ನಿಲ್ಲದ ಕುಮ್ಮಿ ಕೋಪ.. ಸಿ.ಟಿ ರವಿ, ಕಟೀಲ್‌ಗೆ‌ ಹಳೇ ವಿಚಾರ ಪ್ರಸ್ತಾಪಿಸಿ ವಾರ್ನಿಂಗ್

masthmagaa.com:

ಬಿಜೆಪಿ ಮತ್ತು ಕುಮಾರಸ್ವಾಮಿ ನಡುವೆ ವೈಯಕ್ತಿಕ ಟಾಕ್​ ಫೈಟ್​ ಮುಂದುವರಿದಿದೆ. ಇವತ್ತು ಮತ್ತೆ ಟ್ವೀಟ್​ ಮಾಡಿರೋ ರಾಜ್ಯ ಬಿಜೆಪಿ, ‘ಮಾನ್ಯ ಕುಮಾರಸ್ವಾಮಿಯವರೇ ನೀವು ಈ ಶತಮಾನ ಕಂಡ ರಾಜಕೀಯ ದಾರ್ಶನಿಕರು. ನನ್ನ ಬದುಕು ತೆರೆದ ಪುಸ್ತಕ, ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ ಅಂತ ಹೇಳೋ ನಿಮ್ಮ ಧೈರ್ಯ ಅಭಿನಂದನೀಯ. ಆದ್ರೆ ಕಾನೂನು ಪ್ರಕಾರ ‘ಪಾರದರ್ಶಕ ಕಾಯ್ದೆ’ ಉಲ್ಲಂಘನೆಯೂ ಅಪರಾಧವಲ್ಲವೇ? ತೆರೆದ ಪುಸ್ತಕ, ತೆರೆದ ಬಾವಿಯಷ್ಟೇ ಅಪಾಯವಂತೆ! ಅಂತ ಹೇಳಿದೆ. ಕುಮಾರಸ್ವಾಮಿ ಸುಮ್ನಿರ್ತಾರಾ, ಅವರು ಕೂಡ ತಿರುಗೇಟು ಕೊಟ್ಟಿದ್ದಾರೆ. ‘ನಾನು ಯಾವುದೇ ಕುಟುಂಬವನ್ನ ಹಾಳು ಮಾಡಿಲ್ಲ. ಕೆಪಿಎಸ್​​ಸಿಯಲ್ಲಿ ಆಯ್ಕೆಯಾದ ಅಧಿಕಾರಿಯೊಬ್ಬರ ಪತಿ ಕೆಆರ್​ಎಸ್​ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ್ರು. ಯಾರಿಂದ ಬಿದ್ರು, ಯಾಕೆ ಆತ್ಮಹತ್ಯೆ ಮಾಡಿಕೊಂಡ್ರು, ಇದಕ್ಕೆ ಕಾರಣೀಕರ್ತರು ಯಾರು, ಆ ಫ್ಯಾಮಿಲಿಯನ್ನ ಹಾಳು ಮಾಡಿದ್ದು ಯಾರು ಅಂತ ಸಿಟಿ ರವಿ ಸ್ವಲ್ಪ ಸ್ಮರಿಸಿಕೊಳ್ಳಲಿ. ಇಂಥಾ ಹಲ್ಕಾ ಕೆಲಸ ನಾನು ಮಾಡಿಲ್ಲ. ಆರ್​ಎಸ್​​ಎಸ್​ ಸಂಚಾಲಕರ ಮಕ್ಕಳನ್ನೇ ಕ್ಯಾರಿಯಿಂಗ್ ಮಾಡಿ ಬಾಂಬೆಗೆ ಕದ್ದು ಓಡಿದ್ರಲಾ ಇದರ ಬಗ್ಗೆ ನಳಿನ್​ ಕುಮಾರ್ ಕಟೀಲ್​ ಏನಾದ್ರೂ ಹೇಳ್ತಾರಾ? ನನ್ನನ್ನ ಕೆದಕಿದ್ರೆ ಒಬ್ಬೊಬ್ಬರದ್ದೇ ಬಂಡವಾಳ ಹೊರಬರುತ್ತೆ, ಹುಷಾರಾಗಿರಿ. ಆರ್​ಎಸ್​ಎಸ್​​ನಲ್ಲಿ ಚಡ್ಡಿ ಹಾಕ್ಕೊಂಡು ಯಾರ್ಯಾರು ಏನ್​ ಮಾಡಿದ್ದೀರಿ, ಎಷ್ಟು ಜನರ ಪ್ರಾಣ ತೆಗೆದಿದ್ದೀರಿ, ಎಲ್ಲವೂ ಹೊರಗೆ ಬರುತ್ತೆ ಅಂತ ವಾರ್ನಿಂಗ್​​ ಕೊಟ್ಟಿದ್ದಾರೆ ಕುಮಾರಸ್ವಾಮಿ.

-masthmagaa.com

Contact Us for Advertisement

Leave a Reply