masthmagaa.com:
ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತದಾರರಿಗೆ ಜಾಗೃತಿ ಮೂಡಿಸಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾನಾ ರೀತಿಯ ಪ್ರಯೋಗ ಮಾಡುತ್ತಿದೆ. ಅದರಲ್ಲೂ ಬೆಂಗಳೂರು ವ್ಯಾಪ್ತಿಯಲ್ಲಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರ ಭಾಗವಾಗಿ ಇದೀಗ ಬೆಂಗಳೂರು ಐಕಾನ್ಗಳೆಂದು ಐದು ಜನರನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಿ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳವುದು ಇವರ ಜವಾಬ್ದಾರಿ.
ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಮಾಡಿದಂತಹ ಪ್ರಮುಖ ವ್ಯಕ್ತಿಗಳನ್ನ ಗುರುತಿಸಿ ಬೆಂಗಳೂರು ಐಕಾನ್ ಹೆಸರಿನಲ್ಲಿ ಆಯ್ಕೆ ಮಾಡಲಾಗಿದೆ. ಬಾಲ್ಯದಿಂದಲೂ ಸಿನಿಮಾ ರಂಗದಲ್ಲಿ ಸಕ್ರೀಯರಾಗಿರುವ ಮಾಸ್ಟರ್ ಆನಂದ್ ಅವರನ್ನ ಹಾಗೂ ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾದಲ್ಲಿ ಜುಂಜಪ್ಪ ಗೀತೆಯನ್ನು ಹಾಡಿರುವ ಗಾಯಕ ಮೋಹನ್ ಕುಮಾರ್ ಅವರನ್ನ ಬೆಂಗಳೂರು ಐಕಾನ್ ಎಂದು ಬಿಬಿಎಂಪಿ ಗುರುತಿಸಿದೆ. ಸಿನಿಮಾ ಕ್ಷೇತ್ರದಿಂದ ಮಾಸ್ಟರ್ ಆನಂದ್ ಹಾಗೂ ಸಿಂಗರ್ ಮೋಹನ್ ಅವರನ್ನ ಆಯ್ಕೆ ಮಾಡಲಾಗಿದೆ. ಕಾಡುಗೊಲ್ಲರ ಹಾಡುಗಳನ್ನು ಹಾಡುತ್ತಾ ಜನಪ್ರಿಯತೆ ಪಡೆದ ಮೋಹನ್ ಅವರಿಗೆ ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಅತ್ಯುತ್ತಮ ಗಾಯಕ ಪ್ರಶಸ್ತಿ ನೀಡಿ ಗೌರವಿಸಿತ್ತು.
-masthmagaa.com
Contact Us for Advertisement