ನೂತನ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಮಾಹಿತಿ

masthmagaa.com:

ರಾಜ್ಯ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾದ 7 ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಅಲ್ಲದೆ ಒಂದಕ್ಕಿಂತ ಹೆಚ್ಚು ಖಾತೆಗಳನ್ನ ಹೊಂದಿದ್ದ ಕೆಲ ಸಚಿವರ ಖಾತೆಗಳನ್ನ ಬದಲಾವಣೆ ಮಾಡಲಾಗಿದೆ. ಹಾಗಿದ್ರೆ ಯಾವ್ಯಾವ ಸಚಿವರಿಗೆ, ಯಾವ್ಯಾವ ಖಾತೆ ಹಂಚಿಕೆಯಾಗಿದೆ ಅನ್ನೋದನ್ನ ನೋಡೋದಾದ್ರೆ.

ಉಮೇಶ್ ಕತ್ತಿ: ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರ ಇಲಾಖೆ

ಮುರುಗೇಶ್ ನಿರಾಣಿ: ಗಣಿ ಮತ್ತು ಭೂವಿಜ್ಞಾನ

ಎಂ.ಟಿ.ಬಿ. ನಾಗರಾಜ್: ಅಬಕಾರಿ ಇಲಾಖೆ

ಸಿ.ಪಿ. ಯೋಗೇಶ್ವರ್: ಸಣ್ಣ ನೀರಾವರಿ

ಅರವಿಂದ ಲಿಂಬಾವಳಿ: ಅರಣ್ಯ ಇಲಾಖೆ

ಎಸ್​. ಅಂಗಾರ: 1. ಮೀನುಗಾರಿಕೆ, 2. ಬಂದರು ಮತ್ತು ಒಳನಾಡು ಜಲಸಾರಿಗೆ

ಆರ್. ಶಂಕರ್: ಪೌರಾಡಳಿತ ಮತ್ತು ರೇಷ್ಮೆ ಇಲಾಖೆ

ಸಚಿವ ಮಾಧುಸ್ವಾಮಿ ಬಳಿ ಇದ್ದ ಕಾನೂನು & ಸಂಸದೀಯ ಹಾಗೂ ಸಣ್ಣ ನೀರಾವರಿ ಖಾತೆಯನ್ನ ವಾಪಸ್ ಪಡೆದು ಅವರಿಗೆ ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ & ಸಂಸ್ಕೃತಿ ಖಾತೆಗಳನ್ನ ನೀಡಲಾಗಿದೆ. ಕಾನೂನು ಮತ್ತು ಸಂಸದೀಯ ಖಾತೆಯನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಸಚಿವ ಮಾಧುಸ್ವಾಮಿ ರೀತಿಯಲ್ಲೇ ಹಲವು ಸಚಿವರ ಖಾತೆಯನ್ನ ಬದಲಾವಣೆ ಮಾಡಲಾಗಿದೆ. ಹಣಕಾಸು, ಇಂಧನ, ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳನ್ನ ಸಿಎಂ ಯಡಿಯೂರಪ್ಪ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply