masthmagaa.com:
ಯುದ್ಧಭೂಮಿ ಯುಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವ ಆಪರೇಷನ್ ಗಂಗಾ ಮಿಷನ್ ವೇಗ ಪಡೆದುಕೊಂಡಿದೆ. ಇಂದು ನಸುಕಿನ ಜಾವ ರೊಮೇನಿಯಾದಿಂದಲೂ 250 ಮಂದಿಯನ್ನು ಹೊತ್ತ ವಿಮಾನ ಭಾರತಕ್ಕೆ ಬಂದಿದೆ. ಇದಾದ ಸ್ವಲ್ಪ ಹೊತ್ತಲ್ಲೇ 240 ಮಂದಿ ಪ್ರಯಾಣಿಕರಿದ್ದ ಮತ್ತೊಂದು ಏರ್ ಇಂಡಿಯಾ ವಿಮಾನ ಹಂಗರಿಯ ರಾಜಧಾನಿ ಬುಡಾಪೆಸ್ಟ್ನಿಂದ ದೆಹಲಿಗೆ ಬಂದಿಳಿದಿದೆ. ನಿನ್ನೆ ಕೂಡ 219 ಮಂದಿ ಏರ್ ಇಂಡಿಯಾ ವಿಮಾನದಲ್ಲಿ ರೊಮೇನಿಯಾದಿಂದ ಮುಂಬೈಗೆ ಬಂದಿದ್ರು. ಇನ್ನು ಒಟ್ಟಾರೆಯಾಗಿ ಭಾರತಕ್ಕೆ ಬಂದ ವಿದ್ಯಾರ್ಥಿಗಳ ಪೈಕಿ 30 ಮಂದಿ ಕನ್ನಡಿಗರೂ ಸೇರಿದ್ದಾರೆ.
ಇನ್ನು ಕೂಡ ಸಾವಿರಾರು ಭಾರತೀಯ ನಾಗರಿಕರು, ವಿದ್ಯಾರ್ಥಿಗಳು ಯುಕ್ರೇನ್ನಲ್ಲಿದ್ದಾರೆ. ಬಂಕರ್ಗಳಲ್ಲಿ, ಕಟ್ಟಡಗಳ ಬೇಸ್ಮೆಂಟ್ಗಳಲ್ಲಿ ಆಶ್ರಯ ಪಡೆದಿದ್ದಾರೆ. ಹಲವರು ಆಹಾರದ ಸಮಸ್ಯೆ ಎದುರಿಸುತ್ತಿದ್ದು, ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಈ ನಡುವೆ ಪ್ರತಿಕ್ರಿಯಿಸಿರೋ ಯುಕ್ರೇನ್ನಲ್ಲಿರೋ ಭಾರತದ ರಾಯಭಾರಿ ಕಚೇರಿ, ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸ್ತಿದ್ದೀವಿ. ಅದ್ರಲ್ಲೂ ಪೂರ್ವ ಯುಕ್ರೇನ್ ಪರಿಸ್ಥಿತಿ ಮತ್ತು ಅಲ್ಲಿರೋ ಭಾರತೀಯರ ನಾಗರಿಕರ ರಕ್ಷಣೆಗಾಗಿ ಸ್ಥಳೀಯ ಆಡಳಿತದೊಂದಿಗೆ ಟಚ್ನಲ್ಲಿದ್ದೀವಿ.. ಇನ್ನು ಯಾರೆಲ್ಲಾ ಯುಕ್ರೇನ್ನಲ್ಲಿದ್ಧಾರೋ.. ಅವರ ಜೊತೆಗೆ ನಾವಿದ್ದೀವಿ.. ಹೆದರೋ ಅಗತ್ಯವಿಲ್ಲ ಅಂತ ಕೂಡ ತಿಳಿಸಿದೆ. ಜೊತೆಗೆ ಈಗಾಗಲೇ ರೊಮೇನಿಯಾ ಮತ್ತು ಹಂಗೇರಿಗೆ ಸ್ಥಳಾಂತರಿಸೋ ಪ್ರಕ್ರಿಯೆ ನಡೀತಾ ಇದೆ. ಅದೇ ರೀತಿ ಅಕ್ಕಪಕ್ಕದ ಉಳಿದ ದೇಶಗಳ ಜೊತೆಗೂ ಮಾತುಕತೆ ನಡೆಸಲಾಗ್ತಿದೆ ಅಂತ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.
-masthmagaa.com
Contact Us for Advertisement