ಲೋಕಾಯುಕ್ತದಿಂದ ಬಿಜೆಪಿ ಶಾಸಕ ಅರೆಸ್ಟ್! ಭ್ರಷ್ಟಾಚಾರ ಕೇಸಲ್ಲಿ ಜೈಲು ಪಾಲಾಗ್ತಾರಾ ಮಾಡಾಳ್‌ ?

masthmagaa.com:

ಭ್ರಷ್ಟಾಚಾರ, ಹಾಗೂ ಅಕ್ರಮ ಹಣ ಪತ್ತೆ ಕೇಸಲ್ಲಿ ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪರನ್ನ ಲೋಕಾಯುಕ್ತ ಅರೆಸ್ಟ್‌ ಮಾಡಿದೆ. ಮಗನ ಹತ್ರ ಕೋಟಿ ಕೋಟಿ ಹಣ ಸಿಕ್ಕಿದ್ದ ಕೇಸಲ್ಲಿ ಎ1 ಆರೋಪಿಯಾಗಿದ್ದ ಮಾಡಾಳ್‌ಗೆ ಇತ್ತೀಚಿಗಷ್ಟೇ ಹೈ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಇದನ್ನ ಪ್ರಶ್ನಿಸಿ ಲೋಕಾಯುಕ್ತ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇಂದು ಸುಪ್ರೀಂ ಕೋರ್ಟ್‌ ಕೂಡ ಇದಕ್ಕೆ ಪ್ರತಿಕ್ರಿಯೆ ಕೊಡಿ ಅಂತ ಮಾಡಾಳ್‌ಗೆ ನೋಟಿಸ್‌ ಕೊಟ್ಟಿತ್ತು. ಈ ಬೆಳವಣಿಗೆಯ ಮಧ್ಯೆದಲ್ಲೇ ಮಾಡಾಳ್‌ ಅವರ ಜಾಮೀನು ಅರ್ಜಿಯನ್ನ ಹೈ ಕೋರ್ಟ್‌ ಕೂಡ ವಜಾ ಮಾಡಿತ್ತು. ಕೂಡಲೇ ಮಾಡಾಳ್‌ ಹಿಂದೆ ಬಿದ್ದಿದ್ದ ಲೋಕಾಯುಕ್ತ ಸೇನೆ ಕೊನೆಗೂ ಅವರನ್ನ ಖೆಡ್ಡಾಗೆ ಕೆಡವಿದೆ. ಜಾಮೀನು ಅರ್ಜಿ ವಜಾ ಆಗಿದೆ ಅಂತ ಗೊತ್ತಾದ್ಮೇಲೆ ಮಾಡಾಳ್‌ ನಾಪತ್ತೆಯಾಗಿದ್ದಾರೆ ಅಂತ ಕೂಡ ಸುದ್ದಿ ಬರ್ತಾಯಿತ್ತು. ಇಷ್ಟಾದ್ರೂ ಲೋಕಾಯುಕ್ತ ಬೀಸಿದ ಬಲೆಗೆ ಮಾಡಾಳ್‌ ಮಗುಚಿ ಬಿದ್ದಿದ್ದಾರೆ.

-masthmagaa.com

Contact Us for Advertisement

Leave a Reply