masthmagaa.com:
ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾವನ್ನ ಬಿಸಿಸಿಐ ಅನೌನ್ಸ್ ಮಾಡಿದೆ. 18 ಆಟಗಾರರ ಈ ತಂಡದಲ್ಲಿ ಸೂರ್ಯಕುಮಾರ್ ಯಾದವ್, ಕರ್ನಾಟಕದ ವೇಗಿ ಪ್ರಸಿಧ್ ಕೃಷ್ಣಾ ಮತ್ತು ಆಲ್ರೌಂಡರ್ ಕೃನಾಲ್ ಪಾಂಡ್ಯಗೆ ಇದೇ ಮೊದಲ ಬಾರಿ ಸ್ಥಾನ ನೀಡಲಾಗಿದೆ. ಅಂದ್ರೆ ಪ್ಲೇಯಿಂಗ್ ಇಲೆವೆನ್ನಲ್ಲಿ ಇವರು ಸ್ಥಾನ ಪಡೆದ್ರೆ ಒಂಡೇ ಕ್ರಿಕೆಟ್ಗೆ ಪದಾರ್ಪಣೆ ಮಾಡಿದಂತಾಗುತ್ತೆ. ಉಳಿದಂತೆ ನಾಲ್ವರು ಸ್ಪಿನ್ನರ್ ಮತ್ತು ಐವರು ವೇಗಿಗಳು ಆಯ್ಕೆಯಾಗಿದ್ದಾರೆ. ಮಾರ್ಚ್ 23, 26 ಮತ್ತು 28ರಂದು ಪುಣೆಯಲ್ಲಿ ಪಂದ್ಯಗಳು ನಡೆಯಲಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ರೆ, ಭಾರತ ಎರಡನೇ ಸ್ಥಾನದಲ್ಲಿದೆ.
18 ಆಟಗಾರರ ಭಾರತ ತಂಡ:
ವಿರಾಟ್ ಕೊಹ್ಲಿ (ನಾಯಕ)
ರೋಹಿತ್ ಶರ್ಮಾ (ಉಪನಾಯಕ)
ಶಿಖರ್ ಧವನ್
ಶುಬ್ಮನ್ ಗಿಲ್
ಶ್ರೇಯಸ್ ಐಯ್ಯರ್
ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ
ರಿಷಬ್ ಪಂತ್ (ವಿಕೆಟ್ ಕೀಪರ್)
ಕೆ.ಎಲ್. ರಾಹುಲ್ (ವಿಕೆಟ್ ಕೀಪರ್)
ಯಜುವೇಂದ್ರ ಚಹಲ್
ಕುಲ್ದೀಪ್ ಯಾದವ್
ಕೃನಾಲ್ ಪಾಂಡ್ಯ
ವಾಷಿಂಗ್ಟನ್ ಸುಂದರ್
ಟಿ. ನಟರಾಜನ್
ಭುವನೇಶ್ವರ್ ಕುಮಾರ್
ಮೊಹಮ್ಮದ್ ಸಿರಾಜ್
ಪ್ರಸಿಧ್ ಕೃಷ್ಣ
ಶಾರ್ದೂಲ್ ಠಾಕೂರ್
-masthmagaa.com
Contact Us for Advertisement