ಮೈಸೂರು-ಬೆಂಗಳೂರು ಹೆದ್ದಾರಿ ನಿರ್ಮಾಣದಲ್ಲಿ ನಮ್ಮದೂ ಕೊಡುಗೆ ಇದೆ ಎಂದ JDS!

masthmagaa.com:

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಕ್ರೆಡಿಟ್‌ ವಾರ್‌ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಬಳಿಕ ಈಗ ಜೆಡಿಎಸ್‌ ಕೂಡ ಎಂಟ್ರಿಯಾಗಿದೆ. ಹೆದ್ದಾರಿ ನಿರ್ಮಿಸುವಲ್ಲಿ ಜೆಡಿಎಸ್‌ ಪಾತ್ರವೂ ಇದೆ ಅಂತ ಜೆಡಿಎಸ್‌ ಶಾಸಕ ಪುಟ್ಟರಾಜು ಹೇಳಿದ್ದಾರೆ. ನಾನು ಸಂಸದನಾಗಿದ್ದಾಗ ಈ ಯೋಜನೆಗೆ ದೆಹಲಿಯಲ್ಲಿ ಎಷ್ಟು ಹೋರಾಟ ಮಾಡಿದ್ದೀನಿ ಅಂತ ಪ್ರತಾಪ ಸಿಂಹ ಬೇಕಿದ್ರೆ ಹೋಗಿ ಯಡಿಯೂರಪ್ಪ ಅವರನ್ನ ಕೇಳಲಿ. ಮೈತ್ರಿ ಸರ್ಕಾರ ಇದ್ದಾಗ ಕುಮಾರಸ್ವಾಮಿ, ರೇವಣ್ಣ ನಿಂತುಕೊಂಡು ಓಡಾಡಿ, ಯೋಜನೆಯ ಅಲೈನ್‌ಮೆಂಟ್ ಮಾಡಿ ಅನುಮೋದನೆ ನೀಡದಿದ್ದರೆ ಹೆದ್ದಾರಿ ಹೇಗೆ ಆಗುತ್ತಿತ್ತು? ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ ಸಹಕಾರ ಕೊಡಲೇಬೇಕಿತ್ತು.ಹೀಗಾಗಿ ಇದು ಕೇವಲ ಬಿಜೆಪಿಯಿಂದ ಮಾತ್ರ ಆಗಿಲ್ಲ ಅಂತ ಪುಟ್ಟರಾಜು ವಾಗ್ದಾಳಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply