masthmagaa.com:
ಶ್ರೀಲಂಕಾದಲ್ಲಿನ ತಮಿಳರಿಗೂ ಅಧಿಕಾರ ನೀಡೋ ಅಲ್ಲಿನ ಸಂವಿಧಾನ ತಿದ್ದುಪಡಿಯನ್ನ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಲಾಗುತ್ತೆ ಅನ್ನೋ ವಿಶ್ವಾಸವನ್ನ ಭಾರತ ಹೊಂದಿದೆ. ಇದ್ರಿಂದ ಅಲ್ಲಿನ ಅಲ್ಪಸಂಖ್ಯಾತ ತಮಿಳು ಜನರ ಜೊತೆಗಿನ ಸಾಮರಸ್ಯ ಗಟ್ಟಿಯಾಗುತ್ತೆ ಅಂತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಎರಡು ದಿನಗಳ ಶ್ರೀಲಂಕಾ ಪ್ರವಾಸದಲ್ಲಿರೋ ಜೈಶಂಕರ್ ಅಲ್ಲಿನ ಅಧ್ಯಕ್ಷ ರಾನಿಲ್ ವಿಕ್ರಮ್ಸಿಂಘೆ ಹಾಗೂ ವಿದೇಶಾಂಗ ಸಚಿವ ಅಲಿ ಸಿಬ್ರಿ ಅವ್ರೊಂದಿಗಿನ ಮಾತುಕತೆ ಬಳಿಕ ಈ ರೀತಿ ಹೇಳಿದ್ದಾರೆ. ಜೊತೆಗೆ ಶ್ರೀಲಂಕಾ ಆರ್ಥಿಕ ಸಂಕಷ್ಟದಿಂದ ಹೊರ ಬರೋಕೆ ಹಣಕಾಸು ನೆರವು ನೀಡೋ ಸಂಸ್ಥೆಗಳು ಆದಷ್ಟು ಬೇಗ ನೆರವಿನ ಹಸ್ತ ಚಾಚಬೇಕು ಅಂತ ಭಾರತ ಒತ್ತಾಯಿಸುತ್ತೆ ಅಂತ ಜೈಶಂಕರ್ ಹೇಳಿದ್ದಾರೆ.
-masthmagaa.com
Contact Us for Advertisement