masthmagaa.com:
ಸಿಎಂ ಬೊಮ್ಮಾಯಿ ಶಕುನಿ ಇದ್ದಂತೆ, ಕೊನೆಗೆ ಪಾಂಡವರೇ ಗೆಲ್ಲೋದು. ರಾಜ್ಯದಲ್ಲಿ ಭ್ರಷ್ಟ ಸರ್ಕಾರವಿದೆ. ಈ ಸರ್ಕಾರ SC/ST., ಅಲ್ಪಸಂಖ್ಯಾತರಿಗೆ ಮೋಸ ಮಾಡಿದೆ ಅಂತ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಟೀಕಿಸಿದ್ದಾರೆ. 90 ದಿನಗಳಲ್ಲಿ 3 ಬಾರಿ ಮೀಸಲಾತಿಯನ್ನ ಬದಲಾವಣೆ ಮಾಡಿದ್ದಾರೆ. ರಾಜ್ಯವನ್ನ ಲೂಟಿ ಮಾಡ್ತಿದಾರೆ. ಅದು 40% ಕಮಿಷನ್ ವಿಚಾರದಲ್ಲಿ ಗೊತ್ತಾಗಿದೆ ಅಂತ ಬೊಮ್ಮಾಯಿ ವಿರುದ್ದ ಆರೋಪ ಮಾಡಿದ್ದಾರೆ. ಸುರ್ಜೇವಾಲ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಬಸವರಾಜ ಬೊಮ್ಮಾಯಿ ಕಾಮನ್ಮ್ಯಾನ್, ಸಿಂಪಲ್ಮ್ಯಾನ್. ಕಾಂಗ್ರೆಸ್ ನಾಯಕರ ಇಂಥ ಅವಹೇಳನಕಾರಿ ಹೇಳಿಕೆ ಅವರ ಪಕ್ಷದ ವರ್ತನೆ ತೋರಿಸುತ್ತೆ. ಎಸ್ಟಿ ಸಮುದಾಯದ ಹಿರಿಯ ನಾಯಕ ಶ್ರೀರಾಮುಲು ಅವ್ರಿಗೆ ಸಿದ್ದರಾಮಯ್ಯ ಪೆದ್ದ ಅಂತ ಹೇಳಿದ್ರು. ಈಗ ಬೊಮ್ಮಾಯಿಗೆ ಅಪಮಾನ ಮಾಡ್ತಿದಾರೆ. ಒಬ್ಬ ಮುಖ್ಯಮಂತ್ರಿಗೆ ನೀಡುವ ಅವಹೇಳನಕಾರಿ ಹೇಳಿಕೆ ಕರ್ನಾಟಕದ ಜನರಿಗೆ ಮಾಡಿದ ಅವಮಾನ. ಹೀಗಾಗಿ ರಾಜ್ಯದ ಜನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಉತ್ತರ ಕೊಡುತ್ತಾರೆ ಎಂದಿದ್ದಾರೆ. ಇತ್ತ ಸುರ್ಜೇವಾಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಜನ ನನಗೆ ಕಾಮನ್ಮ್ಯಾನ್ ಎಂದಿದ್ದಾರೆ. ಜನರು ಹೇಳೋದು ಮುಖ್ಯ. ಯಾರು ಶಕುನಿ,ಯಾರು ರಾವಣ, ಯಾರು ದುರ್ಯೋಧನ ಅಂತ ಜನರಿಗೆ ಚೆನ್ನಾಗಿ ಗೊತ್ತಿದೆ ಅಂತ ತಿರುಗೇಟು ನೀಡಿದ್ದಾರೆ.
-masthmagaa.com
Contact Us for Advertisement