು.

-masthmagaa.com

Contact Us for Advertisement

Leave a Reply