masthmagaa.com:
ಒಂದು ಕಾಲದಲ್ಲಿ ಕಾಂಗ್ರೆಸ್ ಕೋಟೆಯಾಗಿದ್ದ ಬೆಳಗಾವಿ ಲೋಕಸಭೆಯಲ್ಲಿ ಸತತವಾಗಿ 4 ಬಾರಿ ಗೆದ್ದವರು ಸುರೇಶ್ ಅಂಗಡಿ.. ಈ ಮೂಲಕ 2004ರಿಂದಲೂ ಅಲ್ಲಿ ಬಿಜೆಪಿ ಬಾವುಟ ಹಾರಿಸಿದ್ದಾರೆ. ಆದ್ರೆ ಮಹಾಮಾರಿ ಕೊರೋನಾಗೆ ಸುರೇಶ್ ಅಂಗಡಿ ಬಲಿಯಾಗಿದ್ದರಿಂದ ಉಪಚುನಾವಣೆ ನಡೀತು. ಹೀಗಾಗಿ ಅನುಕಂಪದ ಅಲೆ ಕ್ಯಾಚ್ ಮಾಡೋಕೆ ಬಿಜೆಪಿ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿಯವ್ರನ್ನ ಕಣಕ್ಕಿಳಿಸ್ತು. ಇನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದು ಕೂಡಾ ಏನ್ ಮಾಮೂಲಿ ಅಭ್ಯರ್ಥಿಯನಲ್ಲ. ಸತೀಶ್ ಜಾರಕಿಹೊಳಿಯನ್ನ.. ಜಾರಕಿಹೊಳಿ ಕುಟುಂಬಕ್ಕೆ ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಹೆಸರಿದೆ. ಆದ್ರೂ ಕೂಡ ಸುರೇಶ್ ಅಂಗಡಿ ಸಾವಿನ ಅನುಕಂಪದ ಅಲೆಯಲ್ಲಿ ಸತೀಶ್ ಜಾರಕಿಹೊಳಿ ಕೊಚ್ಚಿಹೋಗಿರೋದು ಫಲಿತಾಂಶದಲ್ಲಿ ಕ್ಲಿಯರ್ ಆಗಿದೆ. ಆದ್ರೂ ಕೂಡ ರಮೇಶ್ ಜಾರಕಿಹೊಳಿ ವಿಡಿಯೋ ಲೀಕ್ ಆಗಿದ್ದು ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಅಂತ ಅಂದಾಜಿಸಲಾಗಿತ್ತು. ಆದ್ರೆ ಹಾಗಾಗಿಲ್ಲ.. ಬಿಜೆಪಿ ಗೆದ್ದಿದೆ.
-masthmagaa.com
Contact Us for Advertisement