masthmagaa.com:
ಜಾತಿ ಕಾರಣಕ್ಕಾಗಿ ಶಿಕ್ಷಕನಿಂದ ಥಳಿತಕ್ಕೊಳಗಾಗಿದ್ದ 9 ವರ್ಷದ ಬಾಲಕ ರಾಜಸ್ಥಾನದಲ್ಲಿ ಸಾವನ್ನಪ್ಪಿದ್ದ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆ ಕ್ಷೇತ್ರದ ಕಾಂಗ್ರೆಸ್ ಶಾಸಕರೊಬ್ಬರು ಸ್ವಯಂ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕ ಪಾನ್ ಚಂದ್ ಮೇಘವಾಲ್ ದಲಿತ ವಿದ್ಯಾರ್ಥಿ ಮೇಲೆ ನಡೆದ ಈ ದೌರ್ಜನ್ಯದಿಂದ ಮನನೊಂದು ಈ ರಾಜೀನಾಮೆ ನೀಡಿರೋದಾಗಿ ಹೇಳಿಕೊಂಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನ ಸಿಎಂ ಅಶೋಕ್ ಗೆಹ್ಲೋಟ್ಗೆ ನೀಡಿದ್ದಾರೆ. ಪತ್ರದಲ್ಲಿ ಸ್ವಾತಂತ್ರ ಬಂದು ಇಷ್ಟು ವರ್ಷ ಆಗಿದೆ. ಹಾಗಿದ್ರೂ ಈ ರೀತಿ ಆಗ್ತಿರೋದು ತುಂಬಾ ಬೇಸರ ಉಂಟು ಮಾಡಿದೆ. ಅದನ್ನ ಪದಗಳಲ್ಲಿ ಹೇಳೋಕೆ ಆಗ್ತಿಲ್ಲ. ನಮ್ಮ ಸಮಾಜದ ಹಕ್ಕುಗಳನ್ನ ನಾವು ರಕ್ಷಿಸೋಕೆ ವಿಫಲರಾದ ಮೇಲೂ ನಾವು ಅಧಿಕಾರದಲ್ಲಿ ಮುಂದುವರೆಯೋದ್ರಲ್ಲಿ ಅರ್ಥ ಇಲ್ಲ. ನನ್ನ ಆತ್ಮ ಸಾಕ್ಷಿಯಂತೆ ನಾನು ರಾಜೀನಾಮೆ ನೀಡಿದ್ದೀನಿ ಅಂತ ಹೇಳಿದ್ದಾರೆ.
-masthmagaa.com
Contact Us for Advertisement