masthmagaa.com:
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್ನಲ್ಲಿ ಇತ್ಯರ್ಥ ಆಗೋವರೆಗೆ ಬೆಳಗಾವಿ ಸೇರಿದಂತೆ ಗಡಿ ಪ್ರದೇಶವನ್ನ ಕೇಂದ್ರಾಡಳಿತ ಪ್ರದೇಶ ಅಂತ ಘೋಷಿಸಬೇಕು ಅಂತ ಆಗ್ರಹಿಸಿದ್ದ ಮಹಾರಾಷ್ಟ್ರ ಸರ್ಕಾರ ಇದೀಗ ಮತ್ತೆ ಗಡಿ ವಿಚಾರವನ್ನ ಕೆದಕಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರೋ ಉದ್ಧವ್ ಠಾಕ್ರೆ ಸರ್ಕಾರ, ‘ಈ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ರಾಜ್ಯವನ್ನ ಬಲವಾಗಿ ಪ್ರತಿನಿಧಿಸುತ್ತಿದೆ. ಮುಂದೆಯೂ ಪ್ರತಿನಿಧಿಸುತ್ತೆ. ವಿವಾದಿತ ಪ್ರದೇಶದಲ್ಲಿ ವಾಸಿಸುತ್ತಿರೋ ಮರಾಠಿ ಭಾಷೆ ಮಾತನಾಡುವ ಜನರಿಗೆ ನ್ಯಾಯ ಕೊಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಅಂತ ಹೇಳಿದೆ.
-masthmagaa.com
Contact Us for Advertisement