masthmagaa.com:
ಬಾಂಗ್ಲಾದೇಶದಲ್ಲಿ ಇತ್ತಿಚೆಗೆ ನಡೆದ ಹಿಂಸಾಚಾರ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮತ್ತು ಆತನ ಬೆಂಬಲಿಗರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ ಶೈಕತ್ ಮಂಡಲ್ ಅಕ್ಟೋಬರ್ 17ರಂದು ರಂಗ್ಪುರದ ಪೀರ್ಗಂಜ್ನಲ್ಲಿ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಆಗಿದ್ದ. ಹಿಂಸಾಚಾರಕ್ಕೂ ಮುನ್ನ ಈತ ಮಾಡಿದ್ದ ಫೇಸ್ಬುಕ್ ಲೈವ್ನಿಂದ ಜನ ಪ್ರಚೋದನೆಗೆ ಒಳಗಾಗಿದ್ರು ಅಂತ ಗೊತ್ತಾಗಿದೆ. ಪೀರ್ಗಂಜ್ನಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ 70 ಮನೆ ಮತ್ತು ಹಲವಾರು ಅಂಗಡಿ ಮುಂಗಟ್ಟುಗಳನ್ನು ಸುಟ್ಟುಹಾಕಲಾಗಿತ್ತು. ನಿನ್ನೆಯಷ್ಟೇ ಬಾಂಗ್ಲಾ ಪೊಲೀಸರು ಇಕ್ಬಲ್ ಹೊಸ್ಸೇನ್ ಅನ್ನೋ ವ್ಯಕ್ತಿಯನ್ನು ಕಾಕ್ಸ್ಬಜಾರ್ನಿಂದ ಅರೆಸ್ಟ್ ಮಾಡಿದ್ರು. ಈತನೇ ದುರ್ಗಿಯ ಕಾಲ ಬಳಿ ಕುರಾನ್ ಇಟ್ಟು, ವಿಡಿಯೋ ವೈರಲ್ ಮಾಡಿದ್ದು ಅಂತ ಗೊತ್ತಾಗಿದೆ. ಬಾಂಗ್ಲಾದ ಇಡೀ ಹಿಂಸಾಚಾರಕ್ಕೆ ಈ ಘಟನೆಯೇ ಪ್ರಮುಖ ಕಾರಣವಾಗಿತ್ತು. ಬಾಂಗ್ಲಾದೇಶದಲ್ಲಿ ಹಿಂಸಾಚಾರ ಸಂಬಂಧ ಈವರಗೆ ಸುಮಾರು 600 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
-masthmagaa.com
Contact Us for Advertisement