masthmagaa.com:
ಇದು 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಹುಟ್ಟಿಕೊಂಡ ಕ್ಷೇತ್ರ.. ಇದು ರಾಯಚೂರಿನಲ್ಲಿದೆ. 3 ಸಲ ಚುನಾವಣೆ ನಡೆದಿದ್ದು, ಮೂರೂ ಬಾರಿ ಪ್ರತಾಪ್ ಗೌಡ ಪಾಟೀಲ್ ಗೆಲುವು ದಾಖಲಿಸಿದ್ರು. 2008ರಲ್ಲಿ ಬಿಜೆಪಿಯಲ್ಲಿ ಗೆದ್ದಿದ್ದ ಪ್ರತಾಪ್ ಗೌಡ, 2013ರಲ್ಲಿ ಕಾಂಗ್ರೆಸ್ಗೆ ಬಂದಿದ್ರು. 2018ರಲ್ಲಿ ಮತ್ತೆ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಇವರು, 213 ಮತಗಳ ಅಂತರದಲ್ಲಿ ಗೆದ್ದಿದ್ರು. ನಂತ್ರ ಮತ್ತೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ರು. ಉಪಚುನಾವಣೆಯಲ್ಲೂ ಬಿಜೆಪಿಯಿಂದ ಕಣಕ್ಕಿಳಿದಿದ್ರು. ಅದೇ 2018ರ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದಲ್ಲಿ ಸೋತಿದ್ದ ಬಿಜೆಪಿಯ ಬಸವನಗೌಡ ತುರ್ವಿಹಾಳ್ಗೆ ಬೇಜಾರಾಯ್ತು. ಹೀಗಾಗಿ ಅವರು ಕಾಂಗ್ರೆಸ್ಗೆ ಹೋಗಿ, ಕಣಕ್ಕಿಳಿದ್ರು. ಇಲ್ಲಿ ನಾಯಕ ಮತ್ತು ಲಿಂಗಾಯತ ಸಮುದಾಯದ ಮತಗಳು ಪ್ರಮುಖವಾಗಿದ್ದು, ಸಿಎಂ ಯಡಿಯೂಪರಪ್ಪ ಪುತ್ರ ವಿಜಯೇಂದ್ರ ಮತ್ತು ರಾಮುಲುರನ್ನು ಪ್ರಚಾರ ಕಣಕ್ಕೆ ಇಳಿಸಿತ್ತು ಬಿಜೆಪಿ.. ಆದ್ರೂ ಕೂಡ ಪ್ರತಾಪ್ ಗೌಡರ ಪಕ್ಷಾಂತರ ಜನರಿಗೆ ಇಷ್ಟವಾಗಿಲ್ಲ ಅನ್ಸುತ್ತೆ.. ಹೀಗಾಗಿ ಈ ಸಲ ಕಾಂಗ್ರೆಸ್ನ ಬಸವನಗೌಡಗೆ ಮಣೆ ಹಾಕಿದ್ದಾರೆ.
-masthmagaa.com
Contact Us for Advertisement